ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು ಆರೋಳ್ಳಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಸ್ಕಾಪಿಯೋ ಕಾರು ರಸ್ತೆಯ ಪಕ್ಕದ ಗುಡ್ಡಕ್ಕೆ ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟು 8 ಮಂದಿ ಗಂಭಿರವಾಗಿ ಗಾಯಗೊಂಡ ದುರ್ಘಟನೆ ಸೋಮವಾರ ಮದ್ಯರಾತ್ರಿ ಸುಮಾರು 2 ಘಂಟೆ ಸಮಯದಲ್ಲಿ ಸಂಭವಿಸಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಶ್ರೀಮತಿ ರುಬಿಯಾ ಬಾಷಾ ಸಾಬ್ ಶ್ರೀಮತಿ ಫಾತಿಮಾ ಮುಸ್ತಾಫಾ ಚಾಬು ಸಾಬ್ ಅಬ್ದುಲ್ ದುರ್ಘಟನೆಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟರೆ ಗಾಯಗೊಂಡಿರುವ ಜಮೀಲಾ ಮಹಮದ್ ಹುಸೇನ್, ಜೈನಾಬಿ ಖಾಸಿಂ ಸಾಬ್, ಅಮೀನಾ ಬಾಬು, ರಿಷಾನ್ ಹಮ್ಮು ಬಾಷಾ, ಸಾರಾಬಿ ಚಾಬು ಸಾಬ್, ಖಾಸಿಂ ಸಾಬ್, ಹಾಜಾರಾರಾಬಿ ನಜೀಂ, ಅಬ್ದುಲ್ ಖಾದರ್ ಹಸನಾರ್ರನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಹೊನ್ನಾವgದÀ ಕರ್ಕಿಯಲ್ಲಿ ಸಂಬಂಧಿಕರ ಮದುವೆಗೆ ಬಂದವರು ಮದುವೆ ಮುಗಿಸಿಕೊಂಡು ಸಂಜೆ ಗೋವಾಕ್ಕೆ ಬೀಗರೂಟಕ್ಕೆ ತೆರಳಿ ಅಲ್ಲಿಂದ ಮರಳಿ ಮನೆಗೆ ಹೋಗುತ್ತಿರುವಾಗ ರಾತ್ರಿ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಿತಮೀರಿದ ವೇಗ ಹಾಗೂ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು ಈ ಕುರಿತು ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದುರ್ಘಟನೆಯಲ್ಲಿಯೂ ಮಾನವೀಯತೆ ತೋರುವ ಮೂಲಕÀ ಸ್ಥಳೀಯರು ಹಾಗೂ ಅಂಬುಲೆನ್ಸ್ ಡ್ರೈವರ್ 8 ಜನರ ಪ್ರಾಣ ಉಳಿಸುವಲ್ಲಿ ಸಾಕ್ಷಿಯಾಗಿರುವುದು ನಿಜಕ್ಕೂ ಪ್ರಶಂಸನಾರ್ಹವಾಗಿದೆ. ಅಪಘಾತವಾದ ನಂತರ ಸುಮಾರ ವಾಹನಗಳು ಅದೇ ಮಾರ್ಗದಲ್ಲಿ ಸಂಚರಿಸಿದರೂ ಮಾವಿನಕುರ್ವಾದ ಮಾರುತಿ ಗೌಡ ಎಂಬ ಯುವಕ ಗಾಡಿ ಬಿದ್ದಿರುವುದನ್ನು ಕಂಡು ಎನು ಮಾಡುವುದೆಂದು ತಿಳಿಯದೆ ನೇರವಾಗಿ ಇಗ್ನೇಷಿಯಸ್ ಆಸ್ಪತ್ರೆ ಬಳಿ ಬಂದು ಅಲ್ಲೇ ಇರುವ ಅಂಬುಲೆನ್ಸ ಚಾಲಕ ಯೊಗೇಶ್ ನಂಬರಿಗೆ ಕರೆಮಾಡಿ ವಿಷಯ ತಿಳಿಸಿದಾಗ ಅಂಬುಲೆನ್ಸ ಚಾಲಕ ಕೂಡಲೇ ಸ್ಥಳಕ್ಕೆ ದಾವಿಸಿ ವಾಹನದಲ್ಲಿದ್ದವರನ್ನು ಕೆಲ ಸ್ಥಳೀಯ ಯುವಕರ ಸಹಾಯದಿಂದ ಹೊರತೆಗೆದು ತಾಲೂಕಾಸ್ಪತ್ರೆಗೆ ಸಾಗಿಸಿ ಪೊಲೀಸರಿಗೂ ಕರೆಮಾಡಿ ವಿಷಯ ತಿಳಿಸಿ ಗಾಯಾಳುಗಳನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸುವವರೆಗೆ ಅತ್ಯಂತ ಮಾನವೀಯತೆಯಿಂದ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ. ರಾತ್ರಿಯಿಂದ ಬೆಳಿಗ್ಗೆಯವರೆಗೂ ಹೊನ್ನಾವರದ ಪೋಲಿಸರು ಸಂಭದಿಕರಿಗೆ ವಿಷಯ ತಿಳಿಸಲು ಹಾಗೂ ಪ್ರಕರಣದ ಬಗ್ಗೆ ತನಿಖೆ ನಡೆಸುವಲ್ಲಿ ಶ್ರಮಿಸಿದ್ದಾರೆ. ಸ್ಥಳಕ್ಕೆ ಭಟ್ಕಳ ಡಿವೈಎಸ್.ಪಿ ವೆಲಂಟಿನ್ ಡಿಸೋಜಾ, ಸಿ.ಪಿ.ಐ ಚೆಲವರಾಜು ಪಿ.ಎಸೈ ಸಂತೋಷ ಕಾಯ್ಕಿಣಿ ಆಸ್ಪತ್ರೆಗೆ ಭೇಟಿ ನೀಡಿದ್ದರು.
Leave a Comment