ಕಾರವಾರ:
ಸುನಾಮಿಯನ್ನೊಳಗೊಂಡಂತೆ ಇತರೆ ಪೃಕೃತಿ ವಿಕೋಪಗಳು ಸಂಭವಿಸಿದಾಗ ಅದನ್ನು ಎದುರಿಸುವಲ್ಲಿ ಭಾರತೀಯ ರಕ್ಷಣಾ ಪಡೆಗಳು ಸಮರ್ಥವಾಗಿವೆ ಎಂದು ಪಶ್ಚಿಮ ನೌಕಾ ವಲಯ ಮುಖ್ಯಸ್ಥೆ ವೈಸ್ ಎಡ್ಮಿರಲ್ ಗಿರೀಶ್ ಲೂಥ್ರಾ ಹೇಳಿದರು.
ಕದಂಬ ನೌಕಾನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಮೂರು ದಿನಗಳ ರಾಷ್ಟ್ರೀಯ ಸುನಾಮಿ ಮುನ್ನೆಚ್ಚರಿಕೆ ಅಣಕು ಕಾರ್ಯಾಚರಣೆಯಾದ ಕರಾವಳಿ ಕಾರುಣ್ಯದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಳೆದ 12 ವರ್ಷದ ಅವದಿಯಲ್ಲಿ ರಕ್ಷಣಾ ಪಡೆಗಳು ಸಾಕಷ್ಟು ಪ್ರಗತಿ ಸಾಧಿಸಿವೆ ಎಂದು ಅವರು ಅಭಿಪ್ರಾಯ ಪಟ್ಟರು. 2005ರಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಜಾರಿಗೆ ಬಂತು. ವಿಪತ್ತು ನಿರ್ವಹಣಾ ಪ್ರಾಧಿಕಾರ, ದಳಗಳು ರಚನೆಯಾದವು. ಕಳೆದ ಕೆಲ ವರ್ಷಗಳಿಂದ ಅಣಕು ಕಾಯಾಚರಣೆಗಳನ್ನು ನಡೆಸಲಾಗುತ್ತಿದೆ. ಇದರಿಂದ ರಕ್ಷಣಾ ಇಲಾಖೆಗಳ ನಡುವೆ ಸಹಕಾರ ಬೆಳೆದಿದೆ ಎಂದು ಹೇಳಿದರು. 2004 ರ ಸುನಾಮಿಯ ನಂತರ ಇನ್ಕೋಯಿಸ್ ನೆರವಿನಲ್ಲಿ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆ ಜಾರಿ ಮಾಡಲಾಗಿದೆ. ಆಧುನಿಕ ತಂತ್ರಜ್ಞಾನದಿಂದ ಭೂಕಂಪವಾಗಿ ಸುನಾಮಿ ಏಳುವ ಕೆಲ ಗಂಟೆ ಮೊದಲೇ ಸುನಾಮಿ ಎಷ್ಟು ಪ್ರಬಲವಾಗಿದೆ. ಯಾವ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂಬ ಮಾಹಿತಿ ದೊರೆಯುತ್ತದೆ ಎಂದರು. ಭಾರತೀಯ ಭೂ ಸೇನೆಯ ಸಿಬ್ಬಂದಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸತೀಶ ದುವಾ, ವೀಕ್ಷಕರಾಗಿ ಆಗಮಿಸಿದ್ದ ಬಾಂಗ್ಲಾದೇಶ ನೌಕಾಸೇನೆಯ ಕ್ಯಾಪ್ಟನ್ ಭಾರಿ ಹಾಗೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವಿವಿಧ ದಳಗಳ ಮುಖ್ಯಸ್ಥರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಭೂಸೇನೆಯ ಸಿಬ್ಬಂದಿ ಮುಖ್ಯಸ್ಥ ಸತೀಶ ದುವಾ ಇನ್ನಿತರರಿದ್ದರು.
Leave a Comment