ಹೊನ್ನಾವರ: ಸಂಘಟನೆಯ ಹೆಸರು ಹೇಳಿಕೊಂಡು ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಚ್ಛಾರಿತ್ರ್ಯವಿಲ್ಲದ ವ್ಯಕ್ತಿಗೆ ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ.ಕಾಂಗ್ರೆಸ್ ಶಾಸಕನನ್ನು ಪತ್ರಿಕಾ ಹೇಳಿಕೆ ನೀಡಿ ಹೊಗಳುವ ಈ ವ್ಯಕ್ತಿ ಬಿಜೆಪಿ ತತ್ವಸಿದ್ದಾಂತವನ್ನು ಅವಹೇಳನ ಮಾಡಿದ್ದಾನೆ. ಅಧಿಕಾರಿಗಳನ್ನು ಓಲೈಸಿಕೊಳ್ಳುತ್ತ ಅರಣ್ಯ ಇಲಾಖೆಯ ಜಾಗವನ್ನು ಪ್ರತಿ ವರ್ಷ ಒತ್ತುವರಿ ಮಾಡಿಕೊಂಡು ಕಟ್ಟಡದ ಮೇಲೆ ಕಟ್ಟಡ ನಿರ್ಮಿಸಿದ್ದಾನೆ. ಅಲ್ಲದೇ ಕಟ್ಟಡ ನಿರ್ಮಿಸಿ ಬೇರೆಯವರಿಗೆ ಬಾಡಿಗೆ ನೀಡುತ್ತಿದ್ದಾನೆ. ಮತ್ತು ಜಾಗವನ್ನು ಒತ್ತುವರಿ ಮಾಡಿ ಸಾಪ್ಟ್ ಡ್ರಿಂಕ್ಸ್ ಉದ್ಯಮ ಮತ್ತು ಅನೈತಿಕ ಚಟುವಟಿಕೆ ನಡೆಸುತ್ತಿದ್ದಾನೆ. ವಿದ್ಯುತ್ ಇಲಾಖೆಯ ಪರವಾನಗಿಯಿಲ್ಲದೇ ಉದ್ಯಮ ನಡೆಸುವ ಈತ ಸರ್ಕಾರದ ಬೊಕ್ಕಸಕ್ಕೆ ಪಂಗನಾಮ ಹಾಕುತ್ತಿದ್ದಾನೆ. ಬಿಜೆಪಿ ತನ್ನದೇ ಆದ ತತ್ವ ಸಿದ್ದಾಂತವನ್ನು ಹೊಂದಿದೆ. ಎಂಜಲು ಕಾಸಿಗಾಗಿ ತನಗೆ ಸಂಬಂಧವಿಲ್ಲದ ಕ್ಷೇತ್ರದ, ತನ್ನ ಸುತ್ತ ಅಕ್ರಮ ಮತ್ತು ಅನೈತಿಕ ವ್ಯಕ್ತಿತ್ವದ ಮರಿಪುಢಾರಿಗಳನ್ನೇ ಇಟ್ಟುಕೊಂಡು ಅಪಖ್ಯಾತಿ ಗಳಿಸಿರುವ ಶಾಸಕನ ಪರ ವಕಾಲತ್ತು ಮಾಡುತ್ತಿದ್ದಾನೆ. ಆದರೆ ಬಿಜೆಪಿಯ ವಿರುದ್ದ ಮಾತನಾಡುವ ಈತನು ತಾನು ಏನೆಂಬುದನ್ನು ಮೊದಲು ಅರಿತುಕೊಳ್ಳಲಿ. ಈತನ ಅಕ್ರಮವನ್ನು ಗುರುತಿಸಿ ಈತನ ವಿರುದ್ದ ಸಂಬಂಧಪಟ್ಟ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಹೆಸ್ಕಾಂ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಕೂಡಲೇ ಈತನ ಅಕ್ರಮ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸುತ್ತೇನೆ.
– ಶಿವರಾಜ ಮೇಸ್ತ ಹೊನ್ನಾವರ, ಬಿಜೆಪಿ ಧುರೀಣ
Leave a Comment