ಹೊನ್ನಾವರ; ತಾಲೂಕಿನ ಮಂಕಿ ಗ್ರಾಮದ ಬೊಳೆ ಬಸ್ತಿಯಲ್ಲಿ ಮಳೆಯ ನೀರಿನಿಂದ ನದಿಯ ಕಟ್ಟು ಮುರಿದು ನೂರಾರು ಎಕೆರೆ ಕೃಷಿ ಭೂಮಿ ನಾಶಗೊಂಡು ರೈತರು ಪರದಾಡುವಂತಾಗಿದೆ.
ಹೊನ್ನಾವರ ತಾಲೂಕಿನ ಮಂಕಿ ಗ್ರಾಮವು ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ದೊಡ್ಡ ಗ್ರಾಮ. ಹಿಂದೆ ಒಂದೇ ಗ್ರಾಮವಾಗಿದ್ದ ಈ ಗ್ರಾಮ ನಾಲ್ಕು ಗ್ರಾಮಗಳಾಗಿ ಬೇರ್ಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚಿನ ಜನಸಂಖೈ ಹೊಂದಿರುವ ಗ್ರಾಮ ಈಗ ಮಂಕಿ ಗುಳದಕೇರಿ, ಚಿತ್ತಾರ, ಹಳೇಮಠ ಹಾಗೂ ಅನಂತವಾಡಿ ಗ್ರಾಮಗಳಾಗಿವೆ.
ಕ್ರಷಿಕರು ಹಾಗೂ ಕುಲಿಕಾರರು ಹೆಚ್ಚಿರುವ ಇ ಗ್ರಾಮದಲ್ಲಿ ರೈತರು ಮಳೆಗಾಲದಲ್ಲಿ ಭತ್ತ ಹಾಗೂ ಬೇಸಿಗೆಗಾಲದಲ್ಲಿ ಶೇಂಗಾ ಬೆಳೆ ಬೆಳೆಯುತ್ತಾರೆ.
ಮಂಕಿ ಅನಂತವಾಡಿಯಿಂದ ಹರಿದು ಬಂದ ಹಳ್ಳದ ನೀರು ಕುಂಬಾರಕೇರಿಯ ಬೋಳೆಬಸ್ತಿಯಿಂದ ದೊಳ್ಳ ಹಳ್ಳವಾಗಿ ಸಮುದ್ರಕ್ಕೆ ಸೇರುತ್ತದೆ. ಇ ದೊಡ್ಡ ಹಳ್ಳದ ಅಕ್ಕ ಪಕ್ಕದಲ್ಲಿರುವ ಅನೇಕ ಮಜರೆಗಳಿವೆ. ಬೋಳೆ ಬಸ್ತಿ, ಕುಂಬಾರಕೇರಿ, ಗುಳದಕೇರಿ,ದೊಡಗುಂದಾ, ಗುಂದಾ.ಸಣಗುಂದಾ ಹಾಗೂ ಅನೇಕ ಗ್ರಾಮಗಳು. ಸಾವಿರಾರು ರೈತರು ಕ್ರಷಿ ಬೂಮಿಯನ್ನೆ ನಂಬಿ ಜಿವನ ಮಾಡುತ್ತಿ
ಪ್ರತಿವರ್ಷವು ಇಲ್ಲಿ ಮಳೆ ಬಂದಾಗ ಇ ಹಳ್ಳದ ಕಟ್ಟು ಮುರಿದು ನೂರಾರು ಎಕರೆ ಕ್ರಷಿ ಭೂಮಿ ಬೆಳೆಬೆಳೆಯಲು ನಿರುಪಯೋಗಿ ಮಾರ್ಪಡುತ್ತದೆ. ಇ ಸಮಸ್ಯೆಯನ್ನು ಅರಿತ ಹಿಂದಿನ ಶಾಸಕ ಮಂಕಾಳು ವೈದ್ಯರವರು ವೀಶೇಷ ಪ್ರಯತ್ನದಿಂದ ಚಿಕ್ಕ ನೀರಾವರಿ ಇಲಾಕೆಯ ಅನುದಾನದಿಂದ ಸುಮರು 500 ಮೀಟರು ಹಳ್ಳಕ್ಕೆ ಹೂಳು ತೆಗೆದು ತಡೆ ಗೋಡೆಯನ್ನು ಕಟ್ಟಿದ್ದರು. ಇದರಿಂದ ಇ ಭಾಗದ ರೈತರಿಗೆ ತುಂಬಾ ಅನೂಕೂಲವಾಗಿತ್ತು. ಇನ್ನುಳಿದ ಸಂಪೂರ್ಣ ತಡೆಗೋಡೆ ನಿರ್ಮಾಣಕ್ಕೆ ಸುಮಾರು ಎರಡು ಕೋಟಿ ರೂಪಾಯಿ ಬೇಕಾಗಿದ್ದು ಇ ಬಗ್ಗೆ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು.
ಆದರೆ ಶಾಸಕರು ಬದಲಾಗಿದ್ದಾರೆ. ಅದರೆ ಸಮಸ್ಯೆ ಮಾತ್ರ ಹಾಗೇಯೇ ಮುಂದುವರಿದಿದೆ. ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದ ಇ ಹಳ್ಳದ ಕಟ್ಟು ಮುರಿದು ನೂರಾರು ಎಕರೆ ಕ್ರಷಿ ಭೂಮಿ ನಾಶಗೊಂಡಿದೆ. ಭತ್ತ ಬೆಳೆಗಾಗಿ ನೆಟ್ಟಿದ ಸಸಿಗಳು ಮಣ್ಣು ಪಾಲಾಗಿದೆ.
ಆದರೆ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡದಿರುವ ಬಗ್ಗೆ ರೈತರು ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ಮಂಕಿ ಗುಳದಕೇರಿ ಹಾಗೂ ಹಳೇಮಠ ಗ್ರಾಮದ ರೈತರಿಗೆ ತುಂಬಾ ಅನಾನೂಕೂಲತೆ ಉಂಟಾಗಿದ್ದು ಜನಪ್ರತಿನಿಧಿಗಳು ಹಾಗೂ ಅಧೀಕಾರಿಗಳು ಇ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಈಶ್ವರ ಮಂಜುನಾಥ ನಾಯ್ಕ ಬೋಳೆಬಸ್ತಿ, ಗಣಪತಿ ಮಂಜುನಾಥ ನಾಯ್ಕ, ಉಲ್ಲಾಸ ನಾಯ್ಕ, ರಘು ಂಜುನಾಥ ನಾಯ್ಕ, ವಿಘ್ನೇಶ್ವರ ಉಮೇಶ ನಾಯ್ಕ, ನಾಗರಾಜ ಉಲ್ಲಾಸ ನಾಯ್ಕ ,ಮಂಜುನಾಥ ಸುರೇಶ ನಾಯ್ಕ,ಅರುಣ ನಾಯ್ಕ, ಬಾಲಯ್ಯ ವಿಠ್ಠಲ ನಾಯ್ಕರವರು ಆಗ್ರಹಿಸಿದ್ದಾರೆ.
Leave a Comment