ಹೊನ್ನಾವರ: ಕುಮಟಾ-ಹೊನ್ನಾವರ ವಿಧಾಸಭಾ ಕ್ಷೇತ್ರದ ಪ್ರಸಕ್ತ ಸಾಲಿನಲ್ಲಿ `ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ 39.36 ಕೋಟಿ ರೂ. ಅನುದಾನವನ್ನು ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳಿ ಬಿಡುಗಡೆಗೊಳಿಸಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ, ಶಾಸಕಿ ಶಾರದಾ ಶೆಟ್ಟಿ ಹೇಳಿದರು.
ಪಟ್ಟಣದ ತಾ.ಪಂ ಸಭಾಭವನದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. ತಾಲೂಕಿನ ಐಗಾರಮಕ್ಕಿ ಜನಸಾಲೆಯಿಂದ ಹೊಯ್ನೀರಿಗೆ ಹೋಗುವ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ 3.61 ಕೋಟಿ ರೂ, ಗುಡ್ಡೇಬಾಳದಿಂದ ಗಾಣಗೇರಿ ಕವಲಕ್ಕಿ ರಸ್ತೆಗೆ 4.7 ಕೋಟಿ ರೂ, ಸಂತೇಗುಳಿಯಿಂದ ಲಕ್ಷ್ಮೀ ನರಸಿಂಹ ದೇವಸ್ಥಾನ, ಬಾಸ್ಕೇರಿ ಆರೊಳ್ಳಿ ರಸ್ತೆಗೆ 3.29 ಕೋಟಿ ರೂ, ಕಡತೋಕಾದ ಗುಡ್ಡಿನಕಟ್ಟು ಊರಕೇರಿ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ 3.85 ಕೋಟಿ ರೂ., ಕೆಕ್ಕಾರದ ಚರ್ಚ್ ಕ್ರಾಸ್ನಿಂದ ಗೌಡ್ರಕೇರಿ ಸೋನಾರಕೇರಿಗೆ 3.43 ಕೋಟಿ ರೂ., ಕರ್ಕಿಯಿಂದ ಕೆಳಗಿನ ಕೇರಿ ಮೂಲಕ ರಾಮೇಶ್ವರಕಂಬಿ ರಾಷ್ಟ್ರೀಯ ಹೆದ್ದಾರಿವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ 3.13 ಲಕ್ಷ ರೂ., ಕುಮಟಾದ ಗಂಗಾವಳಿ ಕ್ರಾಸ್ ರಸ್ತೆಯಿಂದ ಹರಿಜನ ಕಾಲೋನಿ ಶಾಂತಿಕಾಪರಮೇಶ್ವರಿ ದೇವಸ್ಥಾನದ ವರೆಗಿನ ರಸ್ತೆ ನಿರ್ಮಾಣಕ್ಕೆ 1.34 ಕೋಟಿ ರೂ., ಕಾಯ್ಕಿಣಿ ಶಿವಪುರದಿಂದ ರಾಷ್ಟ್ರೀಯ ಹೆದ್ದಾರಿ 66ರ ವರೆಗೆ 2.12 ಕೋಟಿ ರೂ., ಕುರಿಗದ್ದೆ ಹರಿಜನಕೇರಿಯಿಂದ ರಾಷ್ಟ್ರೀ ಹೆದ್ದಾರಿ 66ರ ವರೆಗಿನ ರಸ್ತೆಗೆ 1.62 ಕೋಟಿ ರೂ, ಬೆಟ್ಕುಳಿಯ ಹರ್ಣಿಕೇರಿಯಿಂದ ಹೆದ್ದಾರಿವರೆಗಿನ ರಸ್ತೆಗೆ 1.34 ಕೋಟಿ ರೂ., ಮುಖ್ಯರಸ್ತೆಯಿಂದ ಕರ್ಕಿಮಕ್ಕಿ ರಸ್ತೆಗೆ 2.62 ಕೋಟಿ ರೂ., ಮುರೂರಿನಿಂದ ಜನಸಾಲೆಗೆ 1.38 ಕೋಟಿ ರೂ., ಕಪ್ಪೆಗುಳಿ, ಸಂತೂರು, ಸಗಡೆಬೇಣಾದಿಂದ ಬಂಡಿವಾಳದ ವರೆಗಿನ ರಸ್ತೆಗೆ 1.78 ಕೋಟಿ ರೂ., ಗುಡಬಳ್ಳಿಯಿಂದ ಹರನೀರು ರಸ್ತೆ ನಿರ್ಮಾಣಕ್ಕೆ 1.88 ಕೋಟಿ ರೂ., ಮೇಲಿನ ತಲಗೋಡದಿಂದ ಹೊಸಹಿತ್ಲ, ಹರಿಜನಕೇರಿ, ವಾಲಗಳ್ಳಿಯಿಂದ ರಾಜ್ಯ ಹೆದ್ದಾರಿ ರಸ್ತೆ ನಿರ್ಮಾಣಕ್ಕೆ 3.83 ಕೋಟಿ ರೂ. ಹಣವನ್ನು ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪಟ್ಟಣದಲ್ಲಿ ಕೈಗೊಳ್ಳಲಾದ ಬಹುಕೋಟಿ ಮೊತ್ತದ ಒಳಚರಂಡಿ ಕಾಮಗಾರಿ ಯೋಜನೆಯನ್ನು ಸಧ್ಯಕ್ಕೆ ಸ್ಥಗಿತಗೊಳಿಸಲಾಗಿದೆ
Leave a Comment