ಹೊನ್ನಾವರ: ಸಾರ್ವಜನಿಕರ ಬಹುದಿನದ ಬೇಡಿಕೆಯಾದ ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ನಿರ್ಮಿಸಲು ಕಾರ್ಯೊನ್ಮುಖವಾಗಿರುವ ಶಾಸಕ ದಿನಕರ ಶೆಟ್ಟಿಯವರು ಪಟ್ಟಣದ ಬಂದರು ಪ್ರದೇಶದಲ್ಲಿ ಬಂದರು ಇಲಾಖೆಯ ಸ್ಥಳವನ್ನು ಸೂಕ್ತವೆಂದು ಪರಿಶೀಲನೆ ನಡೆಸಿದರು. ನಂತರ ಇದಕ್ಕೆ ಸಂಭಂದಿಸಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಬಸ್ ಡಿಪೋ ನಿರ್ಮಾಣಕ್ಕೆ ಅನುವು ಮಾಡಿಕೊಡಬೇಕೆಂದು ಹೇಳಿದರು. ಬಂದರು ಅಧಿಕಾರಿ ದೀಪಕ್ ಅವರನ್ನು ಕರೆಯಿಸಿ ಸ್ಥಳದ ದಾಖಲೆ ಪತ್ರವನ್ನು ಸಿದ್ದಪಡಿಸಲು ಸೂಚಿಸಿದರು.
ಈ ಬಗ್ಗೆ ಕೇಂದ್ರ ಕೌಶಲ್ಯಾಭಿವ್ರದ್ದಿ ಹಾಗೂ ಉದ್ಯಮಶೀಲತಾ ಸಚಿವ ಅನಂತಕುಮಾರ್ ಹೆಗಡೆ ಅವರ ಬಳಿ ಈಗಾಗಲೇ ಚರ್ಚಿಸಿದ್ದು ಅವರ ಅಧ್ಯಕ್ಷತೆಯಲ್ಲಿ ಜೂ.26 ರಂದು ನಡೆಯುವ ಕೆ.ಡಿ.ಪಿ ಸಭೆಯಲ್ಲಿ ಬಸ್ ಡಿಪೋ ನಿರ್ಮಾಣದ ರೂಪುರೇಷೇ ಸಿದ್ದಪಡಿÀಸಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಲೊಕೇಶ ಮೇಸ್ತ, ಉಮೇಶ್ ನಾಯ್ಕ, ಎಮ್.ಎಸ್. ಹೆಗಡೆ ಕಣ್ಣಿಮನೆ, ಮಾಜಿ ಪ.ಪಂ ಅಧ್ಯಕ್ಷ ಸದಾನಂದ ಭಟ್ಟ, ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ , ಪ.ಪಂ ಸದಸ್ಯರಾದ ನಾಗೇಶ್ ಮೇಸ್ತ, ಸುರೇಶ್ ಶೇಟ್, ಬಂದರು ಅಧಿಕಾರಿಗಳು ಉಪಸ್ಥಿತರಿದ್ದರು.
Leave a Comment