ಹೊನ್ನಾವರ: `
ಕರಾವಳಿ ಮತ್ತು ಮಲೆನಾಡು ಜನರ ಗಟ್ಟಿತನ ಏನು ಎನ್ನುವುದನ್ನು ತೋರಿಸ್ತೀವಿ ಬನ್ನಿ. ಧಮ್ ಇದ್ರೆ ನಿಮ್ಮ ಸರ್ಕಾರವನ್ನು ಉಳಿಸಿಕೊಳ್ಳಿ. ಅಖಾಡ ಸಿದ್ಧವಾಗಿದೆ. ಬನ್ನಿ ಅಖಾಡಕ್ಕಿಳಿಯಲು. ಚಾಮುಂಡಿ ಕ್ಷೇತ್ರಕ್ಕೇ ಬರುತ್ತೇನೆ, ವೇದಿಕೆ ಸಿದ್ಧಮಾಡಿ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸವಾಲು ಹಾಕಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜನ ಸುರಕ್ಷಾ ಪಾದ ಯಾತ್ರೆ ಬಳಿಕ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಭಾನುವಾರ ನಡೆದ ಜನ ಸುರಕ್ಷಾ ಸಭಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬುದ್ದಿಜೀವಿಗಳು ಎಂದು ಹೇಳಿಕೊಳ್ಳುವ ಎಡಬಿಡಂಗಿಗಳಿಗೆ ಹಿಂದುಗಳ ಹತ್ಯೆಯಾದರೆ ಕಣ್ಣಲ್ಲಿ ನೀರು ಬರುವುದಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರದು ಜಾತಿ-ಜಾತಿಗಳಲ್ಲಿ ವಿಷ ಬೀಜ ಬಿತ್ತುವ ಬ್ರಿಟಿಷರನ್ನು ಮೀರಿಸುವ ಒಡೆದು ಆಳುವ ನೀತಿ. ಜೈಲಲ್ಲಿರುವ ಅಲ್ಪಸಂಖ್ಯಾತ ಅಪರಾಧಿಗಳೆಲ್ಲರೂ ಮುಗ್ದರು, ಅವರನ್ನೆಲ್ಲಾ ಬಿಡುಗಡೆ ಮಾಡಬೇಕು ಎಂದು ಹೇಳುತ್ತಾರೆ. ಅಪರಾಧಿಗಳನ್ನು ಬಿಡುಗಡೆಗೊಳಿಸಿ ಅವರ ಕೈಗೆ ಆಯುಧ ನೀಡಿ ಬರುವ ಚುನಾವಣೆಯಲ್ಲಿ ಆತಂಕ ಸೃಷ್ಠಿಸುವ ಸಂಚುಹೂಡಿದ್ದಾರೆ. ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕವಾಗಲಿದೆ. ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹಿಂದೆಂದೂ ಕಂಡರಿಯದ ಅಪರಾಧಿಕೃತ್ಯಗಳು ನಡೆದಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟುಹೋಗಿದೆ. ಜನರ ರಕ್ತ ಹೀರುವ ಮತಿಗೇಡಿ ಸರ್ಕಾರವನ್ನು ಕಿತ್ತೊಗೆದು ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕಿಡಿ ಕಾರಿದರು. ಎಲ್ಲೀ ತನಕ ಧರ್ಮ ವಿರೋಧಿ ಸರ್ಕಾರರವನ್ನು ಕಿತ್ತೆಸೆಯುವುದಿಲ್ಲವೋ ಅಲ್ಲೀ ತನಕ ಕರ್ನಾಟಕದಲ್ಲಿ ಆಂದೋಲನ ಮುಂದುವರಿಯುತ್ತದೆ. ನಮ್ಮದು ಆದರ್ಶ ಸರ್ಕಾರ ಎನ್ನುವ ಇವರು ಅಪರಾಧಿಗಳನ್ನು ಪಕ್ಕದಲ್ಲೇ ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ಅಮಾಯಕರ ಹಿಂದೂಗಳ ಮಾರಣ ಹೋಮವಾಗಿದೆ. ರಾಜ್ಯದಲ್ಲಿ 3872 ಅತ್ಯಾಚಾರ ಪ್ರಕರಣ ನಡೆದಿದೆ. 35 ಸಾವಿರಕ್ಕೂ ಹೆಚ್ಚು ಚೀಟಿಂಗ್ ಪ್ರಕರಣ ನಡೆದಿದೆ. 11775 ಅಪಹರಣ ಪ್ರಕರಣಗಳು ನಡೆದಿವೆ. ಇಡೀ ಕರ್ನಾಟಕದ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಬಿದ್ದ ರಕ್ತಕ್ಕೆ ಅಲ್ಲಲ್ಲೇ ತಕ್ಕ ಉತ್ತರ ಕೊಡುತ್ತಿದ್ದೆವು. ಆದರೆ ಸÀಭ್ಯತೆಯನ್ನು ಮೀರಬಾರದು ಎಂದು ಸುಮ್ಮನೆ ಇದ್ದೇವೆ. ಇತಿಹಾಸದಲ್ಲಿ ಹಿಂದೆಂದೂ ಕಾಣದ ದೇನಾಸಿ ಸರ್ಕಾರ ಇದಾಗಿದೆ ಎಂದರು.-
ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ರಾಷ್ಟ್ರದ ಬಗ್ಗೆ ಗೌರವವನ್ನು ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಬ್ರಷ್ಟ ಕಾಂಗ್ರೆಸ್ ಪಕ್ಷದಲ್ಲಿ ವಂದೇ ಮಾತರಂ, ಬೋಲೋ ಭಾರತ ಮಾತಾಕಿ ಜೈ ಎಂದರೆ ಹೊರಗೆ ಹಾಕುತ್ತಾರೆ. ರಾಜ್ಯದಲ್ಲಿ ಔರಂಗಜೇಬನ ಕಾಲದ ತುಗಲಕ್ ದರ್ಬಾರ್ ನಡೆಸಲಾಗುತ್ತಿದ್ದು ಇದು ಗೂಂಡಾ ಸರ್ಕಾರವಾಗಿದೆ. ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಪೊಲೀಸ್ ಉನ್ನತಾಧಿಕಾರಿಗಳ ಪತ್ನಿ ಕಾಂಗ್ರೆಸ್ ಮುಖಂಡೆಯಾಗಿದ್ದು, ಟಿಕೆಟ್ಗೆ ಪ್ರಯತ್ನಿಸುತ್ತಿದ್ದಾರೆ. ಇಂತವರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವೇ? ಎಂದು ವ್ಯಂಗ್ಯವಾಡಿದ ಅವರು ಇಂತಹ ಸರ್ಕಾರವನ್ನು ಕಿತ್ತೆಸೆದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಅಖಂಡ ಭಾರತ ತಲೆಯೆತ್ತಿ ನಿಲ್ಲಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಪಕ್ಷದಲ್ಲಿ ಟಿಕೆಟ್ ಯಾರಿಗೆಂದು ಕೇಳುತ್ತಾರೆ. ಕಮಲದ ಹೂವೆ ನಮ್ಮ ಪಕ್ಷದ ಅಭ್ಯರ್ಥಿ ಎಂದು ಕೆಲಸ ಮಾಡಿ ಎಂದು ಕರೆ ನೀಡಿದರು.
