ಹಳಿಯಾಳ: ಜನ ಸಂದನಿಯಿಂದ ಕೂಡಿರುವ ಸ್ಥಳ, ಸಂತೆ, ಮಾರುಕಟ್ಟೆಗಳಲ್ಲಿ ತಮ್ಮ ಕೈಚಳಕದಿಂದ ಮೊಬೈಲ್ಗಳನ್ನು ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನನ್ನು ಬಂಧಿಸಿ ಆತನಿಂದ ಕಳ್ಳತನ ಮಾಡಿದ ಮೊಬೈಲ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಹಾನಗಲ್ ತಾಲೂಕಿನ ನವನಗರದ ನಿವಾಸಿ ಶ್ರೀನಿವಾಸ ಆನಂದ ಭದ್ರಾವತಿ ಯಾನೆ ವಡ್ಡರ ಎಂಬಾತನೇ ಮೊಬೈಲ್ ಕಳ್ಳನಾಗಿದ್ದು ದಿ.7 ರವಿವಾರದಂದು ಹಳಿಯಾಳದಲ್ಲಿ ವಾರದ ಸಂತೆ ಇರುವುದರಿಂದ ಅಲ್ಲಿ ಬಂದ ಕಳ್ಳ ತನ್ನ ಕೈಚಳಕದಿಂದ ಸುಮಾರು 40 ಸಾವಿರಕ್ಕೂ ಅಧಿಕ ಬೆಲೆ ಬಾಳುವ ವಿವಿಧ ಕಂಪೆನಿಗಳ ಸುಮಾರು 7 ಮೊಬೈಲ್ಗಳನ್ನು ದೊಚಿದ್ದ ಅಲ್ಲದೇ ಮತ್ತೇ ಕಳ್ಳತನಕ್ಕೆ ಹೊಂಚು ಹಾಕಿದ್ದ ಸಂದರ್ಭದಲ್ಲಿ ಮಾಹಿತಿ ಪಡೆದ ಹಳಿಯಾಳ ಠಾಣೆ ಎಎಸ್ಐ ಆನಂದ ಡಿ ಪಾವಸ್ಕರ ಅವರು ಸಿಬ್ಬಂದಿಗಳಾದ ಸಂಜು ಅಣ್ಣಿಗೇರಿ, ಮಲ್ಲಿಕಾರ್ಜುನ ನಾಯ್ಕ, ಪರಶುರಾಮ ನಾಗರಾಳ ಹಾಗೂ ಬಾಬು ದೇಸನೂರ ಅವರೊಂದಿಗೆ ಕಾರ್ಯಾಚರಣೆ ನಡೆಸಿ ಶ್ರೀನಿವಾಸನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು ಅಲ್ಲದೇ ಈ ವೇಳೆ ವಿಚಾರಣೆ ನಡೆಸಿದಾಗ ಆರೋಪಿಯು ಕಳ್ಳತನ ಒಪ್ಪಿಕೊಂಡಿದ್ದು ಎಗರಿಸಿದ ಮೊಬೈಲ್ಗಳನ್ನು ಆರೋಪಿಯಿಂದ ಪೋಲಿಸರು ವಶಕ್ಕೆ ಪಡೆದಿದ್ದು ಆರೋಪಿಯನ್ನು ಹಳಿಯಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.
Leave a Comment