ಕಾರವಾರ:
ಕೇಂದ್ರ ಪುರಸ್ಕøತ ಪಂಡಿತ ದೀನ್ ದಯಾಳ್ ಗ್ರಾಮೀಣ ಯೋಜನೆಯಡಿ, ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಜೂನ್À 12 ರಂದು ಬೆಳಿಗ್ಗೆ 9.30 ರಿಂದ ಒಂದು ದಿನದ ಉದ್ಯೋಗ ಮೇಳವನ್ನು ಜಿಲ್ಲಾ ರಂಗಮಂದಿರ ಕಾರವಾರದಲ್ಲಿ ಆಯೋಜಿಸಲಾಗಿದೆ.
18 ರಿಂದ 35 ವಯೋಮಾನದ ಕನಿಷ್ಟ 8 ನೇ ತರಗತಿ ಉತ್ತೀರ್ಣರಾದ ಯುವಕ-ಯುವತಿಯರು ಈ ಉದ್ಯೋಗ ಮೇಳದಲ್ಲಿ ಹಾಜರಾಗಿ ಸದರಿ ಯೋಜನೆಯ ಸದುಪಯೋಗವನ್ನು ಪಡೆಯಬಹುದಾಗಿದೆ. ಆಟೋ ಮೊಬೈಲ್ ಮತ್ತು ಸಂಬಂಧಿತ ಘಟಕಗಳ ರೀಪೇರಿ, ಬ್ಯಾಂಕಿಂಗ್/ ವಿಮೆ ಮತ್ತು ಹಣಕಾಸು ಸೇವೆಗಳು, ಬೃಹತ್ ಕಟ್ಟಡ ಮತ್ತು ನಿರ್ಮಾಣ ಸಂಸ್ಥೆಗಳ ಸೇವೆಗಳು, ಕೆಮಿಕಲ್ಸ್ ಮತ್ತು ಪ್ಯಾರಾಮೆಡಿಕಲ್ಸ್, ಶಿಕ್ಷಣ ಮತ್ತು ವೃತ್ತಿ ಅಭಿವೃದ್ಧಿಯಾಧಾರಿತ ಸೇವೆಗಳು,ಎಲೆಕ್ಟ್ರಾನಿಕ್ಸ್ ಹಾರ್ಡವೇರ್, ಆಹಾರ ಸಂಸ್ಕರಣೆ, ಆರೋಗ್ಯ ಸೇವೆಗಳು, ಸಾಫ್ಟವೇರ್ ಸರ್ವಿಸಸ್, ಸರಕು ಸಾಗಾಣೆ ಚರ್ಮೋದ್ಯಮ ಉಪಕರಣಗಳು,ಪತ್ರಿಕೆ-ಮಾಧ್ಯಮ ಮನರಂಜನೆ, ಬಿ.ಪಿ.ಒ ರೀಟೈಲ್ ಶಾಪ್ಸ್, ಪ್ರವಾಸೋದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ತರಬೇತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಾರವಾರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕಾರ್ಯಾಲಯ ದೂರವಾಣಿ ಸಂಖ್ಯೆ 08382-226389 ಇವರನ್ನು ಸಂಪರ್ಕಿಸಬಹುದಾಗಿದೆ
Leave a Comment