ಹೊನ್ನಾವರ
ಸ್ವಾತಂತ್ರ್ಯೋತ್ಸವ ದಿನಾಚರಣೆ ಕುರಿತು ಪಟ್ಟಣದ ತಹಸೀಲ್ದಾರರ ಕಾರ್ಯಾಲಯದಲ್ಲಿ ಸಭೆ ನಡೆಯಿತು.
ಅಗಷ್ಟ 14 ರಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಅಗಷ್ಟ 15 ರಂದು ಸ್ವಾತಂತ್ರ್ಯೋತ್ಸವ ದಿನ ಆಚರಣೆ ಕುರಿತು ಸಭೆಯಲ್ಲಿ ಚರ್ಚಿಸಲಾಯತು.
ಅಗಷ್ಟ 15 ರಂದು ಬೆಳಿಗ್ಗೆ 8 ಗಂಟೆಗೆ ಸರಕಾರಿ-ಅರೆ ಸರಕಾರಿ ಕಚೇರಿ ಹಾಗೂ ಶಾಲಾ ಕಾಲೇಜು ಮತ್ತು ಸ್ಥಳೀಯ ಸಂಸ್ಥೆಯವರು ಅವರವರ ಕಚೇರಿಯಲ್ಲಿ ಧ್ವಜಾರೋಹಣ, ಬೆಳಿಗ್ಗೆ 8.50 ಗಂಟೆಗೆ ಸಾರ್ವಜನಿಕರು, ಶಾಲಾ ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಅಕಾರಿಗಳು, ಸಿಬ್ಬಂದಿಗಳು, ಪೋಲೀಸ ದಳ, ಎನ್.ಸಿ.ಸಿ ದಳ, ಗೃಹರಕ್ಷಕ ದಳ, ಸ್ಕೌಟ-ಗೈಡ್ಸ ದಳದವರು ತಹಶೀಲದಾರ ಕಚೇರಿ ಆವರಣದಲ್ಲಿ ಸೇರುವುದು, 9 ಗಂಟೆಗೆ ತಹಶೀಲ್ದಾರ ಹಾಗೂ ತಾಲೂಕ ಕಾರ್ಯನಿರ್ವಾಹಕ ದಂಡಾಕಾರಿಯವÀರಿಂದ ತಾಲೂಕ ಕಚೇರಿಯ ಆವರಣದಲ್ಲಿಯ ಧ್ವಜಸ್ಥಂಬದ ಬಳಿ ಮಹಾತ್ಮ ಗಾಂೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಾರ್ವಜನಿಕ ಧ್ವಜಾರೋಹಣ ನಡೆಸಲು ನಿರ್ಧರಿಸಲಾಯಿತು.
ನಂತರ ಪಟ್ಟಣದ ನ್ಯೂ ಇಂಗ್ಲಿಷ ಶಾಲಾ ಕನ್ನಡ ಮಾಧ್ಯಮ ವಿದ್ಯಾರ್ಥಿನಿಯರಿಂದ ರಾಷ್ಟ್ರಗೀತೆ, ಮಾರ್ಥೋಮಾ ಪ್ರೌಢ ಶಾಲಾ ವಿದ್ಯಾರ್ಥಿನಿಯರಿಂದ ನೇಗಿಲಯೋಗಿ ಹಾಡು, ತಹಶೀಲ್ದಾರರಿಂದ ಸಂದೇಶ. ನಂತರ ಪ್ರಭಾತ ನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಂದ ದೇಶಭಕ್ತಿ ಗೀತೆ ಹಾಡುವ ಕಾರ್ಯಕ್ರಮಗಳಿಗೆ ತೀರ್ಮಾನಿಸಲಾಯಿತು.
ತಹಸೀಲ್ದಾರ ವಿ. ಆರ್. ಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತಾಲೂಕಾ ಮಟ್ಟದ ಅಕಾರಿಗಳು, ವಿವಿದ ಸಂಘ ಸಂಸ್ಥೆಗಳ ಪದಾಕಾರಿಗಳು, ಶಾಲಾ, ಕಾಲೇಜುಗಳ ಮುಖ್ಯಾಧ್ಯಾಪಕರು, ಪ್ರಾಂಶುಪಾಲರು ಪಾಲ್ಗೊಂಡಿದ್ದರು.
Leave a Comment