ಕಾರವಾರ: ನೂರಾರು ಮೀನುಗಾರ ಮಹಿಳೆಯರು ಭಾನುವಾರ ಏಕಕಾಲಕ್ಕೆ ಸಮುದ್ರ ಪೂಜೆ ನಡೆಸಿದರು. ಸಂಪ್ರದಾಯದಂತೆ ಸೂರ್ಯೋದಯ ನಗರದಲ್ಲಿನ ಗಣಪತಿ ದೇವಸ್ಥಾನದಲ್ಲಿ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ನಂತರ ಸಮುದ್ರ ಪೂಜೆಗೆ ಆಗಮಿಸಿದರು. ಕಳಸದಲ್ಲಿ ಹೊತ್ತು ತಂದಿದ್ದ ತೆಂಗಿನ ಕಾಯಿ ಹಾಗೂ ನೀರನ್ನು ಕಡಲಿಗೆ ಅರ್ಪಿಸಿದರು. ಶ್ರಾವಣ ಮಾಸದ ನಾಗ ಪಂಚಮಿಯಂದು ಸಮುದ್ರದ ಉಪ್ಪು ನೀರು ಹಾಗೂ ಬಾವಿಯ ಸಿಹಿ ನೀರನ್ನು ಕಳಸದಲ್ಲಿ ತುಂಬಿ ವೃತ ಮಾಡಲಾಗುತ್ತದೆ. ಹದಿನೈದು ದಿನದ … [Read more...] about ಮೀನುಗಾರ ಮಹಿಳೆಯರಿಂದ ಸಮುದ್ರ ಪೂಜೆ
ಸಮುದ್ರ
ಈಜಲು ಹೋಗಿದ್ದ ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲು
ಹೊನ್ನಾವರ:ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲಾದ ಘಟನೆ ಅಪ್ಸರಕೊಂಡದಲ್ಲಿ ಸೋಮವಾರ ಸಂಜೆ ನಡೆದಿದೆ.ಕೊಪ್ಪಳದ ಕಾರಟಿಯ ಜಯಂತ ಜೋಶಿ (22) ಹಾಗೂ ಬೆಂಗಳೂರು ಸಕಲೇಶಪುರ ಮೂಲದ ನೀಲೇಶ ವಿರಯ್ಯ (23)ಸಮುದ್ರ ಪಾಲಾದವರು.ಗೆಳೆಯನ ವಿವಾಹಕ್ಕಾಗಿ ಇಡಗುಂಜಿಗೆ ಆಗಮಿಸಿದ್ದ ಅಪ್ಸರಕೊಂಡದಲ್ಲಿ 16 ಜನ ಸಮುದ್ರಕ್ಕೆ ಇಳಿದಿದ್ದರು. ಇವರಲ್ಲಿ ತುಮಕುರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಜಯಂತ ಜೋಶಿ ಹಾಗೂ ನೀಲೇಶ ವಿರಯ್ಯ ಸಮುದ್ರ ಪಾಲಾದರು. ನೀರು ಪಾಲಾದ ಮೂವರಲ್ಲಿ ಒಬ್ಬರು ಈಜಿ … [Read more...] about ಈಜಲು ಹೋಗಿದ್ದ ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲು
ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ
ಹೊನ್ನಾವರ :ತಾಲೂಕಿನ ಪಾವಿನಕುರ್ವಾ, ತೊಪ್ಪಲಕೇರಿಯಲ್ಲಿ ಕಡಲಕೊರೆತದ ಕೂಗು ಮತ್ತೆ ಕೇಳಿ ಬಂದಿದೆ. ಕಳೆದ 2 ದಿನಗಳಿಂದ ಬೀಸುತ್ತಿರುವ ಅಬ್ಬರದ ಮಳೆಗಾಳಿಗೆ ಸಮುದ್ರ ಉಬ್ಬರಿಸಿ, ತೆರೆಗಳೆದ್ದು ತಡೆಗೋಡೆಗಳನ್ನು ಕೆಡವಿ ಮತ್ತೆ ತೋಟಕ್ಕೆ ನುಗ್ಗಿದೆ. ತೊಪ್ಪಲಕೇರಿಯ 