ಹಳಿಯಾಳ :
ಸತತ ಮೂರು ವರ್ಷದ ಬರಗಾಲದಿಂದ ಆರ್ಥಿಕವಾಗಿ ತತ್ತರಿಸಿದ ರೈತರ ಸಾಲವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು ಹಾಗೂ ಸಕ್ಕರೆ ಕಾರ್ಖಾನೆಯವರು ರೈತರ 2 ನೇ ಕಂತಿನ ಬಾಕಿ ಹಣವನ್ನು ಕೂಡಲೇ ನೀಡಬೇಕೆಂದು ಆಗ್ರಹಿಸಿ ಬುಧವಾರ ಪಟ್ಟಣದ ಶಿವಾಜಿ ವೃತ್ತದಲ್ಲಿ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ರಸ್ತಾರೊಖೋ ನಡೆಸಿ ಪ್ರತಿಭಟಿಸಿದರು.
ಕರ್ನಾಟಕ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ 153 ಒಕ್ಕೂಟಗಳಿಂದ ಹಾಗೂ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬುರ ಶಾಂತಕುಮಾರ ನೇತೃತ್ವದಲ್ಲಿ ಇಂದು ಕರೆ ನೀಡಿದ ಪ್ರತಿಭಟನೆ ಅಂಗವಾಗಿ ರಸ್ತಾರೋಖೋ ನಡೆಸಿದ ರೈತರು ಕೂಡಲೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಸ್ಥಳದಲ್ಲಿದ್ದ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಚರ್ಚಿಸಿದರು ಅಲ್ಲದೇ ರೈತರಿಗೆ ಒಂದು ವಾರದ ಒಳಗೆ ಕಾರ್ಖನೆಯ ನಿರ್ಣಯವನ್ನು ತಿಳಿಸುವ ಭರವಸೆ ನೀಡಿದರು.
ಆದರೇ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಹಾಗೂ ತಹಶೀಲ್ದಾರ್ ಅವರ ಮಾತನ್ನು ಆಲಿಸದ ರೈತರು ಈಗಾಗಲೇ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರು ಕೂಡ ತಮಗೆ ಪರಿಹಾರ ದೊರೆತಿಲ್ಲ ಆದ್ದರಿಂದ ಪ್ರತಿಭಟನೆ ನಿಲ್ಲದು ಎಂದು ರೈತರು ಪಟ್ಟು ಹಿಡಿದಾಗ ಪ್ರತಿಭಟನಾ ನಿರತ ರೈತರನ್ನು ಮುಂಜಾಗ್ರತಾ ಕ್ರಮವಾಗಿ ಪೋಲಿಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ರೈತರ ಬೇಡಿಕೆಗಳು:- ಸÀತತ ಮೂರು ವರ್ಷದ ಬರಗಾಲದಿಂದ ಆರ್ಥಿಕವಾಗಿ ತತ್ತರಿಸಿದ ರೈತರ ಕುಟುಂಬಕ್ಕೆ ಕುಟುಂಬ ನಿರ್ವಹಣಾ ಬಡ್ಡಿ ರಹಿತ ಸಾಲವನ್ನು ನಬಾರ್ಡನಿಂದ ನೀಡಬೇಕು, ಕಬ್ಬಿಗೆ ನೀಡಬೇಕಾದ 2 ನೇ ಕಂತಿನ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್ಗೆ ನೀಡಲಾಗುವ ಸಕ್ಕರೆ ಗುಣಮಟ್ಟದ್ದಾಗಿರಬೇಕು, ಈಗಾಗಲೇ ಧಾರವಾಡ ಕಲಘಟಗಿ ಬೆಳೆವಿಮೆ ರೈತರ ಖಾತೆಗೆ ಜಮೇ ಆಗಿದ್ದು ಆದರೇ ನಮ್ಮ ಜಿಲ್ಲೆಯ ರೈತರ ಖಾತೆಗೆ ಬೆಳೆವಿಮೆ ಜಮಾ ಕೂಡಲೇ ಆಗಬೇಕು, ಕಾಡಂಚಿನಲ್ಲಿರುವ ರೈತರ ಜಮೀನುಗಳಿಗೆ ಕಾಡುಪ್ರಾಣಿಗಳು ನುಗ್ಗಿ ಮಾಡುತ್ತಿರುವ ನಷ್ಟಕ್ಕೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಕಬ್ಬು ಬೆಳೆಗಾರ ಸಂಘದ ತಾಲೂಕಾಧ್ಯಕ್ಷ ಸುಭಾಷ ಪಾಟೀಲ್, ಮುಖಂಡರಾದ ಶಂಕರ ಕಾಜಗಾರ, ಯುಕೆ ಬೊಬಾಟಿ, ಅಶೋಕ ಮೇಟಿ, ಗಿರಿಶ ಟೊಸುರ ಮೊದಲಾದ ರೈತರು ಇದ್ದರು.
Leave a Comment