ಹೊನ್ನಾವರ : ತಾಲೂಕಿನ ಜಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯ ರಸ್ತೆ, ಕುಡಿಯುವ, ನೀರು, ದಾರಿದೀಪ ಮುಂತಾದ ಸೌಕರ್ಯ ಸಿಗುತಿಲ್ಲಾ ಎಂದು ಸಾರ್ವಜನಿಕರು ಪಂಚಾಯತ ಅಧ್ಯಕ್ಷರಿಗೆ ಹಾಗೂ ಪಿ.ಡಿ.ಓ ಅವರಿಗೆ ತರಾಟೆಗೆ ತೆಗೆದುಕೊಂಡರು.
ಗ್ರಾಮ ಪಂಚಾಯತನಲ್ಲಿ ನಡೆದ ವಿಶೇಷ ಸಭೆಯಲ್ಲಿ ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸಿ ಶಾಸಕ ಮಂಕಾಳ ವೈದ್ಯರು ಪತ್ರಿಕೆಗಳಲ್ಲಿ ಎಲ್ಲಾ ಪಂಚಾಯತಗಳಿಗೆ 50 ಕೋಟಿ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ನಮ್ಮ ಭಾಗದಲ್ಲಿ ಯಾವ ಕೆಲಸ ಮಾಡಿದ್ದೀರಿ? ಈ ಬಗ್ಗೆ ನಮಗೆ ದಾಖಲೆ ತೋರಿಸಿ ಎಂದು ಪಿ.ಡಿ.ಓ ಬಳಿ ಪ್ರಶ್ನಿಸಿದರು, ಇದಕ್ಕೆ ಉತ್ತರಿಸಲಾಗದೆ ಅವರು ತಡಪಡಿಸಿದರು. ಪಿ.ಡಿ.ಓ ಮಾತನಾಡಿ ಆದಷ್ಟು ಬೇಗ ನಮ್ಮ ಪಂಚಾಯತನಿಂದ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದಾರಿ ದೀಪ ಮುಂತಾದ ವ್ಯವಸ್ಥೆಗಳನ್ನು ಮಾಡುತ್ತೇನೆ ಎಂದರು.
ನಂತರ ಶಾಸಕರ ಬೆಂಬಲಿಗರು ರಸ್ತೆ ಮಂಜೂರಿಯಾಗಿದೆ ಎಂದು ಹೇಳುತ್ತಾ ಇದ್ದಾರೆ, ಈ ಬಗ್ಗೆ ಮಾಹಿತಿ ಇದೆಯೆ ಎಂದು ಪಿ.ಡಿ.ಓ ಬಳಿ ಪ್ರಶ್ನಿಸಿದರು, ನಂತರ ಪಿ.ಡಿ.ಓ ಇಲ್ಲಾ ಯಾವುದೇ ಮಾಹಿತಿ ಬಂದಿಲ್ಲಾ ಎಂದರು, ಸದಸ್ಯರೊಬ್ಬರು ಲೋಕೋಪಯೋಗಿ ಇಲಾಖೆಗೆ ಪೋನ್ ಮಾಡಿ ಈ ಕುರಿತು ಮಾಹಿತಿ ಕೇಳಿದರು. ಪಿ.ಡಿ.ಓ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಹೌದು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಮಂಜೂರಾಗಿದೆ ಎಂದರು, ನಂತರ ಗ್ರಾಮಸ್ಥರು ಇದು ಶಾಸಕರ ನಿಧಿಯಲ್ಲ ಅದು ಸಂಸದರ ನಿಧಿಯಿಂದ ಮಂಜೂರಾಗಿದೆ ಎಂದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗೂ ಶಾಸಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಮಂಜು ಹಿರೆಹಿತ್ಲ, ಮಾಜಿ ಗ್ರಾ.ಪಂ ಸದಸ್ಯ ಗಜಾನನ ನಾಯ್ಕ, ಮೋಹನ ನಾಯ್ಕ, ತಿಪ್ಪಯ್ಯ ನಾಯ್ಕ ಮರಬಳ್ಳಿ, ರವಿ ತಿಮ್ಮಪ್ಪ ನಾಯ್ಕ, ರಾಘವೇಂದ್ರ ನಾಯ್ಕ, ರಾಜು ನಾಯ್ಕ ಮರಬಳ್ಳಿ, ಪುಟ್ಟ ನಾಯ್ಕ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
Leave a Comment