ಹೊನ್ನಾವರ /ತಾಲೂಕಿನ ಹಳದೀಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಸಂಪನ್ನಗೊಂಡಿತು.
ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ರಂಗಕರ್ಮಿ ಕಿರಣ ಭಟ್ಟ ಅವರು ಬಾಲ್ಯ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ವ್ಯಕ್ತಿ ವಿಕಸನಕ್ಕೆ ಅಮೂಲ್ಯವಾದ ಸಮಯವಾಗಿದೆ. ದಶಮಾನದ ಹಿಂದಿನ ಬಾಲ್ಯ ಇಂದು ಆಧುನಿಕತೆಯಿಂದ ಸೊರಗಿಹೋಗಿದೆ. ಮೊಬೈಲ್, ಟ್ಯೂಶನ್ ಮತ್ತು ಅಂಕಗಳಿಸುವ ವೇಗದಲ್ಲಿ ವಿದ್ಯಾರ್ಥಿಗಳ ಒಂಟಿತನದ ಭಾವ ಅನುಭವಿಸುತ್ತ ಸಮುದಾಯದ ಬಾವನಾತ್ಮಕತೆ ಮರೆತಿದ್ದಾರೆ ಎಂದು ಅಬಿಪ್ರಾಯಪಡುತ್ತಾ ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮ ಸಮುದಾಯದ ಬಾಗಿತ್ವಕ್ಕೆ ಪೂರಕವಾಗಲಿ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಧರ ದುರ್ಗಾಕೇರಿ ಮಾತನಾಡಿ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ನಿಷ್ಪಕ್ಷಪಾತ ನಿರ್ಣಯ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಕೃಷ್ಣ ಮೂರ್ತಿ ಹೆಬ್ಬಾರ ಮಾತನಾಡುತ್ತಾ ಪ್ರತಿಭೆ ಎಂದರೆ ಹೊಸದನ್ನು ಸೃಷಿಸುವುದು, ಸೃಷಿಸಿದ್ದನ ಜೀವನಕ್ಕೆ ಅನ್ವಯಿಸಿಕೊಳ್ಳುವುದು ಎಂದು ಅಭಿಪ್ರಾಯ ಪಡುತ್ತಾ, ತಾವೇ ರಚಿಸಿದ ಕವನವನ್ನು ಶ್ರುಶ್ರಾವ್ಯವಾಗಿ ಹಾಡಿ ರಂಜಿಸಿದರು.
ಸಭೆಯಲ್ಲಿ ವಿ.ಆರ್ ನಾಯ್ಕ ಇವರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕರಾದ ಎಲ್.ಎಮ್.ಹೆಗಡೆ ಪ್ರಸ್ತಾವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಹತ್ತು ಶಾಲೆಗಳಿಂದ ವೈಯಕ್ತಿಕ ಮತ್ತು ಸಾಮೂಹಿಕವಾಗಿ ಸ್ಫರ್ದೇಗಳಲ್ಲಿ ಭಾಗವಹಿಸಿದರು. ಮುಕ್ತಾ ನಾಯ್ಕ ಮತ್ತು ಸೀಮಾ ಭಟ್ಟ ಕಾರ್ಯಕ್ರಮ ನಿರೂಪಿಸಿದರು.
Leave a Comment