ಕಾರವಾರ:ನಗರದ ತ್ಯಾಜ್ಯಗಳೆಲ್ಲ ಸೇರುವ ಕೋಣೆನಾಲದ ಹೂಳೆತ್ತಿದ ನಗರಸಭೆಯು ನೇರವಾಗಿ ಟ್ಯಾಗೋರ್ ಕಡಲ ತೀರದಲ್ಲಿ ಸುರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದಿಂದ ಕೋಟಿ ಕೋಟಿ ರೂಗಳನ್ನು ಖರ್ಚು ಮಾಡಿ ಕಡಲ ತೀರಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಅದರಂತೆ ಜಿಲ್ಲಾಡಳಿತ ಕೂಡ ನಗರದ ಟ್ಯಾಗೋರ್ ಕಡಲ ತೀರವನ್ನು ಸ್ವಚ್ಛಗೊಳಿಸಲು ಕೋಟ್ಯಾಂತರ ರೂ. ಖರ್ಚು ಮಾಡುತ್ತಿದೆ. … [Read more...] about ಕಡಲ ತೀರದಲ್ಲಿ ತ್ಯಾಜ್ಯ ಸಂಗ್ರಹ
ತೀರ
ಗಂಗಾವಳಿ ನದಿತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತ ವಿದ್ಯುತ್ ಕಡಿತ ,ಬೆಳೆ ಹಾನಿ
ಕಾರವಾರ:ಗಂಗಾವಳಿ ನದಿತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತ ವಿದ್ಯುತ್ ಕಡಿತಗೊಳಿಸಿದ ಅಡಿಕೆ ಮರಗಳಿಗೆ ನೀರು ಪೂರೈಕೆಯಾಗದೇ ಬೆಳೆ ಹಾನಿ ಉಂಟಾಗಿದೆ. ಇದರ ನಷ್ಟವನ್ನು ಜಿಲ್ಲಾಡಳಿತ ಭರಿಸಬೇಕು ಎಂದು ಅಲ್ಲಿನವರು ಒತ್ತಾಯಿಸಿದ್ದಾರೆ. ಕುಡಿಯುವ ನೀರಿಗೆ ತೊಂದರೆ ಎಂದು ಜಿಲ್ಲಾಡಳಿತ ನದಿ ನೀರನ್ನು ಬಳಸದಂತೆ ಗಂಗಾವಳಿ ನದಿ ಕೊಳ್ಳದ ನಿವಾಸಿಗಳಿಗೆ ಸೂಚಿಸಿದ್ದು, ಪಂಪ್ ಶುರು ಮಾಡಲು ಅವಷ್ಯವಿರುವ ವಿದ್ಯುತ್ ಕಡಿತ ಮಾಡಿತ್ತು. ವಿದ್ಯುತ್ ಪೂರೈಕೆ ಮಾಡುವಂತೆ ಜಿಲ್ಲಾಡಳಿತಕ್ಕೆ … [Read more...] about ಗಂಗಾವಳಿ ನದಿತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತ ವಿದ್ಯುತ್ ಕಡಿತ ,ಬೆಳೆ ಹಾನಿ
ರವೀಂದ್ರನಾಥ ಠಾಗೋರ ಜಯಂತಿ ಆಚರಣೆ
ಕಾರವಾರ:ನಗರದ ರವೀಂದ್ರನಾಥ ಟಾಗೋರ ಕಡಲ ತೀರದ ಪ್ರವೇಶ ದ್ವಾರದಲ್ಲಿರುವ ರವೀಂದ್ರರ ಪ್ರತಿಮೆಗೆ ಪೂಜಿಸುವ ಮೂಲಕ ಬಂಗಾಳಿಗರು ರವೀಂದ್ರನಾಥರ ಜಯಂತಿ ಆಚರಿಸಿದರು. ಬಂಗಾಳಿ ಕ್ಯಾಲೆಂಡರ್ ಪ್ರಕಾರ ಬೈಶಾಖ ಮಾಸದ 25 ನೇ ದಿನಾಂಕದಂದು ಬಂಗಾಳದಲ್ಲಿ ಟಾಗೋರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ತಮ್ಮ ವಿವಿಧ ವ್ಯವಹಾರಗಳಿಗಾಗಿ ನೆಲೆಸಿರುವ ಬಂಗಾಳಿಗರು ಇಲ್ಲಿನ ರವೀಂದ್ರ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಬಳಿಕ ಮಾಲಾರ್ಪಣೆ ಮಾಡಿ … [Read more...] about ರವೀಂದ್ರನಾಥ ಠಾಗೋರ ಜಯಂತಿ ಆಚರಣೆ
ಕರಾವಳಿ ಹಬ್ಬದ ರೂಪರೇಷೆಗಳ ಬಗ್ಗೆ ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಸಂಘಟಕ ಮಂಜುನಾಥ ನಾಯ್ಕ
ಕಾರವಾರ:ರವೀಂದ್ರನಾಥ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಮೇ. 17 ರಿಂದ 5 ದಿನಗಳ ಕಾಲ ನಡೆಯುವ ಕರಾವಳಿ ಹಬ್ಬದಲ್ಲಿ ಖ್ಯಾತ ಚಲನಚಿತ್ರ ಗಾಯಕರ ಜತೆಗೆ ಸ್ಥಳೀಯ ಪ್ರತಿಭೆಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ತಾಂಡವ ಕಲಾನಿಕೇತನದ ಸಂಸ್ಥಾಪಕ ಮಂಜುನಾಥ ನಾಯ್ಕ ಹೇಳಿದರು. ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ತಾಂಡವ ಕಲಾನಿಕೇತನ ಹಾಗೂ ಉತ್ಸವ ಸಮಿತಿಯ ಎರಡನೇ ವರ್ಷದ ಕರಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. … [Read more...] about ಕರಾವಳಿ ಹಬ್ಬದ ರೂಪರೇಷೆಗಳ ಬಗ್ಗೆ ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಸಂಘಟಕ ಮಂಜುನಾಥ ನಾಯ್ಕ
ನೆಲೆ ಕಳೆದುಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸಲು ಚರ್ಚೆ
ಭಟ್ಕಳ: ಮುರ್ಡೇಶ್ವರದಲ್ಲಿ ತೆರವು ಕಾರ್ಯಾಚರಣೆಯಿಂದ ನೆಲೆ ಕಳೆದು ಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸುವ ನಿಟ್ಟಿನಲ್ಲಿ ಮಂಗಳವಾರ ಶಾಸಕ ಮಂಕಾಳ ವೈದ್ಯ ಹಿರಿಯ ಅಧಿಕಾರಿಗಳೊಂದಿಗೆ 3 ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.ಇದಕ್ಕೂ ಮೊದಲು ಭಟ್ಕಳದ ಉಪ ವಿಭಾಗಾಧಿಕಾರಿ ಎಂ. ಎನ್ ಮಂಜು ನಾಥ್, ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ವಿವಿಧ ಇಲಾಖೆಯ ಅಧಿಕಾರಿ ಗಳೊಂದಿಗೆ ಕಡಲತೀರಕ್ಕೆ ತೆರಳಿ ಅಂಗಡಿ ಗಳನ್ನು ತೆರೆಯಲು ಗುರುತು ಹಾಕುವ ಕಾರ್ಯ ಆರಂಭಿಸಿದರು. ಆದರೆ … [Read more...] about ನೆಲೆ ಕಳೆದುಕೊಂಡ ಅಂಗಡಿಕಾರರಿಗೆ ಪುನರ್ವಸತಿ ಒದಗಿಸಲು ಚರ್ಚೆ