ಹೊನ್ನಾವರ :
ಇಲ್ಲಿನ ಪುಣ್ಯಕ್ಷೇತ್ರ ಇಡಗುಂಜಿಯಲ್ಲಿ ಮಹಾಗಣಪತಿಯ ಪದತಲದಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಯ ಸುಮಾರು 50 ಕ್ಕೂ ಹೆಚ್ಚು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರ ಭಿನ್ನ ಗಾಯನ, ವಾದನಗಳ ಸಂಗೀತಧಾರೆ ಮಹಾಗಣಪತಿಗೆ ಧಾರೆಧಾರೆಯಾಗಿ (ಗಾನಭಿಷೇಕ) ಅಭಿಷೇಕ ಮಾಡಲಾಯಿತು. ಬೆಳಿಗ್ಗೆ 10.00 ಗಂಟೆಗೆ ಆರಂಭಿಸಿ ರಾತ್ರಿ 2.30 ರವರೆಗೆ ಕಲಾವಿದರು ಕಲಾ ಸೇವೆಯನ್ನು ಶ್ರೀ ದೇವರಿಗೆ ಸಮರ್ಪಿಸಿದರು. ಗಜಾನ ಭಂಡಾರಿಯವರ ಶಹನಾಯಿ ಮಂಗಲ ವಾದ್ಯದೊಂದಿಗೆ ಮಾಲಾಶ್ರೀ ರಾಗದಿಂದ ಆರಂಭಿಸಿದರು. ನಂತರ ಸುಮಾ ರವೀಂದ ಯಲ್ಲಾಪುರ ನಟ ಭೈರವ ರಾಗವನ್ನು ಗಜಾನನ ಹೆಬ್ಬಾರ ಭಟ್ಕಳ ಬೈರವರಾಗವನ್ನು ಮಹಾಬಲೇಶ್ವರ ಹೆಗಡೆ ಬೈರಾಗಿ ಬೈರವ, ಲಕ್ಷ್ಮೀ ಹೆಗಡೆ ಕುಮಟಾ, ಬೀಮಪಲಾಸ್, ಅನಿತಾ ಹೆಗಡೆ ನಟಬೈರವ, ಶ್ರೀಧರ ಹೆಗಡೆ ಸಿರ್ಸಿ ಪಟ ದೀಪ, ವಿನಾಯಕ ಹೆಗಡೆ ಮುಲ್ತಾನಿ ಎಂ ಹೆಚ್ ಗಣೇಶ, ಭೀಮಪಲಾಸ್ ಸುಪ್ರಿಯಾ ಹೆಗಡೆ ಮೇಘಮಲ್ಹಾರ ಭಾರ್ಗವ ರಾವ್, ಬೃಂದಾವನಿ ಸಾರಂಗ, ಸ್ಮೀತಾ ಹೆಗಡೆ ಸಿರ್ಸಿ, ಮಧುವಂತಿ ರೋಹಿಣಿ ಭಟ್ಟ, ಮಧುಮಾ ಸಾರಂಗ, ರೇಶ್ಮಾ ಭಟ್ಟ, ‘ಶ್ಯಾಮಕಲ್ಯಾಣ ವಿದ್ವಾನ ಗಣಪತಿ ಹೆಗಡೆ, ಮಿಯಾಮಲ್ಹಾರ ಭಾರ್ಗವ ಹೆಗಡೆ ಸೀತಾರದಲ್ಲಿ ಭೀಮಪಲಾಸ್ ವಿನಾಯಕ ಹುಗ್ಗಣ್ಣವರ ಯಮನ್ ಪ್ರಕಾಶ ಹೆಗಡೆ ಸಿರ್ಸಿ ಹಾರ್ಮೋನಿಯಂ ಸೋಲೋ, ವಿನಾಯಕ ಮೂತ್ಮೂರಡು ಪೂರಿಯಾ ಕಿರಣ ಮುಗೇಗಾರ ಬಾನ್ಸುರಿ ವಾದನದಲ್ಲಿ ಯಮನ ರಾಗ, ನಾಗವೇಣಿ ಹೆಗಡೆ, ಮಾರಾವ ಚೈತನ್ಯ ಭಟ್ಟ ಸಂತೂರ ವಾದನ, ರಾಮ ಹೆಗಡೆ ಕೆರೆಮನೆ ಮಾಲಕಂಸ, ಶ್ರೀಪಾದ ಹೆಗಡೆ ಸೋಮನ ಮನೆ ಛಾಯಾನಟ, ಡಾ. ಕೃಷ್ಣಮೂರ್ತಿ ಭಟ್ಟ, ಜೈಜಯವಂತಿ, ಪ್ರಸನ್ನ ಭಟ್ಟ ಬಾಳೆಗದ್ದೆ ಕೇದಾರ, ಸಂಗೀತಾ ನಾಯ್ಕ, ಹಡಿನಬಾಳ, ಮಾಲಕಂಸ ವಿನಾಯಕ ಭಂಡಾರಿ ಶಹನಾಯಿಯಲ್ಲಿ ರಾಗ ಪಟದೀಪ ಎಂ.