ಹೊನ್ನಾವರ: ಕುಮಟಾ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಬ್ರಹತ್ ಪಾದಯಾತ್ರೆಗೆ ಶ್ರೀ ಋಷಿಕುಮಾರ ಸ್ವಾಮಿಜಿ ಸಾಥ್ ನೀಡಿದರು,
ಪಟ್ಟಣದ ದಂಡಿನದುರ್ಗಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಸೂರಜ್ ದಂಪತಿಗಳು ತಮ್ಮ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆಯ ಮೂಲಕ ಪಟ್ಟಣದ ಬಜಾರ್ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಿ ಶರಾವತಿ ಸರ್ಕಲ್ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಸೂರಜ್ ನಾಯ್ಕ ಸೋನಿ ಮಾತನಾಡಿ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಯಾವುದೇ ಜನಪರ ಕೆಲಸವಾಗುತ್ತಿಲ್ಲ. ಕೇವಲ ಹಣ ಲೂಟಿ ಮಾಡುವಂತಹ ಕೆಲಸವಾದ ರಸ್ತೆ, ಸೇತುವೆ, ಹಾಗೂ ಒಳಚರಂಡಿ ಕೆಲಸಗಳು ಕಳಪೆ ಮಾಡಿ ಕಮೀಷನ ಹೊಡೆಯುತ್ತಿದ್ದಾರೆ. ಅದೇ ಕಮೀಷನ್ ಹಣವನ್ನು ಚುನಾವಣೆ ಸಂದರ್ಭದಲ್ಲಿ ಹಂಚಿಕೆ ಮಾಡುತ್ತಾರೆ ಎಂದು ಶಾಸಕಿ ಶಾರದಾ ಶೆಟ್ಟಿ ಮೇಲೆ ವಾಗ್ದಾಳಿ ಮಾಡಿದರು. ನಾನು ಹಿಂದು ಹೋರಾಟಗಾರ ಗೋಪ್ರೇಮಿ ಹಿಂದುತ್ವ ಹೋರಾಟದ ಸಮಯದಲ್ಲಿ ಮಾತ್ರ ನನ್ನ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊರತು ನನ್ನ ಮೇಲೆ ಯಾವುದೇ ಕ್ರೀಮಿನಲ್ ಪ್ರಕರಣಗಳಿಲ್ಲ. ಗೋ ರಕ್ಷಣೆ ಮಾಡಿದ ನನಗೆ ಜೀವ ಬೆದರಿಕೆ ಹಾಕಲಾಗಿತ್ತು. ಕಳೆದ ಚುನಾವಣೆಯಲ್ಲಿ ನಾನು ಕ್ಷೇತ್ರದ ಜನತೆಗೆ ಚಿರಪರಿಚಿತನಾದರೂ ಕೆಲವೇ ಮತದ ಅಂತರದಿಂದ ಸೋಲನ್ನು ಅನುಭವಿಸಿದೆ. ಆದರೆ ಕ್ಷೇತ್ರದ ಜನತೆಗೆ ನಾನು ಈಗ ಚಿರಪರಿಚಿತ. ಜೊತೆಗೆ ಅವರ ಸಮಸ್ಯೆಯನ್ನು ನಾನು ಆಲಿಸಿ ಪರಿಹರಿಸಲು ಹೋರಾಟ ಮಾಡಿದ್ದೇ ಆದರಿಂದ್ದ ಈ ಬಾರಿ ನನ್ನನ್ನು ಬೆಂಬಲ ನೀಡುತ್ತಾರೆ. ನಾನು ಕ್ಷೇತ್ರದಲ್ಲಿ ಮತಯಾಚನೆಗೆ ಪಾದಯಾತ್ರೆ ನಡೆಸಿದಾಗ ಸೇರಿದ ಅಪಾರ ಜನಸಮೋಹ, ಯುವ ಜನಾಂಗದ ಗಮನಿಸಿದರೆ ನನ್ನ ಗೆಲವು ನಿಶ್ಚಿತ. ನಾನು ಈ ದಿನ ಜನ ನನ್ನ ಮೇಲಿನ ಪ್ರೀತಿ ಹಾಗೂ ಅಭಿಮಾನದಿಂದ ಬಂದಿದ್ದು ಊಳಿದ ನಾಯಕರಂತೆ ಹಣ ಕೊಟ್ಟು ತಂದಿದ್ದಲ್ಲ ಎಂದರು. ಕಳೆದ 20 ವರ್ಷದಿಂದ ಕ್ಷೇತ್ರದಲ್ಲಿ ಒಂದೆ ಕುಟುಂಬದವರು ಅಧಿಕಾರ ನಡೆಸುತ್ತಿದ್ದಾರೆ. ಆದರೆ ಯಾವುದೇ ಅಭಿವೃದ್ದಿ ಮಾಡಿಲ್ಲ. ಈ ಬಾರಿ ಸತ್ಯ, ಧರ್ಮ, ನ್ಯಾಯಕ್ಕಾಗಿ ಕ್ಷೇತ್ರದ ಅಭಿವೃದ್ದಿಗಾಗಿ ಕ್ಷೇತ್ರದ ಜನತೆ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
