ಹೊನ್ನಾವರ: ಪಟ್ಟಣದ ಜೋಗಮಠ ಲಕ್ಷಣತೀರ್ಥ ಸುವಿಧಾ ಆಸ್ಪತ್ರೆಯ ಭವಾನಿ ಮೇಸ್ತ ಅವರ ಮನೆಯ ಮೇಲೆ ಮರದ ಟೋಂಗೆ ಬಿದ್ದು ಹಾನಿ ಉಂಟಾಗಿತ್ತು. ಈ ಸಂದರ್ಭದಲ್ಲಿ ವಾರ್ಡ ಸದಸ್ಯ ಶಿವರಾಜ ಮೇಸ್ತ ತಹಶೀಲ್ದಾರ ಹಾಗೂ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಯಿಸಿ ಸಮಸ್ಯೆಯ ಬಗ್ಗೆ ವಿವರಿಸಿದ್ದರು. ಅಲ್ಲದೇ ಒಣಗಿದ ಮರವಾಗಿರುದರಿಂದ ಮಳೆಗಾಲದಲ್ಲಿ ಯಾವುದೇ ಕ್ಷಣದಲ್ಲಿಯೂ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಿದ್ದರು. ಈ ವಿಷಯ ಮಾಧ್ಯಮದಲ್ಲಿ ಕೂಡಾ ಪ್ರಕಟವಾಗಿತ್ತು. ಪರಿಶೀಲನೆ ನಡೆಸಿದ ಬಳಿಕ ತಹಶೀಲ್ದಾರ ವಿ.ಆರ್.ಗೌಡ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಸದಸ್ಯ ಶಿವರಾಜ ಮೇಸ್ತ ಹಾಗೂ ಮನೆಯವರ ಮನವಿ ಸಮರ್ಪಕವಾಗಿದೆ ಎಂದು ಪರಿಗಣಸಿ ಸರ್ಕಾರದ ನಿಯಮಾವಳಿಯಂತೆ ಮರ ಕಟಾವು ನಡೆಸಲು ಆದೇಶಿಸಿದ ಹಿನ್ನಲೆಯಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ ತೆರವು ಕಾರ್ಯ ಆರಂಭವಾಗಿದೆ. ಮನೆ ಮಾಲೀಕರಾದ ಭವಾನಿ ಮೇಸ್ತ ಸಮಸ್ಯೆ ಕೂಡಲೇ ಬಗೆಹರಿಸಿರುದಕ್ಕೆ ಅಧಿಕಾರಿಗಳಿಗೆ ಹಾಗೂ ವಾರ್ಡ ಸದಸ್ಯರಿಗೆ ಅಭಿನಂದಿಸಿದ್ದಾರೆ.
Leave a Comment