ಹೊನ್ನಾವರ .ಮರಾಠ ಸಮುದಾಯದವರು ಸಜ್ಜನರು ಹಾಗೂ ಶೂರರು. ಜನಪದ ಕಲೆಗಳನ್ನು ಪೊತ್ಸಾಹಿಸುವ ಜೊತೆ ಕೃಷಿಗೆ ಹೆಚ್ಚು ಒತ್ತನ್ನು ನೀಡುತ್ತಾ ಬಂದಿದ್ದಾರೆ ಎಂದು ಕಾಂಗ್ರೇಸ್ ಯುವ ಮುಂಖಡ ರವಿಕುಮಾರ ಶೆಟ್ಟಿ ಅಭಿಪ್ರಾಯ ಪಟ್ಟರು.
ಹೊನ್ನಾವರ ತಾಲೂಕಿನ ತೊಳಸಾಣಿಯ ಆದಿಶಕ್ತಿ ಯುವಕ ಸಂಘ ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆ ಕಾರವಾರ ಇವರ ಆಶ್ರಯದಲ್ಲಿ ನಡೆದ 15ನೇ ವರ್ಷದ ವಾರ್ಷಿಕೊತ್ಸವ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 14 ವರ್ಷದಿಂದ ಅದ್ದೂರಿಯಾಗಿ ವಾರ್ಷಿಕೊತ್ಸವ ಆಚರಿಸುತ್ತಿದ್ದಿರಿ. ಎಲ್ಲಾ ಸಮುದಾಯದವರನ್ನು ಆಮಂತ್ರಿಸಿ ಪ್ರೀತಿಯಿಂದ ಸತ್ಕಾರ ಕಾರ್ಯ ಮಾಡುತ್ತಾ ಬಂದಿರುವುದನ್ನು ಗಮನಿಸಿದರೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಹೆಚ್ಚಾಗಿ ಕಾಡಿನ ಅಂಚಿನ ಪ್ರದೇಶದಲ್ಲಿ ಸಮುದಾಯವರೆಲ್ಲ ಒಂದಡೆ ವಾಸಿಸುವ ತಾವುಗಳು ಗ್ರಾಮಿಣ ಪ್ರದೇಶದಲ್ಲಿ ನೆಲ ಜಲ ಹಚ್ಚಹಸಿರಾಗಿರಲು ನಿಮ್ಮ ಪಾತ್ರವು ಇದೆ. ವಿಶೇಷವಾಗಿ ನಿಮ್ಮ ಸಮುದಾಯದಲ್ಲಿ ಇಂದಿನ ಯುವಕರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುತ್ತಿದ್ದಿರಿ. ಜೊತೆಗೆ ಜನಪದ ಕಲೆ ಅದರಲ್ಲೂ ಯಕ್ಷಗಾನ ಕಲೆಯನ್ನು ಪೊತ್ಸಾಹ ಮಾಡುವುದಲ್ಲದೆ ಸುಮಾರು ವರ್ಷದಿಂದ ಯಕ್ಷಗಾನ ಪ್ರದರ್ಶನ ನೀಡುತ್ತಾ ಬಂದಿದ್ದೀರಿ. ಕಳೆದ ಬಾರಿ ಈ ವೇದಿಕೆಯಲ್ಲಿ ನಾನು ನೀಡಿದ ಆಸ್ವಾಸನೆ ಈಡೆರಿಸಿದ್ದೇನೆ ಈ ಬಾರಿಯು ಇಲ್ಲಿಯ ರಸ್ತೆ 300 ಮೀಟರ್ ಡಾಂಬರಿಕರಣ ಮಾಡಲಾಗುವುದು ಎಂದರು.
ಉಪನ್ಯಾಸಕ ವಿಠ್ಠಲ ಭಂಡಾರಿ ಮಾತನಾಡಿ ಕಲೆಯನ್ನು ಬೆಳೆಸುವ ಜೊತೆ ಕಲಾವಿದರನ್ನು ಬೆಳಸುತ್ತಾ ಬಂದಿದ್ದೀರಿ. ಈ ಪ್ರದೇಶಕ್ಕೆ ಒಂದು ಸಮುದಾಯದ ಭವನದ ಅವಶ್ಯವಿದೆ. ಅದನ್ನು ಜನಪ್ರತಿನಿಧಿಗಳು ಒದಗಿಸಿದರೆ ಇನ್ನು ಹೆಚ್ಚಿನ ಕಲೆಯು ಪ್ರದರ್ಶನಗೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಯಕ್ಷಗಾನಹಿರಿಯ ಕಲಾವಿದರಾದ ದೇವು ಮರಾಠಿ ಮತ್ತು ಗಣೇಶ ಮರಾಠಿಯವರನ್ನು ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಯಕ್ಷಗಾನ ಕಲಾವಿದರಾದ ಗಣೇಶ ಭಂಡಾರಿ, ಕೃಷ್ಣ ಭಂಡಾರಿ, ಊರಿನ ಹಿರಿಯರಾದ ಆಲು ಮರಾಠಿ ಯುವಕ ಸಂಘದ ಅಧ್ಯಕ್ಷರಾದ ನಾರಾಯಣ ಮರಾಠಿ ಉಪಸ್ದಿತರಿದ್ದರು.
ಕಾರ್ಯಕ್ರಮವನ್ನು ಹರೀಶ ಮರಾಠಿ ಸ್ವಾಗತಿಸಿ ಉತ್ತಮ ಮರಾಠಿ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳ ಮನೊರಂಜನೆ ಕಾರ್ಯಕ್ರಮ ಹಾಗೂ ರಾಮಧಾನ್ಯ ಚರಿತ್ರೆ, ಧರ್ಮಾಂಗದ ವಿಜಯ, ಜಾಂಬವತಿ ಕಲ್ಯಾಣ ಪೌರಾಣಿಕ ಯಕ್ಷಗಾನ ಬಯಲಾಟ ನೇರವೇರಿತು
Leave a Comment