ಹೊನ್ನಾವರ : ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ 71ನೇ ವಾರ್ಷಿಕ ಮಹಾ ಸಭೆಯನ್ನು ಬಾಳೆಗದ್ದೆಯ ಶ್ರೀ ವೆಂಕ್ರಟಮಣ ಸಭಾಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ ನಮ್ಮ ಸಮುದಾಯ ಚಿಕ್ಕ ಸಮುದಾಯವಾದರೂ ಕ್ಷೇತ್ರದ ಜನತೆ 25 ವರ್ಷದಿಂದ ಸಮುದಾಯದವರನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅದಕ್ಕೆ ಮುಖ್ಯ ಕಾರಣ ಇತರೆ ಸಮುದಾಯ ನಮ್ಮ ಮೇಲಿಟ್ಟ ನಂಬಿಕೆ ಹಾಗೂ ನಾವು ಆ ಸಮುದಾಯದೊಂದಿಗೆ ಹೊಂದಾಣಿಕೆ ಅಂದರೆ ತಪ್ಪಾಗಲಾರದು. ಅದನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಗಾಣಿಗ ಸಮಾಜ ಬಡ ಸಮಾಜವಾದರೂ ದಾನಿಗಳ ಸಂಖ್ಯೆ ಬಹಳ ಇದೆ. ನಮ್ಮ ಸಂಘದ ಮೂಲಕವೂ ಶಿಕ್ಷಣ ಸೇರಿದಂತೆ ವಿವಿಧ ಬಗೆಯಲ್ಲಿ ಆರ್ಥಿಕ ಸಹಕಾರ ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಸಂಘದಿಂದ ಸಹಾಯ ಪಡೆದವರು ಮತ್ತು ಸಮಾಜದವರು ಸಂಘಕ್ಕೆ ಸಹಾಯ ಮಾಡಬೇಕಿದೆ. ಇಂದು ನೀವು ನೀಡಿದ ಸನ್ಮಾನ ನನಗೆ ಸಂತಸ ತಂದಿದೆ. ಮುಂದೆಯೂ ಸಂಘದೊಂದಿಗೆ ಇರಲಿದ್ದೇನೆ ಎಂದರು.
ಹೊನ್ನಾವರ ತಾಲೂಕ ಶ್ರೀನಿಧಿ ಸೇವಾ ವಾಹಿನಿ ಹಾಗೂ ವೆಂಕಟದರಮಣ ಆಢಳಿತ ಮಂಡಳಿಯ ಸದಸ್ಯರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರತ್ನಾಕರ ಶೆಟ್ಟಿ ಕುಮುಟಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ವಿಜಯ ಬ್ಯಾಂಕ್ ಮ್ಯಾನೇಜರ್ ಗಜಾನನ ಶೆಟ್ಟಿ ಹಾಗೂ ಶಿಕ್ಷಕಿ ಗೀತಾ ಶೆಟ್ಟಿ ಸಂಘದ ಸಾಧನೆಯನ್ನು ಬಣ್ಣಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಕೇಶವ ಶೆಟ್ಟಿ, ಹೊಸಾಕುಳಿ ಗ್ರಾಮ ಪಂಚಾಯತ ಅಧ್ಯಕ್ಷ ಸುರೇಶ ಶೆಟ್ಟಿ, ಶ್ರೀನಿಧಿ ಸೇವಾ ವಾಹಿನಿ ಅಧ್ಯಕ್ಷ ಗೋಪಾಲ ಶೆಟ್ಟಿ, ತಾಲೂಕ ಪಂಚಾಯತ ಸದಸ್ಯ ಮಹೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಗಣಪತಿ ಶೆಟ್ಟಿ ಸ್ವಾಗತಿಸಿ ಆರ.ಬಿ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Leave a Comment