ಹೊನ್ನಾವರ: ದಾವಣಗೇರಿಯಲ್ಲಿ ಏಪ್ರೀಲ್ 14 ಮತ್ತು 15 ರಂದು 3 ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 10 ವಿದ್ಯಾರ್ಥಿಗಳು ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಕತಾ ಮತ್ತು ಕಮಟೆ ವಿಭಾಗದಲ್ಲಿ ಪ್ರಥಮ ಸ್ದಾನವನ್ನು ಋತ್ವೀಕ ಶಂಕರ ಮೆಸ್ತ, ಕೀರ್ತನಾ ಜಿ. ನಯ್ಕ, ವಿಶ್ವ ಹೆಗಡೆ ಸಾಧನೆ ಮಾಡಿದರೆ, ದ್ವೀತಿಯ ಸ್ದಾನವನ್ನು ಸಮರ್ಥ ಪಿ. ಕೊಪ್ಪಲ್, ಅಥರ್ವ ಉದಯ ಪಟಗಾರ, ಶ್ರೀನಿಕೇತನ, ಪ್ರಹ್ಲಾದ್ ಜಿ.ನಾಯ್ಕ, ವಿನಾಯಕ ಸಾಧನೆ ಮಾಡಿದ್ದಾರೆ. ತೃತೀಯ ಸ್ದಾನವನ್ನು ವಿಘ್ನರಾಜ, ಅನೀಶ ಸಾಧನೆ ಮಾಡಿದ್ದಾರೆ.
ಈ ಎಲ್ಲಾ ಸಾಧನೆಗಗಿ ತರಬೇತಿದಾರರಾದ ಸೆನ್ಸಾಯಿ ರಾಜೇಶ ಪಟಗಾರ ಮಕ್ಕಳ ಸಾಧನೆಯಲ್ಲಿ ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Leave a Comment