ಹೊನ್ನಾವರ :
ಕಡಲತೀರದ ಅನಾಹುತಕ್ಕೆ ಕಂಗೆಟ್ಟ ನಿವಾಸಿಗಳು. ಅಧಿಕಾರಿಗಳ ಜನಪ್ರತಿನಿಧಿಗೆ ಬೆಸತ್ತು ೧ ತಿಂಗಳ ಗಡವು ನೀಡಿದ ತೊಪ್ಪಲಕೇರಿ ಗ್ರಾಮಸ್ಥರು. ಗ್ರಾಮ ಪಂಚಾಯತಿ ಇಂದ ಕೇಂದ್ರ ಸರ್ಕಾರದವರೆಗೆ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುವ ಆಕ್ರೊÃಶ ಸ್ಥಳಿಯರದ್ದು ೧ ತಿಂಗಳೊಳಗೆ ಸಮಸ್ಯೆ ಬಗೆಹರಿಸದೆ ಹೋದರೆ ಹೆದ್ದಾರಿ ಬಂದ್ ಎಚ್ಚರಿಕೆ.
ಹೊನ್ನಾವರದ ಕರ್ಕಿ ತೊಪ್ಪಲಕೇರಿ ಭಾಗದಲ್ಲಿ ಓಖ್ಹಿ ಚಂಡಮಾರುತ ಅಪ್ಪಳಿಸಿ ಮಾಡಿದ ಅನಾಹುತ ಸಂಭವಿಸಿ ೩ ವರ್ಷ ಕಳೆದಿದೆ. ಆದರೆ ೩ ವರ್ಷದಿಂದಲೂ ಕಡಲಕೊರೆತದ ಸಮಸ್ಯೆ ಮಾತ್ರ ಸಮಸ್ಯೆಯಾಗಿ ಕಾಡುತ್ತಿದೆ. ಆದ ಹಾನಿಯ ಬಗ್ಗೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಬಗೆಹರಿಸಿಲ್ಲ ಪ್ರತಿ ಮಳೆಗಾಲದಲ್ಲಿಯೂ ಭಯದಲ್ಲಿ ಜೀವನ ನಡೆಸಬೇಕಾದ ಪರಿಸ್ಥಿತಿ ಕಾಡುತ್ತಿದೆ. ೨೦೧೭ರಲ್ಲಿ ಓಖ್ಹಿ ಚಂಡಮಾರುತದಿಂದ ಸಮುದ್ರದ ಅಬ್ಬರದ ಅಲೆಗಳು ತಾಲೂಕಿನ ಕರ್ಕಿಯ ತೊಪ್ಪಲಕೇರಿ, ಹೆಗಡೆ ಹಿತ್ಲ ಹಾಗೂ ಸಮುದ್ರ ದಂಡೆಯಲ್ಲಿ ವಾಸಿಸುವ ಇತರೆ ಕಡಲ ತೀರ ಪ್ರದೇಶದ ನಿವಾಸಿಗರನ್ನು ವರ್ಷದಿಂದ ವರ್ಷಕ್ಕೆ ಸಮಸ್ಯೆ ಮಾಡುತ್ತಾ ಸಂಕಷ್ಟದ ಸುಳಿಗೆ ಸಿಲುಕಿಸಿದೆ.
