ಹಳಿಯಾಳ: ಅವಸಾನದ ಅಂಚಿನಲ್ಲಿರುವ ಹಾಗೂ ಕಣ್ಮರೆಯಾಗುತ್ತಿರುವ ಅನೇಕ ಕಲೆಯನ್ನು ಉಳಿಸಲು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತದೆ. ಆ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಯಕ್ಷಗಾನ ಗೊಂಬೆಯಾಟದ ಕಲೆಯನ್ನು ಸಂರಕ್ಷಿಸಲು ಕರ್ನಾಟಕ ಯಕ್ಷಗಾನ ಅಕಾಡೆಮಿ ಶ್ರಮಿಸುತ್ತಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ರಾದ ಎಸ್.ಎಚ್ ಶಿವರುದ್ರಪ್ಪ ಹೇಳಿದರು.
ಅವರು ಚಿಬ್ಬಲಗೇರಿ ಶಾಲೆಯ ಸಭಾ ಭವನದಲ್ಲಿ ಹೊಂಗಿರಣ ಸಂಸ್ಥೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ ಗುರುಶಿಷ್ಯ ಪರಂಪರೆಯ ಗಿರಿಜನ ಉಪಯೋಜನೆಯ ಅಡಿಯಲ್ಲಿ ನಡೆದ “ಯಕ್ಷಗಾನ ಗೊಂಬೆಯಾಟ ಕಲಾ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿದರು.
ಗುರುಶಿಷ್ಯ ಪರಂರೆಯಲ್ಲಿ ಮುಂದಿನ ಯುವ ಪೀಳಿಗೆಗೆ ಕಲೆಯನ್ನು ಪರಿಚಯಿಸಲು ಕಾಲಾ ಶಿಬಿರವನ್ನು ಏರ್ಪಡಿಸಿದೆ. ಆಸಕ್ತರು ಭಾಗವಹಿಸಿ ಅದರ ಪ್ರಯೋಜನ ಪಡೆಯಬೇಕೆಂದು ಶಿವರುದ್ರಪ್ಪ ಕರೆ ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಯಕ್ಷಗಾನ ಕಾಲಾವಿದೆ ಸುಮಂಗಲಾ ದೇಸಾಯಿ ಮಾತನಾಡಿ ಕಲೆಗಳ ಸಂರಕ್ಷಣೆಗೆ ಅಕಾಡೆಮಿಗಳು ತುಂಬಾ ಘನಕಾರ್ಯವನ್ನು ಮಾಡುತ್ತಿವೆ. ಅಕಾಡೆಮಿಯ ಸದುಪಯೋಗವನ್ನು ಪಡೆದುಕೊಂಡು ಕಲೆಗಳನ್ನು ಸಂರಕ್ಷಿಸೋಣ ಎಂದರು.
ಗೊಂಬೆಯಾಟದ ಕಲಾವಿದ, ಶಿಕ್ಷಕ ಸಿದ್ದಪ್ಪ ವೀ ಬಿರಾದಾರ ಮಾತನಾಡಿ ಯಕ್ಷಗಾನ ಗೊಂಬೆಯಾಟದ ಕಲಾ ಶಿಬಿರವು 5 ತಿಂಗಳ ಕಾಲ ನಡೆಯಲಿದೆ. ಕಾರ್ಯಗಾರದಲ್ಲಿ ಯಕ್ಷಗಾನ ಮತ್ತು ಗೊಂಬೆಯಾಟದ ಕಲೆಯನ್ನು ಕಲಿಸಲಾಗುವುದು ಆಸಕ್ತರು ಮೋ: 9480268131 ಗೆ ಸಂಪರ್ಕಿಸುವಂತೆ ಕೊರಿದರು.
ಕಾರ್ಯಕ್ರಮದಲ್ಲಿ ಚಿಬ್ಬಲಗೇರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಬಾಬ್ರಿ, ತಾಳಮದ್ದಲೆ ಕಲಾವಿದೆ ಸಂಧ್ಯಾ ದೇಸಾಯಿ ಮತ್ತು ಹೊಂಗಿರಣ ಸಂಸ್ಥೆಯ ಅಧ್ಯಕ್ಷೆ ಸುಜಾತಾ ಬಿರಾದಾರ ಇದ್ದರು.
Leave a Comment