• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿರಬೇಕು – ಎನ್,ವಿ,ಹೆಗಡೆ

November 18, 2019 by Sandesh Desai Leave a Comment

watermarked 17 jyd 1a 1

ಜೋಯಿಡಾ –
ಸಹಕಾರಿ ಸಂಘಗಳು ಕಾನೂನಿನ ಚೌಕಟ್ಟಿನಲ್ಲಿದ್ದಾಗ ಮಾತ್ರ ಸಂಘಗಳ ಅಭಿವೃದ್ದಿ ಸಾಧ್ಯ ಎಂದು ನಂದಿಗದ್ದಾ ಸೇವಾ ಸಹಕಾರಿ ಸಂಘದ ಅದ್ಯಕ್ಷ ಎನ್,ವಿ,ಹೆಗಡೆ ಹೇಳಿದರು,
ಅವರು ಜೋಯಿಡಾ ತಾಲೂಕಿನ ನಂದಿಗದ್ದಾ ಸೇವಾ ಸಹಾಕರಿ ಸಂಘದ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಬೆಂಗಳೂರು, ಉತ್ತರಕನ್ನಡ ಜಿಲ್ಲಾ ಸಹಕಾರಿ ಯುನಿಯನ್ ಕುಮಟಾ,ಕೆ,ಡಿ,ಸಿ,ಸಿ, ಬ್ಯಾಂಕ್ ಶಿರಸಿ ,ಹಾಗೂ ನಂದಿಗದ್ದಾ ಸೇವಾ ಸಹಕಾರಿ ಸಂಘದವರ ಸಹಯೋಗದಲ್ಲಿ ಹಮ್ಮಿಕೊಂಡ 66 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ನಾಲ್ಕನೇ ದಿನದಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ಕಾರದ ಸಾಲ ಮನ್ನಾದಂತ ಯೋಜನೆಗಳು ರೈತರಿಗೆ ಸಹಾಯವಾಗಿದೆ, ಆದರೆ ಇದರಿಂದ ಸಹಕಾರಿ ಸಂಘಗಳಿಗೆ ಹಾನಿ ಉಂಟಾಗಿದೆ, ಕೂಡಲೇ ಸಾಲಮನ್ನಾದಂತ ಸರ್ಕಾರದಿಂದ ಬರತಕ್ಕ ಹಣ ಬಾರದೇ ಹೋದಲ್ಲಿ ಸಂಘಕ್ಕೆ ಬಾರಿ ನಷ್ಟ ಉಂಟಾಗುತ್ತದೆ, ಸಹಕಾರಿ ಸಂಘದಲ್ಲಿ ಪಕ್ಷ ರಾಜಕೀಯ ಮಾಡಬಾರದು , ರಾಜಕೀಯ ಮಾಡುವುದರಿಂದ ಸಹಕಾರಿ ಸಂಘಗಳು ಅವನತಿಯ ಹಾದಿಯತ್ತ ಸಾಗುತ್ತದೆ, ಮತ್ತು ಸಹಕಾರಿ ಸಂಘದಲ್ಲಿ ಕಾರ್ಯದರ್ಶಿ ಮತ್ತು ಆಡಳಿತ ಕಮಿಟಿಯವರ ಹೊಂದಾಣಿಕೆ ಸರಿ ಇಲ್ಲದೆ ಹೋದರೆ ಸಂಘ ಉನ್ನತಿ ಹೊಂದಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ಜೋಯಿಡಾ ತಾಲೂಕಿನಲ್ಲಿಯೇ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಕಾರ್ಯಕ್ರಮ ನಡೆಯುವಂತೆ ಆಗಲಿ ಎಂದರು.

