ಹೊನ್ನಾವರ ,ಶ್ರೀ ಕ್ಷೇತ್ರ ಧರ್ಮಸ್ದಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ ಇವರ ವತಿಯಿಂದ ಮೂಡ್ಕಣಿ ಹಾಗೂ ಹೆರಂಗಡಿ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಮೂಡ್ಕಣಿಯ ಶಂಭುಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ತಾಲೂಕ ಪಂಚಾಯತ್ ಸದಸ್ಯ ಲೊಕೇಶ ನಾಯ್ಕ ಮಾತನಾಡಿ ಸಂಘಟನೆ ಶಕ್ತಿ ಹಾಗೂ ಯೋಜನೆ ಕಾರ್ಯವೇಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಖ್ಯ ಅತಿಥಿಗಳಾಗಿ ಆಗಮಿಸಿ ಯೋಜನೆಯ ಯೋಜನಾಧಿಕಾರಿ ಎಂ.ಎಸ್.ಈಶ್ವರ್ ಮಾತನಾಡಿ ಯೋಜನೆ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಪದಗ್ರಹಣದ ಮಹತ್ವದ ಕುರಿತು ವಿವರಿಸಿದರು.
ಉಪನ್ಯಾಸಕರಾದ ಪ್ರಶಾಂತ ಮೂಡಲಮನೆ ಮಾತನಾಡಿ ಸಂಘಟನೆಯ ಶಕ್ತಿ ಹಾಗೂ ಪಾತ್ರದ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷ ರಾಜೇಶ್ವರಿ ಎಂ. ನಾಯ್ಕ, ಪಿ.ಟಿ.ನಾಯ್ಕ, ಚಂದ್ರಶೇಖರ್ ಕೋಚಡೆಕರ್, ಸುರೇಶನಾಯ್ಕ, ವಿನಾಯಕ ನಾಯ್ಕ, ರಾಜೇಶ ನಾಯ್ಕ ಉಪಸ್ದಿತರಿದ್ದರು.
ಮೇಲ್ವಿಚಾರಕ ರತ್ನಾಕರ ಸ್ವಾಗತಿಸಿ, ತಾರಾ ನಾಯ್ಕ ವಂದಿಸಿದರು. ಸೇವಾಪ್ರತಿನಿಧಿ ಮಹದೇವ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
Leave a Comment