ಕಾರವಾರ:ಕಾರು ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸಾವನಪ್ಪಿದ ಘಟನೆ ಹರೂರು ಸಮೀಪದ ಕುಚೇಗಾರದಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಮಲ್ಲಾಪುರದಿಂದ ಯಲ್ಲಾಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾರು ಕಂದಕ್ಕೆ ಬಿದ್ದಿದ್ದು,ಯಲ್ಲಾಪುರದ ನಿವಾಸಿ, ಹಾಲಿ ಕೈಗಾ ಟೌನಶಿಪ್ನಲ್ಲಿ ವಾಸವಾಗಿದ್ದ ಅನಂತ ಭಟ್ಟ ಮೃತರು. ಅನಂತ ಭಟ್ಟರ ಮಕ್ಕಳಾದ ಸುಪ್ರೀತ ಭಟ್ಟ ಹಾಗೂ ಸುನೇತ್ರ ಭಟ್ಟ ಗಾಯಗೊಂಡವರು.ಅನಂತ ಭಟ್ಟ ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆ … [Read more...] about ಕಾರು ಕಂದಕಕ್ಕೆ ಬಿದ್ದ ಪರಿಣಾಮ ಚಾಲಕ ಸಾವು; ಇಬ್ಬರಿಗೆ ಗಾಯ
ಮೃತ
ಡಾಲ್ಪಿನ್ವೊಂದರ ಮೃತ ದೇಹ ಪತ್ತೆ
ಕಾರವಾರ:ರವೀಂದ್ರನಾಥ ಕಡಲ ಕಿನಾರೆಯಲ್ಲಿ ಸೋಮವಾರ ಸಂಜೆ ಡಾಲ್ಪಿನ್ವೊಂದರ ಮೃತ ದೇಹ ಪತ್ತೆಯಾಗಿದೆ. ಈ ಪ್ರಬೇಧವನ್ನು ಹಂಪ್ ಬ್ಯಾಕ್ ಡಾಲ್ಪಿನ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿಗಳು ಅದರ ಮರಣೋತ್ತರ ಪರೀಕ್ಷೆ ನಡೆಸಿದರು. ಸಮುದ್ರದ ಅಬ್ಬರದ ಅಲೆಗಳೊಂದಿಗೆ ತೇಲಿಬಂದ ಡಾಲ್ಪಿನ್ನ ಮೃತದೇಹ ಇಲ್ಲಿನ ಹಳೆ ಉದ್ಯಾನವನ ಸಮೀಪ ಬಿದ್ದಿದ್ದು, ಅದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತೀರಕ್ಕೆ ಡಾಲ್ಪಿನ್ … [Read more...] about ಡಾಲ್ಪಿನ್ವೊಂದರ ಮೃತ ದೇಹ ಪತ್ತೆ
ಸಲಫಿ ಮುಸ್ಲಿಮರು ಐಸಿಸ್ ನಂಟು ಹೊಂದಿದ್ದಾರೆ ಎಂದು ಅದೇ ಭಾಗ ಸುನ್ನಿ ಮುಸ್ಲಿಮರು ಸುಳ್ಳು ಆರೋಪ ಮಾಡಿ ಕಿರುಕುಳ
ಕಾರವಾರ:ಅಂಧವಿಶ್ವಾಸ, ಅನಾಚಾರ, ಮೂಢ ನಂಬಿಕೆಯಿಂದ ಮುಕ್ತರಾಗಿ ಜೀವಿಸುತ್ತಿರುವ ಜಿಲ್ಲೆಯ ಕುಮಟಾ ಮತ್ತು ಗಂಗಾವಳಿ ಭಾಗದ ಸಲಫಿ ಮುಸ್ಲಿಮರು ಐಸಿಸ್ ನಂಟು ಹೊಂದಿದ್ದಾರೆ ಎಂದು ಅದೇ ಭಾಗ ಸುನ್ನಿ ಮುಸ್ಲಿಮರು ಸುಳ್ಳು ಆರೋಪ ಮಾಡಿ ಕಿರುಕುಳ, ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಕರ್ನಾಟಕ ಸಲಫಿ ಮೂವ್ಮೆಂಟ್ನ ಕೇಂದ್ರೀಯ ಉಪಾಧ್ಯಕ್ಷ ಇಸ್ಮಾಯಿಲ್ ಶಾಫಿ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲಫಿ ಮೂವ್ಮೆಂಟ್ ಪ್ರಗತಿಪರ ಮುಸ್ಲಿಂ … [Read more...] about ಸಲಫಿ ಮುಸ್ಲಿಮರು ಐಸಿಸ್ ನಂಟು ಹೊಂದಿದ್ದಾರೆ ಎಂದು ಅದೇ ಭಾಗ ಸುನ್ನಿ ಮುಸ್ಲಿಮರು ಸುಳ್ಳು ಆರೋಪ ಮಾಡಿ ಕಿರುಕುಳ
ಬೈಕ್ಗೆ ಗುದ್ದಿದ ಬಸ್ : ಸವಾರ ಸ್ಪಾಟ್ ಡೆತ್
ಹೊನ್ನಾವರ :ತಾಲೂಕಿನ ಕೋಟೇಬೈಲ್ ಸಮೀಪದ ತೋಟದಮಕ್ಕಿ ರಸ್ತೆಯ ತಿರುವಿನಲ್ಲಿ ಬೈಕ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿದ ಪರಿಣಾಮ ಗಂಬೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಹೆರಾವಲಿ ನಿವಾಸಿ ಪ್ರಸನ್ನ ತಿಮ್ಮಣ್ಣ ಭಟ್ಟ (31) ಮೃತಪಟ್ಟ ದುರ್ದೈವಿ. ಈತ ತನ್ನ ಯಮಹಾ ವೈಬಿಆರ್ ಬೈಕ್ನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜನ್ನಕಡಕಲದಿಂದ ಹಡಿನಬಾಳದ ಕಡೆಗೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬಲವಾಗಿ ಗುದ್ದಿದೆ. ಇದರಿಂದ ತಲೆ … [Read more...] about ಬೈಕ್ಗೆ ಗುದ್ದಿದ ಬಸ್ : ಸವಾರ ಸ್ಪಾಟ್ ಡೆತ್
ವಿದ್ಯುತ್ ತಂತಿ ಸ್ಪರ್ಷದಿಂದ ಸಿಂಗಳಿಕ ಸಾವು
ಹೊನ್ನಾವರ:ಗೇರುಸೊಪ್ಪಾ ವಲಯದ ಮಹಿಮೆ ಗ್ರಾಮದ ಮೆಟ್ಟಿನಗದ್ದೆ ಅರಣ್ಯ ವ್ಯಾಪ್ತಿಯಲ್ಲಿ,ವಾಟೆ ಹಳ್ಳದ ಬಳಿ ರಾಷ್ಟ್ರೀಯ ಹೆದ್ದಾರಿ 206 ರ ಪಕ್ಕದಲ್ಲಿ ಹಾದು ಹೋದ ವಿದ್ಯುತ್ ತಂತಿ ಸ್ಪರ್ಷದಿಂದ ವನ್ಯಜೀವಿಗಳಲ್ಲಿನ ಅಪರೂಪದ ಪ್ರಬೇಧವಾದ ಸಿಂಗಳಿಕವೊಂದು ಮೃತಪಟ್ಟಿರುವುದು ಪತ್ತೆಯಾಗಿದೆ... ಈ ಘಟನೆಯು ಅಘನಾಶಿನಿ ಎಲ್ ಟಿ ಎಮ್ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ನಡೆದಿದೆ.ಕಳೆದ ವರ್ಷ ಅರಣ್ಯ ಇಲಾಖೆ ಮತ್ತು ಸಲೀಂ ಅಲಿ ಸೆಂಟರ್ ಫಾರ್ ಅರ್ನಿತಾಲಜಿ ಸಂಸ್ಥೆಯವರು ನಡೆಸಿದ … [Read more...] about ವಿದ್ಯುತ್ ತಂತಿ ಸ್ಪರ್ಷದಿಂದ ಸಿಂಗಳಿಕ ಸಾವು