ಪರೇಶ ತಂದೆ ಕಮಲಾಕರ ಮೇಸ್ತ ಮಾತನಾಡಿ ಅನ್ಯ ಕೋಮಿನವರ ಕೈಗೆ ತಲ್ವಾರನ್ನು ಕೊಟ್ಟು ನಮ್ಮ ಹಿಂದು ಜನರನ್ನು ಹತ್ಯೆಮಾಡಲು ಮುಂದಾಗುತ್ತಿದ್ದಾರೆ. ರಾಜ್ಯದಲ್ಲಿ 23 ಹಿಂದು ಯುವಕರ ಹತ್ಯೆಯಾಗಿದ್ದು ರಾಜ್ಯ ಸರ್ಕಾರ ಹಿಂದುಗಳ ಮೇಲೆ ದೌರ್ಜನ್ಯವೆಸಗುತ್ತಿದೆ. ಪೊಲೀಸರು ಮಧ್ಯರಾತ್ರಿ ಹಿಂದು ಯುವಕರನ್ನು ಬಂಧಿಸಿದ್ದಾರೆ. ಧರ್ಮದ ರಕ್ಷಣೆಗಾಗಿ ತಿಲಕವನ್ನಿಟ್ಟು ಹೊರಗೆ ಹೋಗಬೇಕು. ಧರ್ಮ ರಕ್ಷಣೆಗಾಗಿ ಎಚ್ಚೆತ್ತುಕೊಳ್ಳಬೇಕು ಎಂದು ಕರೆಕೊಟ್ಟರು. ಪಟ್ಟಣದ ಶರಾವತಿ ಸರ್ಕಲ್ನಿಂದ ಆರಂಭವಾದ ಬೃಹತ್ ಶೋಭಾಯಾತ್ರೆ ಶ್ರೀ ಶನೇಶ್ಚರ ದೇವಾಲಯದ ಮಾರ್ಗವಾಗಿ ದುರ್ಗಾಕೇರಿಯ ಶ್ರೀ ದಂಡಿನದುರ್ಗಾ ದೇವಸ್ಥಾನ ಬಜಾರರಸ್ತೆ ಮೂಲಕ ಪರೇಶ ಮೇಸ್ತ ಸರ್ಕಲ್ ಬಳಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ `ಪರೇಶ ಸರ್ಕಲ್’ ಬಳಿ ಪರೇಶ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ ಜಿ ಸೇರಿ 4 ಸಾವಿರಾರು ಹಿಂದು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು, ಮಾಜಿ ಶಾಸಕರಾದ ದಿನಕರ ಶೆಟ್ಟಿ, ಸುನಿಲ್ ಹೆಗಡೆ, ಮುಖಂಡರಾದ ಡಾ. ಎಂ.ಪಿ.ಕರ್ಕಿ, ಲೋಕೇಶ ಮೇಸ್ತ, ಉಮೇಶ ನಾಯ್ಕ, ವೆಂಕಟ್ರಮಣ ಹೆಗಡೆ, ಸೂರಜ್ ನಾಯ್ಕ ಸೋನಿ, ಸುನಿಲ್ ನಾಯ್ಕ, ನಾಗರಾಜ ನಾಯಕ ತೊರ್ಕೆ, ಯಶೋಧರ ನಾಯ್ಕ, ಎಂ.ಜಿ.ನಾಯ್ಕ, ಡಾ. ಜಿ.ಜಿ.ಹೆಗಡೆ, ವಿನೋದ ನಾಯ್ಕ ರಾಯಲಕೇರಿ, ಶ್ರೀಕಲಾ ಶಾಸ್ತ್ರೀ, ಸುಬ್ರಹ್ಮಣ್ಯ ಶಾಸ್ತ್ರೀ, ಗಾಯತ್ರಿ ಗೌಡ, ತಾಲೂಕಾಧ್ಯಕ್ಷ ಸುಬ್ರಾಯ ನಾಯ್ಕ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ರಾಜು ಭಂಡಾರಿ, ಮಂಜುನಾಥ ನಾಯ್ಕ ಇತರರು ಇದ್ದರು. ಸಭಾಕಾರ್ಯಕ್ರಮದ ಪೂರ್ವದಲ್ಲಿ ಮಡಿದ ಡಾ. ಚಿತ್ತರಂಜನ್, ತಿಮ್ಮಪ್ಪ ನಾಯ್ಕ, ಪರೇಶ ಮೇಸ್ತಾ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ರೇಖಾ ಹೆಗಡೆ ಅವರು ವಂದೇ ಮಾತರಂ ಗೀತೆ ಹಾಡಿದರು.
Leave a Comment