ತಾಲೂಕಿನ ಕಡಲಂಚಿನ ಕೆಲ ತೀರ ಪ್ರದೇಶಗಳಲ್ಲಿ ಅಲೆಗಳ ಸದ್ದು ದಿನೇ ದಿನೇ ಸದ್ದುಮಾಡುತ್ತಿದ್ದು, ಸಮುದ್ರದ ನೀರಿನ ಮಟ್ಟ ಏರುಪೇರಾಗುತ್ತಿರುವುದು ಸಮುದ್ರ ತೀರದ ನಿವಾಸಿಗಳ ನಿದ್ದೆಗೆಡೆಸುತ್ತಲ್ಲೆ ಇದೆ.. ಅಲ್ಲದೇ ಈ ಭಾಗದ ಕರ್ಕಿ, ತೊಪ್ಪಲಕೇರಿ, ಕರ್ಕಿಕೋಡಿ, ಭಂಡಾರ್ಕೇರಿ, ಹೆಗಡೆಹಿತ್ಲ ಮುಂತಾದ ಕಡಲ ತೀರ ಪ್ರದೇಶಗಳಲ್ಲಿ ಸಮುದ್ರದಲ್ಲಿನ ನೀರಿನ ಏರಿಳಿತಗಳಲ್ಲಿ ಹಿಂದೆಂದೂ ಕಾಣದ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಅಲ್ಲದೇ ಈ ಸಮಸ್ಯೆ ಹೊತ್ತು ಗ್ರಾಮ ಪಂಚಾಯತಿ, ತಾಲೂಕ ಪಂಚಾಯತಿ, ಜಿಲ್ಲಾ ಪಂಚಾಯತ, ಅಧಿಕಾರಿಗಳಿಗೆ ಜನಪ್ರತಿನಿಧಿಗಷ್ಟೆ ಅಲ್ಲದೇ ಶಾಸಕರಿಗೆ, ಸಚೀವರಿಗೆ, ಸಂಸದರಿಗೆ ಮುಖ್ಯಮಂತ್ರಿ, ಪ್ರಧಾನಮಂತ್ರಿವರಗೆ ಹೋದರು ಯಾವೊಬ್ಬರು ಸಮಸ್ಯೆ ಬಗೆಹರಿಸುವತ್ತ ಗಮನಹರಿಸಿಲ್ಲ. ಕಲೆದ ೩ ವರ್ಷದ ಹಿಂದೆ ಶಾಸಕರಾಗಿದ್ದ ಶಾಸಕಿ ಶಾರದಾ ಶೆಟ್ಟಿ ಗಮನಕ್ಕೆ ತಂದಾಗ ಸಮಸ್ಯೆಗೆ ಪರಿಹಾರ ಯೋಜನೆ ಜಾರಿಯಲ್ಲದೇ ಕೆಲವೇ ದಿನದಲ್ಲಿ ಕಾರ್ಯರಂಭವಾಗುತ್ತದೆ. ಆದರೆ ಇದುವೆರಗೂ ಯಾವೊಂದು ಹೊಸಯೋಜನೆಯು ಬಂದಿಲ್ಲ. ನಂತರ ಬಂದ ಶಾಸಕರಾದ ದಿನಕರ ಶೆಟ್ಟಿ ೩ ತಿಂಗಳ ಸಮಯಾವಖಾಶ ಕೇಳಿದರೂ ೧ ವರ್ಷವಾದರೂ ಇತ್ತ ತಲೆ ಹಾಕಲಿಲ್ಲ. ಮಲೆಗಾಲದಲ್ಲಿ ಮಳೆ ನೀರಿನ ಅಬ್ಬರಕ್ಕೆ ರಕ್ಕಸರಂತೆ ನೀರಿನ ಅಲೆಗಳು ಆಗಾಗ ಕೆಲ ಮನೆಗಳಿಗೂ ನುಗ್ಗಿದ್ದು ಜನರನ್ನು ಕಂಗಾಲಾಗಿಸಿದೆ. ತೊಪ್ಪಲಕೇರಿಯ ನಿವಾಸಿ ಶಂಕರ ನಾಯ್ಕ ಹಾಗೂ ಡಾ.ಮಾದೇವ, ಗಂಗಾಧರ ನಾಯ್ಕ ಸೇರಿದಂತೆ ಇನ್ನೂ ಹತ್ತಕ್ಕೂ ಮನೆಗಳಿಗೆ ನೀರು ನುಗ್ಗಿ ಸಣ್ಣ-ಪುಟ್ಟ ಹಾನಿ ಸಂಭವಿಸಿದೆ ಎನ್ನಲಾಗಿದೆ. ಬಿರುಗಾಳಿ ಸಹಿತ ಚಂಡಮಾರುತ ಹಾಗೂ ಸಮುದ್ರದ ಅಲೆಗಳ ರಭಸಕ್ಕೆ ಬೆಚ್ಚಿಬಿದ್ದ ಅಲ್ಲಿನ ಕೆಲ ನಿವಾಸಿಗರು ರಾತ್ರಿಯಿಡೀ ನಿದ್ದೆಗೆಡುವಂತಾಯಿತು. ಶಂಕರ ನಾಯ್ಕ ಹಾಗೂ ಡಾ.