ಶ್ರೀ ಋಷಿಕುಮಾರ ಸ್ವಾಮಿಜಿ ಮಾತನಾಡಿ ಸೂರಜ್ ನಾಯ್ಕ ಸೋನಿ ಅನೇಕ ಹಿಂದೂ ಪರ ಹೋರಾಟದಲ್ಲಿ ಮುಂಚೂನೆಯಲ್ಲಿ ನಿಂತ ಯುವ ನಾಯಕ. ಇವರು ಗೋಮಾತೆಯ ರಕ್ಷಣೆಗಾಗಿ ಸೆರಮನೆ ಸೆರೆದರು ಹೋರಾಟ ಮಾಡುತ್ತಲೆ ಇದ್ದಾರೆ. ತಮ್ಮ ವೈಯಕ್ತಿಕ ಹಿತಾಶಕ್ತಿಗಾಗಿ ಕ್ರಿಮಿನಲ್ ಕೇಸಗಳನ್ನು ಹಾಕಿಕೊಂಡವರಲ್ಲ. ಗೋರಕ್ಷಣೆಗಾಗಿ ಹೋಗಿ ಷಡ್ಯಂತ್ರದ ಮೇಲೆ 307 ಪ್ರಕರಣ ದಾಖಲಿಸಾಯಿತು ಹಿಂದು ಧರ್ಮದ ಕೇಸರಿ ಬಾವುಟ ನಡುವೆ ಆಟೋರಿಕ್ಷಾ ಕಂಗೋಳಿಸುತ್ತಿರುವುದು ಧರ್ಮ ರಕ್ಷಣೆಯ ಸಂಕೇತವಾಗಿದೆ. ಈ ಕ್ಷೇತ್ರದಲ್ಲಿ ಅಧರ್ಮ ತಾಂಡವಾಡುತ್ತಿದೆ. ಘಟನೆಯೊಂದರಲ್ಲಿ ನೊಂದ ಕುಟುಂಬಕ್ಕೆ ಮೊದಲು ಬಂದು ಜೊತೆಯಾದವರು ಸೂರಜ್ ಸೋನಿ. ಅದು ಎಲ್ಲರಿಗೂ ತಿಳಿದಿದೆ. 307ಕೇಸ್ ದಾಖಲಿಸಿ ಟಿಕೇಟ್ ತಪ್ಪಿಸಲು ಷಡ್ಯಂತ ನಡೆಸಲಾಯಿತು. ಧರ್ಮ ಹಾಗೂ ಗೋ ರಕ್ಷಣೆ ಮಾಡಿದ ಯುವಕನಿಗೆ ಟಿಕೇಟ್ ತಪ್ಪಿಸಲಾಗಿದೆ. ಮೋದಿಯ ಭಾವಚಿತ್ರವನ್ನು ಕಿತ್ತು ಕಾಲಡಿ ತುಳಿದವರಿಗೆ ಈಗ ಪಕ್ಷದ ಟಿಕೇಟ್ ನೀಡಲಾಗಿದೆ. ಎಂದು ಬಿಜೆಪಿಯ ಅಭ್ಯರ್ಥಿ ಕುರಿತು ಅಸಮಾಧಾನ ಹೊರಹಾಕಿದರು. ಕಾಂಗ್ರೇಸ್ ಸರ್ಕಾರ ಹಿಂದೂ ಧರ್ಮವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಜಾತಿರಾಜಕಾರಣ ಮಾಡುತ್ತಿದ್ದಾರೆ. ಸೂರಜ್ ನಾಯ್ಕ ಸೋನಿ ಮೋದಿ ವಿರೋಧಿಗಳಲ್ಲ. ಅವರ ಆತ್ಮದಲ್ಲಿ ಮೋದಿಯೇ ನೆಲೆಸಿದ್ದಾರೆ ಆದರೆ ಧರ್ಮದ ರಕ್ಷಣೆಗಾಗಿ ಹಾಗೂ ಗೋರಕ್ಷಣೆಗೆ ಮುಂದಾಳತ್ವ ವಹಿಸಿರುವ ಸುರಜ್ ಸೋನಿ ಪರ ಎಲ್ಲರ ಒಲವಿದೆ. ಇಡಿ ಸಮಾಜದ ಒಳಿತಾಗಿ ಹೋರಾಡುವ, ಪ್ರಗತಿಯ ಚಿಂತನೆಯ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಗೆದ್ದರೆ ಎಲ್ಲ ಸಮಾಜದ ಗೆಲುವಾಗುತ್ತದೆ. ಮತ ನೀಡಿ ಗೆಲ್ಲಿಸಿ ಮನವಿ ಮಾಡಿದರು. ಸಾವಿರಾರು ಯುವಕರು ಅಭಿಮಾನದಿಂದ ಸೋನಿ ಮುಖವಾಡ ಧರಿಸಿ ಸೋನಿ ಪರ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದರು.
ಮುಖಂಡರಾದ ವಿನೋದ ನಾಯ್ಕ ರಾಯಲಕೇರಿ, ಜಗದೀಶ ನಾಯ್ಕ, ಅಜಿತ್ ನಾಯ್ಕ, ವಿನಾಯಕ ಆಚಾರಿ, ಟಿ.ಎಸ್.ನಾಯ್ಕ, ನ್ಯಾಯವಾದಿ ಸೂರಜ್ ನಾಯ್ಕ, ಗ್ರಾ.ಪಂ. ಸದಸ್ಯೆ ಸಾಧನ ನಾಯ್ಕ, ಇತರರು ಮೆರೆವಣೆಯಲ್ಲಿ ಭಾಗವಹಿಸಿದ್ದರು.
Leave a Comment