500 ಮೀಟರ್ ತಡೆಗೋಡೆ ಕುಸಿದಿದ್ದು ಅನಂತ ನಾರಾಯಣ ನಾಯ್ಕ, ಶಂಕರ ದುರ್ಗಪ್ಪ ನಾಯ್ಕ, ಗಂಗು ಉಮೇಶ ನಾಯ್ಕ ಮತ್ತು ಕೆಲವರ ಮನೆಗೆ, ತೋಟಕ್ಕೆ ನೀರು ನುಗ್ಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಶಾರದಾ ಮೋಹನ … [Read more...] about ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ
ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ
ಕಾರವಾರ:ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಸಿಹಿ ನೀರಿನ ಬಾವಿ ಸೇರಿದಂತೆ ಕೃಷಿ ಭೂಮಿಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಬರ ಪರಿಸ್ಥಿತಿ ನಡುವೆ ಇದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಒಂದು ಮಗ್ಗುಲಲ್ಲಿ ಉಪ್ಪು ನೀರಿನ ಬೃಹತ್ ಆಗರವನ್ನೆ ಹೊಂದಿರುವ ಕರಾವಳಿ ತಾಲೂಕುಗಳು ಇದೀಗ ಅದರಿಂದಲೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸಮುದ್ರದಲ್ಲಿ ಉಬ್ಬರವಿಳತವಾದಾಗ ನದಿ ಮೂಲಕ ಹಿಮ್ಮುಕವಾಗಿ ಹರಿಯುವ ಉಪ್ಪು ನೀರು ಈ ಭಾಗದ … [Read more...] about ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ
ಇನ್ನೊಂದು ಅಳಿವೆ ದುರಂತ: ಮೀನುಗಾರರು ಪಾರು
ಹೊನ್ನಾವರ:ಮೀನುಗಾರಿಕೆ ಮುಗಿಸಿ ಬರುತ್ತಿದ್ದ ಮೀನುಗಾರಿಕಾ ಬೋಟ್ ಕ್ರಿಸ್ತರಾಯ ಅಳಿವೆ ಪ್ರವೇಶಿಸುತ್ತಿದ್ದಂತೆ ನೀರಿನಡಿ ಹೊಯ್ಗೆ ದಿಬ್ಬಕ್ಕೆ ಡಿಕ್ಕಿ ಹೊಡೆದು ಅಲ್ಲಿಯೇ ಸಿಕ್ಕಿಹಾಕಿಕೊಂಡಿದೆ. ಮೀನುಗಾರರು ಈಜಿ ಪಾರಾಗಿದ್ದಾರೆ. ಇಂದು ಮಧ್ಯಾಹ್ನದವರೆಗೆ ಇನ್ನೆರಡು ಬೋಟ್ಗಳು ಪ್ರಯತ್ನಿಸಿದರೂ ಬೋಟನ್ನು ಎಳೆದು ತರಲು ಸಾಧ್ಯವಾಗಿಲ್ಲ. ಪೀಟರ್ ಫರ್ನಾಂಡೀಸ್ ಎಂಬುವರ ಈ ಬೋಟ್ ಅಪಘಾತದಿಂದ 20 ಲಕ್ಷ ರೂಪಾಯಿ ಹಾನಿಯಾಗಿದೆ. ಈ ಮೀನುಗಾರಿಕಾ ಸೀಜನ್ನಿನ ಎರಡನೇ ಅಪಘಾತ … [Read more...] about ಇನ್ನೊಂದು ಅಳಿವೆ ದುರಂತ: ಮೀನುಗಾರರು ಪಾರು