ಮಾದೇವ ಅವರ ಮನೆಗೆ ನೀರು ನುಗಿರುವುದರಿಂದ ಇಬ್ಬರು ಕುಟುಂಬಸ್ಥರು ೩ ವರ್ಷದಲ್ಲಿ ಕೆಲವೊಂದು ಮಧ್ಯರಾತ್ರಿ ಮನೆಯಿಂದ ದೂರವಿರಬೇಕಾಯಿತು. ಸಣ್ಣ ಮಕ್ಕಳು ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರೂ ಸಮೀಪದ ಎತ್ತರದ ಪ್ರದೇಶದಲ್ಲಿ ಉಳಿದು ದಿನ ಕಳೆಯುತ್ತಿದ್ದಾರೆ. ಕರ್ಕಿ, ತೊಪ್ಪಲಕೇರಿ, ಹೆಗಡೆಹಿತ್ಲ ಭಾಗದಲ್ಲಿ ಕಡಲ್ಕೊರೆತಕ್ಕೆ ಅಡ್ಡಲಾಗಿ ಹಾಕಲಾಗಿದ್ದ ತಡೆಗೋಡೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಇದರಿಂದ ಕೃಷಿ ಜಮೀನಿಗೂ ನೀರು ನುಗ್ಗಿ ಹಾನಿ ಸಂಭವಿಸಿದೆ. ಅಲ್ಲದೆ ಕುಡಿಯುವ ನೀರಿನ ಭಾವಿಗೆ ಉಪ್ಪು ನೀರು ಮಿಶ್ರಿತವಾಗಿದ್ದು ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಕರ್ಕಿ, ತೊಪ್ಪಲಕೇರಿ ಪ್ರದೇಶವು ಸಮುದ್ರ ತೀರ ಪ್ರದೇಶವಾಗಿದ್ದು, ಬಹಳ ಸೂಕ್ಷö್ಮ ಪ್ರದೇಶವೆಂದು ಗುರುತಿಸಲಾಗಿದೆ. ಅಲ್ಲಲ್ಲಿ ತಡೆಗೋಡೆ ನಿರ್ಮಾಣದ ಅವಶ್ಯಕತೆಯಿದ್ದು, ತಡೆಗೋಡೆ ನಿರ್ಮಾಣವಾದರೆ ನೀರಿನಿಂದ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬಹುದಾಗಿದೆ ಮುಂಗಾರು ಅಬ್ಬರ ಜೋರಾದರೆ ಬಹುತೇಕ ಮನೆಗಳಿಗೆ ನೀರು ನುಗ್ಗಿ ಪ್ರತಿ ವರ್ಷವು ಮನೆಗಳಿಗೆ ಲಕ್ಷಾಂತರ ರೂ. ಹಾನಿ ಸಂಭವಿಸಿತ್ತು. ಅನಾಹುತ ಸಂಭವಿಸಿದಾಗ ಆಗಮಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಲದೇ ಇರುವುದು ಸಾರ್ವಜನಿಕರ ಆಕ್ರೊÃಶಕ್ಕೆ ಕಾರಣವಾಗಿದೆ.
ಸ್ಥಳಿಯ ನಿವಾಸಿಗಳಾದ ಮಾದೇವ ನಾಯ್ಕ ಮಾತನಾಡಿ ಪ್ರತೀ ಭಾರಿಯೂ ಅನಾಹುತ ಆಗುತ್ತಿದೆ. ಶಾಶ್ವತ ತಡೆಗೋಡೆ ನಿರ್ಮಾಣವಾಗಬೇಕು ಹಾಗೂ ಅಲೆಯ ಅಬ್ಬರಕ್ಕೆ ಸಮುದ್ರದ ಉಪ್ಪುನೀರು ಕೃಷಿ ಭೂಮಿಗೆ ಬಂದು ಬೆಳೆ ಹಾನಿಯಾಗಿದೆ. ಹಾಗೂ ರಾತ್ರಿ ನಿದ್ದೆ ಬಿಟ್ಟು ಭಯದಿಂದ ಜೀವನ ನಡೆಸುವ ಸ್ಥಿತಿ ಎದುರಾಗಿದೆ. ಆದಷ್ಟು ಬೇಗ ತಡೆಗೋಡೆ ನಿರ್ಮಿಸಿ ಮುಂದೆ ಯಾವುದೇ ರೀತಿ ಹಾನಿ ಆಗದಂತೆ ಕ್ರಮ ಕೈಗೋಳ್ಳ ಬೇಕಿದೆ. ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮನವಿ ನೀಡಿ ಸಾಕಾಗಿದೆ,. ಜಿಲ್ಲಾಧಿಕಾರಿಗಳು ಆದೇಶ ಮಾಡಿದರೂ ಬಂದರು ಇಲಾಖೆಯವರು ಗಮನಹರಿಸಿಲ್ಲ. ಪ್ರಧಾನಿ ಮೋದಿ ಆಪ್ ಮೂಲಕ ದೂರು ನೀಡಿದರೂ ಪ್ರಯೋಜನವಾಗಿಲ್ಲ ನಮ್ಮ ಸಮಸ್ಯೆ ಬಗೆಹರಿಸಿ ಎಂದು ಕೋರಿದರು.
