ದಾಂಡೇಲಿ :ನಗರದ ಉಪ ವಲಯ ಅರಣ್ಯಾಧಿಕಾರಿ ಜಿ. ಸಂತೋಷ ಇವರನ್ನು ದಾಂಡೇಲಿಯಿಂದ ವಿರ್ನೊಲಿ ವಲಯದ ಕುಳಗಿ ಡಿಪೋಗೆ ನಿಯೋಜನೆಗೊಳಿಸಿ ಹಳಿಯಾಳದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶ ಮಾಡಿರುವುದನ್ನು ಖಂಡಿಸಿ ಶುಕ್ರವಾರರಂದು ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ. ಮೂರ್ತಿ ಹಾಗೂ ಜಿಲ್ಲಾಧ್ಯಕ್ಷ ಎನ್. ಪ್ರೇಮ್ಕುಮಾರ ಇವರ ನೇತ್ರತ್ವದಲ್ಲಿ ಸಂಘಟನೆಯ ಸ್ಥಳೀಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ನಗರದ ವಿಶೇಷ … [Read more...] about ಉಪ ವಲಯ ಅರಣ್ಯಾಧಿಕಾರಿಯ ನಿಯೋಜನೆ ರದ್ದುಗೊಳಿಸಲು ಪ್ರತಿಭಟನೆ
National News
ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮ
ದಾಂಡೇಲಿ:ನಗರದ ಬಿಜೆಪಿ ಯುವ ಮೋರ್ಚಾ ಘಟಕದಿಂದ ಗಾಂಧಿನಗರದ ದಲಿತ ದೇವು ಗೊಲ್ಲಪಲ್ಲಿಯವರ ಮನೆಯಲ್ಲಿ ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಭಾಸ ಅರವೇಕರ, ಯುವ ಮೋರ್ಚಾ ಉಪಾಧ್ಯಕ್ಷ ರಮೇಶ ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು. … [Read more...] about ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮ
ಬಹುಮಾನ ವಿತರಣೆ
ದಾಂಡೇಲಿ :ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದಾಂಡೇಲಿಯ 2016-17 ನೇ ಸಾಲಿನ ಶೈಕ್ಷಣಿಕ ವರ್ಷದ ಸಾಂಸ್ಕøತಿಕ ಕ್ರೀಡಾ, ಎನ್.ಎಸ್.ಎಸ್ ಯುವ ರೆಡ್ ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ಜರುಗಿತು.ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸೈಯದ.ಕೆ.ತಂಗಳ ಅವರು ಮಾತನಾಡಿ ನಿರೀಕ್ಷೆಗೂ ಮೀರಿ ಕಾಲೇಜು ಪ್ರಗತಿಯನ್ನು ಸಾಧಿಸುತ್ತಿರುವುದು ಅಭಿನಂದನೀಯ. ಖಾಸಗಿ … [Read more...] about ಬಹುಮಾನ ವಿತರಣೆ
ಅಂತೂ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆಗೆ ಚಾಲನೆ
ದಾಂಡೇಲಿ :ಮೀತಿ ಮೀರಿ ನಡೆಯುತ್ತಿರುವ ಅತಿಕ್ರಮಣ ಕಟ್ಟಡ ನಿರ್ಮಾಣದ ವಿರುದ್ದ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಬಂದ ವರದಿಗೆ ಬೆಚ್ಚಿ ಬಿದ್ದ ಎನ್.ಜಿ.ಸಾಳೊಂಕೆ ಅಧ್ಯಕ್ಷತೆಯ ನಗರ ಸಭೆ ಅಂತೂ ಕೊನೆಗೆ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆಗೆ ಮುಂದಡಿಯಿಟ್ಟಿದೆ.ಪ್ರಥಮವಾಗಿ ಶುಕ್ರವಾರ ಬೆಳ್ಳಂ ಬೆಳಗ್ಗೆ ಗಣೇಶ ನಗರ ಸಮೀಪದ ಸಾಯಿನಗರದ ಕಾಲೋನಿಯಲ್ಲಿ ಅನಧಿಕೃತವಾಗಿ ತಲೆಯೆತ್ತಿದ್ದ ಬೃಹತ್ ಕಟ್ಟಡವನ್ನು ಜೆಸಿಬಿ ಮೂಲಕ ನೆಲಸಮಗೊಳಿಸುವ ಕಾರ್ಯಕ್ಕೆ … [Read more...] about ಅಂತೂ ಅತಿಕ್ರಮಣ ಕಟ್ಟಡ ತೆರವು ಕಾರ್ಯಾಚರಣೆಗೆ ಚಾಲನೆ
ನೆರೆ ಸಂತ್ರಸ್ಥರ ತಪ್ಪದ ಗೋಳು
ಹೊನ್ನಾವರ:||ಇಚ್ಚಾ ಶಕ್ತಿಯ ಕೊರತೆ|| ನೆರೆ ಸಂತ್ರಸ್ಥರ ತಪ್ಪದ ಗೋಳು| ದೇವರು ಕೊಟ್ಟರೂ ಪೂಜಾರಿ ಕೊಡ? ಎನ್ನುವುದು ಇಲ್ಲಿ ಸತ್ಯವಾಗಿದೆ. ಹಕ್ಕು ಪತ್ರಕ್ಕಾಗಿ 75 ವರ್ಷಗಳಿಂದ ಕಾದಿರುವ ಶರಾವತಿ ಸಂತ್ರಸ್ಥರು. ಇದು ತಾಲೂಕಿನ ಹೆರಂಗಡಿ ಗ್ರಾಮದ ಅಳ್ಳಂಕಿ & ಹೆರಂಗಡಿ ಭಾಗದ ನೆರೆ ಸಂತ್ರಸ್ಥರ ವ್ಯಥೆಯ ಕಥೆ ಇದು. ಸರಕಾರದಿಂದಲೇ ನದಿ ತೀರದ ಜನರನ್ನು ಸುರಕ್ಷಿತ ಎತ್ತರದ ಅರಣ್ಯ ಭೂಮಿಗೆ ಶಾಶ್ವತವಾಗಿ ಸ್ಥಳಾಂತರಿಸಲ್ಪಟ್ಟವರ ಗೋಳಿನ ಕಥೆ ಇದು.ಜಡ್ಡುಗಟ್ಟಿದ … [Read more...] about ನೆರೆ ಸಂತ್ರಸ್ಥರ ತಪ್ಪದ ಗೋಳು




