ಹೊನ್ನಾವರ : ಕರ್ಕಿ ದೈವಜ್ಞ ಬ್ರಾಹ್ಮಣ ಮಠಾಧಿಶ್ವರ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ತಮ್ಮ 33 ನೇ ಚಾತುರ್ಮಾಸ್ಯ ವ್ರತವನ್ನು ಗೋವಾದ ಶ್ರೀ ಶಾಂತಾದುರ್ಗಾ ಸಾಂಗೋಡ್ಕರೀನ್ ದೇವಸ್ಥಾನ ಸಭಾಗೃಹದಲ್ಲಿ ಜುಲೈ. 27 ರ ವ್ಯಾಸ ಪೂರ್ಣಿಮೆಯಿಂದ ಸ, 25 ರ ಭಾದ್ರಪದ ಪೂರ್ಣಿಮೆವರೆಗೆ 2 ತಿಂಗಳ ಕಾಲ ಆಚರಿಸಲಿದ್ದಾರೆ.
ಶ್ರೀ ಶಾಂತಾದುರ್ಗಾ ಸಾಂಗೋಡ್ಕರೀ ಸಂಸ್ಥಾನ ಹಾಗೂ ಶ್ರೀ ಮಹಾಮಾಯಾ ಕಾಲಿಕಾ ಸ್ವಯಂಸೇವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ನಡೆಯುವ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪ್ರತಿ ದಿನ ಬೆಳಿಗ್ಗೆ 11.30 ರಿಂದ ಸಾಮೂಹಿಕ ಪಾದುಕಾ ಪೂಜೆ, ಮಧ್ಯಾಹ್ನ 1 ಘಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ಹಾಗೂ ಮಹಾಪ್ರಸಾದ, ಸಂಜೆ 5 ಘಂಟೆಯಿಂದ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಪಠಣ, ಸಾಂಸ್ಕøತಿಕ ಕಾರ್ಯಕ್ರಮ , ಭಜನೆ, ಕಿರ್ತನೆ ಮತ್ತು ಸಂಗೀತ ರಾತ್ರಿ 7.30 ರಿಂದ ಶ್ರೀ ಜ್ಞಾನೇಶ್ವರಿ ಪರಿವಾರ ದೇವರ ಸಾಯಂಕಾಲ ಪೂಜೆ ಮತ್ತು ಶ್ರೀಗಳಿಂದ “ಕಥೋಪದೇಶ” ಮುಂತಾದ ಕಾರ್ಯಕ್ರಮಗಳಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೇವಾಕಾರ್ಯದಲ್ಲಿ ಪಾಲ್ಗೊಂಡು ಜಗನ್ಮಾತೆ ಶ್ರೀ ಜ್ಞಾನೇಶ್ವರಿ ದೇವಿಯ ಹಾಗೂ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಾಹಾಸ್ವಾಮಿಗಳವರ ಕೃಪಾರ್ಶಿವಾದಕ್ಕೆ ಪಾತ್ರರಾಗಬೇಕಾಗಿ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಪ್ರಮೋದ ಟಿ. ಸಾಂಗೋಡ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment