ಕಾರವಾರ: ಜಿಲ್ಲಾಕೇಂದ್ರ ಕಾರವಾರದಲ್ಲಿರುವ ಜಿಲ್ಲಾ ವಕ್ಫ್ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸದಂತೆ ಕೋರಿ ತಾಲ್ಲೂಕಿನ ವಕ್ಫ್ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಈಗಾಗಲೇ ರಾಜ್ಯ ವಕ್ಫ್ ಮಂಡಳಿಯ ಕಾರ್ಯನಿರ್ವಾಹಣಾಧಿಕಾರಿಯು ಜಿಲ್ಲಾಕೇಂದ್ರ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಜಿಲ್ಲಾ ವಕ್ಫ್ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸಲು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಆದರೆ ಇಲ್ಲಿರುವ … [Read more...] about ಜಿಲ್ಲಾ ವಕ್ಫ್ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸದಂತೆ, ವಕ್ಫ್ ಸಂಸ್ಥೆಗಳ ಪದಾಧಿಕಾರಿಗಳ ಮನವಿ
National News
ಟ್ಯಾಂಕರ ಮೂಲಕ ನೀರು ಪೂರೈಕೆಯ ಅಭಿಯಾನ
ಕಾರವಾರ: ತಾಲೂಕಿನ ಶೇಜವಾಡ ಶೆಜ್ಜೇಶ್ವರ ದೇವಸ್ಥಾನದ ಬಳಿ ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ರವರ ಜನ್ಮ ದಿನಾಚರಣೆಯ ಅಂಗವಾಗಿ ಟ್ಯಾಂಕರ ಮೂಲಕ ನೀರು ಪೂರೈಕೆಯ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಶೆಜ್ಜೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರದೀಪ ಶೇಜವಾಡಕರ ಮುತ್ತಪ್ಪ ರೈ ಜನ್ಮ ದಿನದ ನಿಮಿತ್ತ ಕೇಕ್ ಕತ್ತರಿಸಿದರು. ಬಳಿಕ ಸ್ಥಳೀಯ ನಿವಾಸಿಗಳಿಗೆ ಟ್ಯಾಂಕರ ಮೂಲಕ ನೀರು ಪೂರೈಸಲಾಯಿತು. ಬಳಿಕ ವಿಪರೀತ ನೀರಿನ ಸಮಸ್ಯೆ ಇರುವ ಪ್ರದೇಶಗಳಾದ … [Read more...] about ಟ್ಯಾಂಕರ ಮೂಲಕ ನೀರು ಪೂರೈಕೆಯ ಅಭಿಯಾನ
ಬಾವಿ ತೋಡುವ ಕೆಲಸಗಾರ ಸಾವು
ಭಟ್ಕಳ: ಬಾವಿ ತೋಡುವ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬ ಮೇಲಕ್ಕೆ ಬರುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬಾವಿಯೊಳಗೆ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ತಾಲ್ಲೂಕಿನ ಬೆಳಕೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಟ್ಟಿಕೇರಿಯಲ್ಲಿ ನಡೆದಿದೆ. ಬೈಂದೂರು ತಾಲ್ಲೂಕಿನ ಶಿರೂರು ಹಣಬರಕೇರಿ ನಿವಾಸಿ ಬಚ್ಚಾ ಮಂಜ ಹಣಬರ (55) ಮೃತ ವ್ಯಕ್ತಿ. ಈತ ಕೃಷ್ಣ ನಾಯ್ಕ ಎಂಬುವವರ ಮನೆಯ ಬಾವಿಗೆ ರಿಂಗ್ ಅಳವಡಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಮೇಲಕ್ಕೆ ಬರುವ ವೇಳೆಯಲ್ಲಿ ಕೆಳಕ್ಕೆ … [Read more...] about ಬಾವಿ ತೋಡುವ ಕೆಲಸಗಾರ ಸಾವು
ಸಿಇಟಿ,819 ಮಂದಿ ಗೈರು,
ಕಾರವಾರ: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯು ಜಿಲ್ಲೆಯ 7 ಕೇಂದ್ರಗಳಲ್ಲಿ ಮಂಗಳವಾರ ಸುಗಮವಾಗಿ ನಡೆಯಿತು. ಬೆಳಿಗ್ಗೆ 10.30 ರಿಂದ 11.50 ರವರೆಗೆ ನಡೆದ ಜೀವವಿಜ್ಞಾನ ವಿಷಯದ ಪರೀಕ್ಷೆಗೆ ನೋಂದಾಯಿತ 3,086 ವಿದ್ಯಾರ್ಥಿಗಳಲ್ಲಿ 2,267 ಮಂದಿ ಹಾಜರಾಗಿದ್ದು, 819 ಮಂದಿ ಗೈರು ಹಾಜರಾಗಿದ್ದರು. ಮಧ್ಯಾಹ್ನ ನಡೆದ ಗಣಿತ ವಿಷಯದ ಪರೀಕ್ಷೆಯಲ್ಲಿ ನೋಂದಾಯಿತ 3,086 ವಿದ್ಯಾರ್ಥಿಗಳ ಪೈಕಿ … [Read more...] about ಸಿಇಟಿ,819 ಮಂದಿ ಗೈರು,
ಬೈಕ್ಗೆ ಗುದ್ದಿದ ಬಸ್ : ಸವಾರ ಸ್ಪಾಟ್ ಡೆತ್
ಹೊನ್ನಾವರ :ತಾಲೂಕಿನ ಕೋಟೇಬೈಲ್ ಸಮೀಪದ ತೋಟದಮಕ್ಕಿ ರಸ್ತೆಯ ತಿರುವಿನಲ್ಲಿ ಬೈಕ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿದ ಪರಿಣಾಮ ಗಂಬೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಹೆರಾವಲಿ ನಿವಾಸಿ ಪ್ರಸನ್ನ ತಿಮ್ಮಣ್ಣ ಭಟ್ಟ (31) ಮೃತಪಟ್ಟ ದುರ್ದೈವಿ. ಈತ ತನ್ನ ಯಮಹಾ ವೈಬಿಆರ್ ಬೈಕ್ನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜನ್ನಕಡಕಲದಿಂದ ಹಡಿನಬಾಳದ ಕಡೆಗೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬಲವಾಗಿ ಗುದ್ದಿದೆ. ಇದರಿಂದ ತಲೆ … [Read more...] about ಬೈಕ್ಗೆ ಗುದ್ದಿದ ಬಸ್ : ಸವಾರ ಸ್ಪಾಟ್ ಡೆತ್



