ಹೊನ್ನಾವರ :
ಶರಾವತಿ ನದಿಯಿಂದಾವೃತ ದ್ವೀಪ ಮಾವಿನಕುರ್ವೆಗೆ ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ರೂ. ಮಂಜೂರಿ ತಂದಿರುವ ಶಾಸಕ ಮಂಕಾಳ.ಎಸ್.ವೈದ್ಯರವರು ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿತ ಇಲಾಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ನಡೆಸಿದರು.
ಕೆ.ಆರ್.ಡಿ.ಸಿ.ಎಲ್. ಯೋಜನೆಯಡಿ ರಾಜ್ಯಕ್ಕೆ 1395 ಕೋಟಿ ರೂಪಾಯಿ ಅನುದಾನದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಮಂಕಾಳು ವೈದ್ಯರವರು 109.25 ಕೋಟಿ ರೂಪಾಯಿಯ ಅನುದಾನ ಮಂಜೂರಿಸಿಕೊಂಡಿದ್ದಾರೆ.
40 ಕೋಟಿ ಮಾವಿನಕುರ್ವೆ – ಹೊನ್ನಾವರ ಸೇತುವೆ, 40 ಕೋಟಿ ಬಳೂರು ಜಲವಳ್ಳಿ , 20ಕೋಟಿ ಗೆರುಸೊಪ್ಪ ನಗರಬಸ್ತಿಕೇರಿ, 5 ಕೋಟಿ ಗೆರುಸೊಪ್ಪ ಕಲ್ಕಟ್ಟು ಹಾಗೂ 4.25 ಕೋಟಿ ಶಿರಾಲಿ ಅಳ್ವೆಕೋಡಿ ಸಂಪರ್ಕ ಕಲ್ಪಿಸುವ ಸೇತುವೆಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಮುಖ್ಯ ಅಭಿಯಂತರರು, ಕಾರ್ಯ ನಿರ್ವಹಣಾ ಅಭಿಯಂತರರು ಹಾಗೂ ಎ.ಡಬ್ಲೂ.ಡಿ. ಸೇರಿ ಮಾವಿನಕೂರ್ವೇ ಹಾಗೂ ಹೊನ್ನಾವರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ನಡೆಸಿದರು. ಮಾವಿಕೂರ್ವೆಗೆ ಹೋಗಬೇಕಾದರೆ ಹೊನ್ನಾವರದಿಂದ ಸುಮಾರು 26 ಕಿ.ಮಿ. ಕ್ರಮಿಸಬೇಕಿದ್ದು ಶರಾವತಿ ನದಿಗೆ ಅಡ್ಡಲಾಗಿ ಈ ಸೇತುವೆ ನಿರ್ಮಾಣವಾದರೆ ಮಾವಿನಕೂರ್ವೆಯಿಂದ ಹೊನ್ನಾವರಕ್ಕೆ ಕೇವಲ ಒಂದು ಕಿ.ಮೀ. ದೂರ ಆಗುತ್ತದೆ. ಜನರಿಗೆ ಪಟ್ಟಣದ ಸಂಪರ್ಕಕೂಡ ತುಂಬಾ ಹತ್ತಿರವಾಗುತ್ತದೆ.
ಈ ಹಿನ್ನಲೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ಸೇತುವೆ ಸಂಪರ್ಕ ಕಲ್ಪಿಸಬೇಕೆಂದು ಮಾವಿನಕುರ್ವೆಯ ಜನ ಆಗ್ರಹಿಸುತ್ತ ಬಂದಿದ್ದು ಇದೀಗ ಮಂಕಾಳ ಎಸ್.ವೈದ್ಯರ ಶಾಸಕತ್ವದ ಅವಧಿಯಲ್ಲಿ ನಾಲ್ಕು ದಶಕಗಳ ಬೇಡಿಕೆಗೆ ಮನ್ನಣೆ ದೊರೆತಂತಾಗಿದೆ
109.25 ಕೋಟಿ ರೂ, ಅನುದಾನದಲ್ಲಿ 40 ಕೋಟಿ ಮಾವಿನಕುರ್ವೆ ಹೊನ್ನಾವರ ಸೇತುವೆಗೆ , 40 ಕೋಟಿ ಬಳ್ಕೂರು ಜಲವಳ್ಳಿ ಸೇತುವೆಗೆ, 20 ಕೋಟಿ ಗೆರುಸೊಪ್ಪ ನಗರಬಸ್ತಿಕೇರಿ, ಸೇತುವೆಗೆ, 5 ಕೋಟಿ ಗೆರುಸೊಪ್ಪ ಕಲ್ಕಟ್ಟು ಸೇತುವೆಗೆ ಹಾಗೂ 4.25 ಕೋಟಿ ಶಿರಾಲಿ ಅಳ್ವೆಕೋಡಿ ಸಂಪರ್ಕ ಸೇತುವೆ ಕಲ್ಪಿಸಲು ಅನುದಾನ ಹಂಚಿಕೆ ಮಾಡಲಾಗಿದೆ.
Leave a Comment