watermarked 17 jyd 1 1


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿಗದ್ದಾ ಸೇವಾ ಸಹಕಾರಿ ಸಂಘದ ನಿವೃತ್ತ ಕಾರ್ಯದರ್ಶಿ ಎಸ್,ಟಿ,ದಾನಗೇರಿ 50 ವರ್ಷಗಳ ಹಿಂದೆ ನಾವು ಸಹಕಾರಿ ಸಂಘಗಳ ಹಾದಿಯನ್ನು ಗಮನಿಸಿದರೇ ಎಲ್ಲಾ ಸಹಕಾರಿ ಸಂಘಗಳು ನಷ್ಟದಾಯಕವೇ ಆಗಿದ್ದವು , ಆದರೆ ಸರ್ಕಾರದ ಅನೇಕ ಯೋಜನೆಗಳು ಸಹಕಾರಿ ಸಂಘಗಳು ಲಾಭಗಳಿಸುವಂತೆ ಮಾಡಿದೆ, ಸಹಕಾರಿ ಸಂಘದಲ್ಲಿ ಕೆಲಸ ಮಾಡುವವರು ಜನರ ಜೊತೆ ಪರಸ್ಪರ ಹೊಂದಾಣಿಕೆಯ ಮನೋಭಾವ ಇಟ್ಟುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ಅನುಭವಿ ಆರ್,ಎನ್,ಹೆಗಡೆ ಮಾತನಾಡಿ ಕಾನೂನಿನಂತೆ ಸಹಕಾರಿ ಸಂಘಗಳು ನಡೆಯಬೇಕು, ಸಂಘದ ಹೆಚ್ಚಿನ ಒತ್ತಡ ಕಾರ್ಯದರ್ಶಿಯ ಮೇಲೆ ಇರುತ್ತದೆ, ಮುಂದಿನ ದಿನಗಳಲ್ಲಿ ಸಹಕಾರಿ ಕಾನೂನುಗಳ ಬಗ್ಗೆ ತರಬೇತಿ ಶಿಬಿರ ಜೋಯಿಡಾ ತಾಲೂಕಿನಲ್ಲಿ ಆಗಲಿ ಎಂದರು.
ಈ ಸಂದರ್ಭದಲ್ಲಿ ಜೋಯಿಡಾ ತಾಲೂಕಿನ ಉತ್ತಮ ಸೇವಾ ಸಹಕಾರಿ ಸಂಘಗಳಿಗೆ ಸನ್ಮಾನ ಮಾಡಲಾಯಿತು, ಸನ್ಮಾನಿತರ ಪರ ಕೆ,ಡಿ,ಸಿ,ಸಿ,ಬ್ಯಾಂಕ್ ನಿರ್ದೇಶಕ ಕೃಷ್ಟಾ ದೇಸಾಯಿ ಮತ್ತು ರಾಮನಗರದ ಸುಪಾ ಗ್ರೂಪ್ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗುರುನಾಥ ಕಾಮತ ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಉತ್ತರಕನ್ನಡ ಸಹಕಾರಿ ಯುನಿಯನದ ನಿರ್ದೇಶಕ ತಿಮ್ಮಣ್ಣ ಗಾಂವ್ಕರ ಮಾತನಾಡಿದರು.
ವೇದಿಕೆಯಲ್ಲಿ ಪಿ,ಎಲ್,ಡಿ,ಬ್ಯಾಂಕ್ ಜಗಲಬೆಟದ ಅದ್ಯಕ್ಷ ಆನಂದ ಪೊಕಳೆ, ಪ್ರಧಾನಿ ಸಹಕಾರಿ ಸಂಘದ ಉಪಾಧ್ಯಕ್ಷ ತುಷಾರ್ ಎಸ್, ಕಮಲಾಕರ, ಎಚ್, ಮಂಜುನಾಥ ಭಾಗ್ವತ, ಇತರರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಕುಮಟಾ ಸಹಕಾರಿ ಸಂಘಗಳ ಯುನಿಯನ್ ಸಿಬ್ಬಂದಿಗಳಾದ ಗೋಪಾಲ ನಾಯ್ಕ, ಲೋಹಿತ ಗಾವಡೆ ನಿರೂಪಿಸಿದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: 66 ನೇ ಅಖಿಲ ಭಾರತ ಸಹಕಾರಿ ಸಪ್ತಾಹ, ಎನ್, ಕಾನೂನಿನ ಚೌಕಟ್ಟಿನಲ್ಲಿದ್ದಾಗ ಮಾತ್ರ ಸಂಘಗಳ ಅಭಿವೃದ್ದಿ ಸಾಧ್ಯ, ಕಾನೂನಿನ ಚೌಕಟ್ಟಿನಲ್ಲಿರಬೇಕು, ಕುಮಟಾ, ಕೆ, ಡಿ, ಬ್ಯಾಂಕ್ ಶಿರಸಿ, ವಿ, ಸಹಕಾರಿ ಸಂಘಗಳು, ಸಿ, ಸೇವಾ ಸಹಕಾರಿ ಸಂಘದವರ ಸಹಯೋಗ, ಹಮ್ಮಿಕೊಂಡ, ಹಾಗೂ ನಂದಿಗದ್ದಾ, ಹೆಗಡೆ

Explore More:

About Sandesh Desai

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...