ಶ್ರಿÃಧರ ನಾಯ್ಕ ಮಾತನಾಡಿ ನೂರಾರು ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಲು ಮುಂದಾಗುತ್ತಾರೆ ಆದರೆ ನಮ್ಮ ಜೀವಕ್ಕೆ ಬೆಲೆ ಇಲ್ಲದಂತಾಗುತ್ತಿದೆ. ನಾವು ಇಲ್ಲಿ ವಾಸಿಸಲು ಪರದಾಡುತ್ತಿದ್ದರು ಯಾವೊಬ್ಬರು ನಮ್ಮತ್ತ ಗಮನಹರಿಸಿಲ್ಲ. ಒಂದು ತಿಂಗಳೊಳಗೆ ಸಮಸ್ಯೆ ಮುಕ್ತಿಯಾಗದೇ ಹೋದಲ್ಲಿ ರಸ್ತೆ ತಡೆ ನಡೆಸಿ ಹೋರಾಟ ಮಾಡುತ್ತೆÃವೆ ಎಂದು ಆಗ್ರಹಿಸಿದರು.
ಇನ್ನೊರ್ವರಾದ ಮಾದೇವ ನಾಯ್ಕ ಮಾತನಾಡಿ ಕಡಲಕೊರೆತದಿಂದಾಗಿ ಹಲವರು ಮನೆ ಬಿಟ್ಟಿದ್ದಾರೆ. ಇನ್ನು ಹತ್ತು ಮನೆಗಳಿಗೆ ಈ ಸಮಸ್ಯೆ ಮುಂದೆ ಕಾಡಲಿದೆ. ಆದರೆ ಅದಿಕಾರಿಗಳು ಜನಪ್ರತಿನಿಧಿಗಳು ಇದೇ ರೀತಿ ಅಸಡ್ಡೆ ಮುಂದುವರೆಸಿದರೆ ೧ ತಿಂಗಳ ಕಾಲ ಉಗ್ರ ಹೋರಾಟ ಮಾಡಲಾಗುವುದು ಈಗಾಲಾದರೂ ಜನಪ್ರತಿನಿಧಿಗಳು ಅಧಿಕಾರಿಗಳು ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಲಿ ಎಂದು ಆಗ್ರಹಿಸಿದರು.
ಅನಾಹುತ ಸಂಭವಿಸಿದ ಬಳಿಕ ಆಗಮಿಸಿ ಪರಿಹಾರದ ಲೆಕ್ಕಚಾರದಲ್ಲಿ ತೊಡಗುವ ಅಧಿಕಾರಿಗಳು, ಸಾಂತ್ವನ ಹೇಳಲು ತಾ ಮುಂದೆ ನಾ ಮುಂದೆ ಎಂದು ಓಡಿ ಬರುವ ಜನಪ್ರತಿನಿಧಿಗಳು ಈಗಾಲಾದರೂ ಜವಬ್ದಾರಿ ಅರಿಯಲಿ ೩ ವರ್ಷದ ಸಮಸ್ಯೆಗೆ ಈಗಲಾದರೂ ಬಗೆಹರಿಸುವ ಪ್ರಯತ್ನ ಮಾಡುತ್ತಾರಾ ಅಥವಾ ಹಾಗೇ ಸಮಸ್ಯೆ ಜೀವಂತವಾಗಿಟ್ಟು ಉಗ್ರ ಪ್ರತಿಭಟನೆಯ ಎದುರಿಸುತ್ತಾರಾ ಎನ್ನುವುದು ಕಾದು ನೋಡಬೇಕಿದೆ.
Leave a Comment