ಹೊನ್ನಾವರ: ಭಾರತದಲ್ಲಿ ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದು ಉಪನ್ಯಾಸಕ ಕೆ.ಎಸ್.ಹೆಗಡೆ ಹೇಳಿದರು.
ಚಿಕ್ಕೊಳ್ಳಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಧರ್ಮದ ಮೇಲೆ ಹಿಂದಿನಿಂದಲೂ ದಾಳಿಗಳು ನಡೆದಿತ್ತು. ಈಗಲೂ ನಡೆಯುತ್ತಿದೆ. ಆದರೆ ಧರ್ಮದ ಮೇಲಿನ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗುತ್ತಿದೆ. ಸರ್ಕಾರ ಮಾಡಬೇಕಾದ ಅದೆಷ್ಟೋ ಕಾರ್ಯಕ್ರಮಗನ್ನು ಜನಪರ ಯೋಜನೆಗಳನ್ನು ಧರ್ಮಸ್ಥಳ ಕ್ಷೇತ್ರವು ಅನುಷ್ಠಾನಗೊಳಿಸುತ್ತಿದೆ. ಧಾರ್ಮಿಕತೆಯೊಂದಿಗೆ ಉತ್ತಮ ಸಂಘಟನೆಗಳು ಹೊಮ್ಮಿದಾಗ ಅಭಿವೃದ್ಧಿ ಸಾಧ್ಯವಾಗುವುದು. ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದರು.
ಪತ್ರಕರ್ತ ಗೋಪಾಲಕೃಷ್ಣ ಭಟ್ಟ ಮಾತನಾಡಿ, ದೇವಾಲಯಗಳು ನಮ್ಮ ದೇಶದ ಸಂಸ್ಕøತಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ದೇವಾಲಯಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದಕ್ಕೆ ಸರ್ಕಾರ ಹಸ್ತಕ್ಷೇಪ ನಡೆಸಿ ಅಡ್ಡಿಪಡಿಸಬಾರದು. ಧರ್ಮಸ್ಥಳ ಕ್ಷೇತ್ರವು ಧಾರ್ಮಿಕ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸುತ್ತಿದೆ ಎಂದರು.
ಯೋಜನಾಧಿಕಾರಿ ಎಂ.ಎಸ್.ಈಶ್ವರ ಮಾತನಾಡಿ, ನಂಬಿಕೆಯೇ ದೇವರು, ಧಾರ್ಮಿಕ ಆಚರಣೆಯು ಜೀವನದ ಯಶಸ್ಸಿಗೆ ಪ್ರೇರಕವಾಗುವುದು. ಯೋಜನೆಯಿಂದ ಸಿಗುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗಣಪತಿ ವಿ. ನಾಯ್ಕ ಮಾತನಾಡಿ ಕೃಷಿ ಮತ್ತು ಗೋ ಸಂತತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.
ಜನಜಾಗೃತಿ ಸಮಿತಿ ಸದಸ್ಯ ಸತೀಶ ಶೇಟ್, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಮಾಧವ ಕೆ. ನಾಯ್ಕ, ದೇವಸ್ಥಾನ ಸಮಿತಿ ಅಧ್ಯಕ್ಷ ಶ್ರೀಧರ ಎಚ್. ನಾಯ್ಕ ಮಾತನಾಡಿದರು.
ಮೇಲ್ವಿಚಾರಕ ಸುಭಾಸ ಸ್ವಾಗತಿಸಿದರು. ರಮೇಶ ನಾಯ್ಕ ವಂದಿಸಿದರು. ಸೇವಾನಿರತ ತಿಮ್ಮಪ್ಪ ನಾಯ್ಕ ನಿರ್ವಹಿಸಿದರು. ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆ ನಡೆಯಿತು.
Leave a Comment