ಹಳಿಯಾಳ: ಮತ್ತೇ ಆಕಳು, ದನ,ಕರು ಹೀಗೆ ಜಾನುವಾರುಗಳು ರಸ್ತೆಗಳ ಮಧ್ಯೆ ಕಂಡರೇ ಅವುಗಳ ಮಾಲಿಕರಿಗೆ ಮರಳಿಸುವುದಿಲ್ಲ ಬದಲಾಗಿ ಗೋಶಾಲೆಗೆ ರವಾನಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಬೀಡಾಡಿ ದನಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದ ಬಳಿಕ ಅದರ ಮಾಲೀಕರಿಗೆ ಪ್ರತಿ ಜಾನುವಾರಿಗೆ 1 ಸಾವಿರ ರೂ.ನಂತೆ ದಂಡ ವಿಧಿಸಲಾಗಿದೆ ಅಲ್ಲದೇ ಎಚ್ಚರಿಕೆಯ ನೋಟಿಸ್ ಕೂಡ ನೀಡಲಾಗಿದೆ. ಮತ್ತೇ ಅವರು ದನ-ಕರುಗಳನ್ನು ರಸ್ತೆಗೆ ಬಿಟ್ಟು ಸಂಚಾರಕ್ಕೆ ತೊಂದರೇ ಆದರೇ ತಕ್ಷಣ ಅವುಗಳನ್ನು ವಶಕ್ಕೆ ಪಡೆದು ಗೋಶಾಲೆಗೆ ರವಾನಿಸಲಾಗುವುದು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
Leave a Comment