ಹೊನ್ನಾವರ ;
ರೋಟರಿ ಕ್ಲಬ್ ಹೊನ್ನಾವರ ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮವನ್ನು ನಡೆಯಿತು,
ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಇವೆಂಟ್ ಛೇರಮನ ರೋ||ಸತ್ಯ ಜಾವಗಲ್ ಈ ವರ್ಷ ನಮ್ಮ ಕ್ಲಬ್ನಿಂದ ವಿಶೇಷವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿ ಹಾಗೂ ಪರಿಸರವನ್ನು ಪ್ರೀತಿಸುವ ಮನೋಭಾವ ಮೂಡಿಸುವ ಸಲುವಾಗಿ ರೋಟರಿ ಪರಿವಾರದೊಂದಿಗೆ ಅವರ ಮಕ್ಕಳ ಹೆಸರಲ್ಲಿ ಮಕ್ಕಳ ಕೈಯಿಂದಲೇ ಗಿಡಗಳನ್ನು ನೆಡುವುದರ ಮೂಲಕ ವಿನೂತನವಾಗಿ ಕಾರ್ಯಕ್ರಮವನ್ನು ಆಯೋಚಿಸಿದ್ದೆವೆ ಎಂದರು.
ರೋಟರಿ ಅಧ್ಯಕ್ಷ ರೋ||ಅನಂತಮೂರ್ತಿ ಶಾಸ್ತ್ರಿ ಮಾತನಾಡಿ ಪ್ರಪಂಚದಲ್ಲಿ ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಗಿಡಗಳ ಸಂಖ್ಯೆ ಕಡಿಮೆ ಇದೆ. ಇತರೇ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೆ 65 ಮರಗಳಂತೆ ಇದ್ದರೆ ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೆ ಕೇವಲ 20 ಮರಗಳಿವೆ ಆದ್ದರಿಂದ ಪರಿಸರ ಸಂರಕ್ಷಿಸಲು ಮತ್ತಷ್ಟು ಮರಗಳನ್ನು ಬೆಳಸಬೇಕು ಎಂದರು.
ಪೋಲಿಸ್ ಇಲಾಖೆವತಿಯಿಂದ ಮುಖ್ಯ ಅತಿಥಿಯಾಗಿ ಆಗಮಿಸಿದ ಪೋಲಿಸ್ ಸಬ್ ಇನ್ಸಪೆಕ್ಟರ್ ಅನಂದ ಮೂರ್ತಿ ಉದ್ಯಾನವನದಲ್ಲಿ ಇಲಾಖೆ ಪರವಾಗಿ ಸಸ್ಯವನ್ನು ನೆಟ್ಟು ರೋಟರಿಸಂಸ್ಥೆ ಮಾಡುತ್ತಿರುವ ಕಾರ್ಯವನ್ನು ಶ್ಲಾಪಿಸಿದರು.
ಅರಣ್ಯ ಇಲಾಖೆ ವತಿಯಿಂದ ಅತಿಥಿಯಾಗಿ ಆಗಮಿಸಿದ ಅರಣ್ಯ ಅಧಿಕಾರಿ ಹರಿಶ್ಚಂದ್ರ ಪಟಗಾರ ಮಾತನಾಡಿ ರೋಟರಿ ಕ್ಲಬ್ನಿಂದ ಆಚರಿಸುತ್ತಿರುವ ಈ ವಿನೂತನ ಕಾರ್ಯಕ್ರಮ ಮಾದರಿಯಾಗಿದೆ, ವಿನೂತನರೀತಿಯಲ್ಲಿ ಮಕ್ಕಳಮೂಲಕ ಸಸ್ಯವನ್ನು ನೆಡುವುದರ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮ ಮೂಡಿಸುತ್ತಿರುವುದಕ್ಕೆ ಇಲಾಖೆ ಪರವಾಗಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ರೋ||ವಸಂತ ಕರ್ಕಿಕರರವರನ್ನು ಸನ್ಮಾಸಿ “ರೋಟರಿ ಹಸಿರು ಹರಿಕಾರ” ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.
ರೋ||ಜಿ.ಜಿ. ಶಂಕರ ಹಾಗೂ ರೋ||ಸತೀಶ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರೋ|| ಸ್ಟೆಫನ ರೊಡ್ರಗೀಸ್ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್. ಕಾಲೇಜಿನ ರೋಟ್ರ್ಯಾಕ್ ವಿದ್ಯಾರ್ಥಿಗಳು ಅರಣ್ಯ ಮತ್ತು ಪೆÇೀಲಿಸ್ ಇಲಾಖಾ ಸಿಬ್ಬದಿಗಳು, ರೊಟರಿಪರಿವಾರದವರು, ಸಾರ್ವಜನಿಕರು ಉಪಸ್ಥಿತರಿದ್ದರು
Leave a Comment