ಎಸ್.ಭಟ್ಟ ಯಮನ್, ಕಾರ್ತಿಕ ಹೆಗಡೆ, ಶಂಕರಾ ಚಿನ್ಮಯ ಭಟ್ಟ, ಬಾಗೇಶ್ರೀ ಕಂಸ, ಗೋಪಾಲಕೃಷ್ಣ, ಭಾಗ್ವತ ಧಾರವಾಡ, ಅಭೋಗಿ, ಗೌರೀಶ ಯಾಜಿ ಹಾರ್ಮೋನಿಯಂನಲ್ಲಿ ಮಾರು ಭಸಂತ, ಶಿವಾನಂದ ಭಟ್ಟ, ಹಡಿನಬಾಳ, ಗೋರಖ ಕಲ್ಯಾಣ, ವಿಶ್ವೇಶ್ವರ ಭಟ್ಟ, ಬೈರವಿಯನ್ನು ಹಿರಿಯ ಕಲಾವಿದ ಡಾ| ಅಶೋಕ ಹುಗ್ಗಣ್ಣವರ ಪೂರಿಯಾ ಧನುಶ್ರೀ ರಾಗವನ್ನು ಶ್ರೀ ದೇವರ ಸೇವಾ ಕಾರ್ಯದಲ್ಲಿ ಸಮರ್ಪಿಸಿದರು. ಇವರಿಗೆ ಅಷ್ಟೇ ಉತ್ತಮವಾಗಿ ಪ್ರೋ. ಗೋಪಾಲಕೃಷ್ಣ ಹೆಗಡೆ ಕಲ್ಬಾಗ, ಡಾ. ಅನಂತಮೂರ್ತಿ ಶ್ರೀ ರಾಜಾರಾಮ ಹೆಬ್ಬಾರ, ಜಿ.ಕೆ. ಹೆಗಡೆ, ಎನ್.ಜಿ. ಹೆಗಡೆ ಕಪ್ಪೆಕೇರಿ, ಶೇಷಾದ್ರಿ ಅಯ್ಯಂಗಾರ ಕೆ.ಪಿ. ವಿನೋದ ಗುರುರಾಜ ಹೆಗಡೆ, ಕು. ವಿಜೇತಾ ಹೆಗಡೆ, ಅಕ್ಷಯ ಭಟ್ಟ, ಪ್ರದೀಪ ಕೋಟಿಮನೆ, ತಬಲಾ ಸಾಥ್ ನೀಡಿದರೆ ಪ್ರಕಾಶ ಹೆಗಡೆ, ಶಿರಸಿ, ಗೌರೀಶ ಯಾಜಿ, ಭರತ ಹೆಗಡೆ, ಶಿರಸಿ, ಮಾರುತಿ ನಾಯ್ಕ, ಹರಿಶ್ಚಂದ್ರ ನಾಯ್ಕ, ಇಡಗುಂಜಿ ಇವರು ಸಂವಾದಿನಿ ಸಾಥ್ ನೀಡಿ ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿದರು. ವರ್ಷಧಾರೆಯ ನಡುವೆ ಸಂಗೀತ ಕಲಾವಿದರು ಗಣಪನ ಸನ್ನಿಧಿಗೆ ದೂರದಿಂದ ಬಂದು ಸಂಗೀತ ಧಾರೆಯನ್ನು ಗಣಪನಿಗೆ ಸಮರ್ಪಿಸಿದರು. ಸಂಘಟಕರಾದ ಪ್ರೊ. ಎಸ್. ಶಂಭು ಭಟ್ಟ ಎಲ್ಲಾ ಕಲಾವಿದರನ್ನು ಗೌರವಿಸಿ 66 ವರ್ಷಗಳಿಂದ ಅನೂಚಾನವಾಗಿ ನಡೆದು ಬಂದ ರೀತಿ ವಿವರಿಸಿದರು. ವಿದ್ವಾನ ಶಿವಾನಂದ ಭಟ್ಟ ಸ್ವಾಗತಿಸಿದರೆ ವಿದ್ವಾನ್ ಎನ್.ಜಿ. ಹೆಗಡೆ ಕಪ್ಪೆಕೇರಿ ಹಾಗೂ ವಿದ್ವಾನ್ ವಿಶ್ವೇಶ್ವರ ಭಟ್ಟ ಖರ್ವಾ ನಿರೂಪಿಸಿದರು.
Leave a Comment