ಹಳಿಯಾಳ:- ಅಕೃಮವಾಗಿ ಅರಣ್ಯ ಪ್ರವೇಶಿಸಿ ಬೆಲೆಬಾಳುವ ಸಾಗವಾನಿ ಮರವನ್ನು ಕಡಿದು ತುಂಡು ತಯಾರಿಸಿ ದಾಸ್ತಾನು ಇಟ್ಟ ಬಗ್ಗೆ ಖಚಿತ ಮಾಹಿತಿ ಪಡೆದ ಸಾಂಬ್ರಾಣ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಂಬ್ರಾಣ ವಲಯ, ಶಾಖೆಯ ಇದೆ ಹದ್ದಿನ ಗುದಮುರಗಿ ಗ್ರಾಮದ ಶಿವಾಜಿ ಗೊರವಣ್ಣಾ ನಿಟ್ಟೂರಕರ ಮನೆಯಲ್ಲಿ ದಾಳಿ ನಡೆಸಲಾಗಿದ್ದು ಅಕ್ರಮವಾಗಿ ದಾಸ್ತಾನು ಇಟ್ಟ ಸಾಗವಾನಿ ಕೊರೆದ ನಗಗಳು 22=0.483 ಘ.ಮೀ, ಎಳೆಗಳು-2 ಹಾಗೂ ತಯಾರಿಸಿದ ಪಿಠೋಪಕರಣಗಳೊಂದಿಗೆ ಆರೋಪಿ ಶಿವಾಜಿ ನಿಟ್ಟೂರಕರ ಅನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 1 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಕಟ್ಟಿಗೆಯಾಗಿದೆ ಎನ್ನಲಾಗಿದ್ದು. ಸಾಂಬ್ರಾಣ ವಲಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.
ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ಸಾಂಬ್ರಾಣ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ ರವರ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದೆ. ಸಾಂಬ್ರಾಣ ವಲಯದ ಸಿಬ್ಬಂದಿಗಳಾದ ಉಪ ವಲಯ ಅರಣ್ಯಾಧಿಕಾರಿಗಳಾದ ಮಾರಾನಾಯಕ. ಕುರಿ, ದೀಪಕ ಜಂಬುರೆ ಮತ್ತು ಅರಣ್ಯ ರಕ್ಷಕರಾದ ಶರಣು ಹಚ್ಚಾಳ, ಶೋಭಾ ತೋಳೆ ಅರಣ್ಯ ವಿಕ್ಷಕನಾದ ಶಿವಾಜಿ ರಾಹುತ ಹಾಗೂ ವಾಹನ ಚಾಲಕನಾದ ಲಕ್ಷ್ಮಣ ಕರೆಹೊಳೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Leave a Comment