ಹೊನ್ನಾವರ ;ದೇಶÀದ ಅಭಿವೃದ್ಧಿಗೆ ಮಹÀತ್ವದ ಪಾತ್ರವಹಿಸುತ್ತಿರುವ ಕಾರ್ಮಿಕರ ಶ್ರಮ ಮಹÀತ್ತರವಾಗಿದ್ದು, ಕೂಲಿ ಕಾರ್ಮಿಕರ ಕುಟುಂಬದ ಶ್ರೇಯೋಭಿವೃದ್ಧಿಗೆ ಶ್ರಮಿಸಲು ನಾನು ಸದಾ ಸಿದ್ದನಾಗಿದ್ದೇನೆ ಎಂದು ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ ಹೇಳಿದರು. ಅವರು ಕಳೆದ ರವಿವಾರ ಹೊನ್ನಾವರದ ಪೋಲಿಸ್ ಮೈದಾನದಲ್ಲಿ ಶ್ರೀ ನವಜ್ಯೋತಿ ಕೂಲಿಕಾರ್ಮಿಕರ ಹೋರಾಟ ಸಂಘದ 7ನೇ ವರ್ಷದ ತಾಲೂಕಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮೇ 1 ಕಾರ್ಮಿಕರ ದಿನಾಚರಣೆ … [Read more...] about ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗೆ ಕಟಿಬದ್ದ, ಶಾಸಕಿ ಶಾರದಾ ಎಂ. ಶೆಟ್ಟಿ
National News
ಕಾರ್ಮಿಕರ ಹಕ್ಕುಗಳ ರಕ್ಷಣೆ ನಮ್ಮ ಹೊಣೆ
ಭಟ್ಕಳ:ಅಸಂಘಟಿತ ಕಾರ್ಮಿಕರಿಗೆ ಕನಿಷ್ಟ ಕೂಲಿ, ಕಾರ್ಮಿಕರ ಹಕ್ಕುಗಳ ರಕ್ಷಣೆ ನಮ್ಮ ಹೊಣೆ ಎನ್ನುವ ಕಾರ್ಯಕ್ರಮವನ್ನು ಸಿ.ಐ.ಟಿ.ಯು. ಭಟ್ಕಳದ ವತಿಯಿಂದ ಕಾರ್ಮಿಕ ದಿನಾಚರಣೆಯ ಅಂಗವಾಗಿ ಶಿರಾಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿ.ಐ.ಟಿ.ಯು. ರಾಜ್ಯ ಸಮಿತಿ ಸದಸ್ಯೆ ಗೀತಾ ನಾಯ್ಕ ಮಾತನಾಡಿ ಇಂದು ಕೇಂದ್ರ ಸರಕಾರ 44 ಕೇಂದ್ರ ಕಾರ್ಮಿಕ ಕಾನೂನನ್ನು ಸರಳೀಕರಿಸುವ ನೆಪದಲ್ಲಿ ಕಾರ್ಪೋರೇಟ್ ಬಂಡವಾಳಶಾಹಿ ಪರ ಕಾರ್ಮಿಕರ ವಿರುದ್ಧ ನೀತಿ ಮಾಡಲು ಹೊರಟಿದೆ … [Read more...] about ಕಾರ್ಮಿಕರ ಹಕ್ಕುಗಳ ರಕ್ಷಣೆ ನಮ್ಮ ಹೊಣೆ
ಬಾವಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಆಯತ್ಪಪಿ ಬಿದ್ದು ಸಾವು
ಭಟ್ಕಳ:ಬೆಳಕೆಯ ಶೆಟ್ಟಿಕೇರಿಯ ಮನೆಯೊಂದರ ಬಾವಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕೂಲಿ ಕಾರ್ಮಿಕನೊಬ್ಬ ಆಯ ತಪ್ಪಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಮೃತನನ್ನು ಶಿರೂರಿನ ಹಣಬಾರಕೇರಿಯ ಬಚ್ಚಾ ಮಂಜಾ ಹಣಬಾರ(55) ಎಂದು ಗುರುತಿಸಲಾಗಿದೆ. ಬೆಳಕೆಯ ಶೆಟ್ಟಿಕೇರಿಯ ಕೃಷ್ಣಾ ವೆಂಕಟ್ರಮಣ ನಾಯ್ಕ ಇವರ ಮನೆಯ ಬಾವಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾವಿಯ ಹಿಂಬದಿಯ ಮಣ್ಣು ಕುಸಿದು ಕೆಳಗೆ ಬಿದ್ದು ರಿಂಗ್ ಮಧ್ಯೆ ಸಿಲುಕಿದ್ದು ತೀವ್ರ … [Read more...] about ಬಾವಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಆಯತ್ಪಪಿ ಬಿದ್ದು ಸಾವು
ಅಂಗವಿಕಲೆ ಮನವಿಗೆ ಸ್ಪಂದಿಸಿದ ಶಾಸಕ ವೈದ್ಯ, ₹ 2 ಲಕ್ಷ ಚೆಕ್ ವಿತರಣೆ
ಭಟ್ಕಳ:ಅಂಗವಿಕಲೆಯೋರ್ವಳಿಗೆ ಕೃತಕ ಕಾಲು ಜೋಡಿಸಿಕೊಳ್ಳುವಲ್ಲಿ ಶಾಸಕ ಮಂಕಾಳ ವೈದ್ಯ ನೆರವಾಗಿದ್ದು ಇಂದು ಎಲ್ಲರಂತೆಯೇ ಅವಳು ಓಡಾಡಿಕೊಂಡಿದ್ದಾಳೆ. ಶಿರಾಲಿಯ ನಿವಾಸಿಯಾಗಿರುವ ಸುಮಾರಿಯಾ ಇಸೋಪ ಸಾಹೇಬ್ ಇವಳು ಎರಡೂ ಕಾಲಿಲ್ಲದೇ ಶಾಶ್ವತವಾಗಿ ಅಂಗವಿಕಲೆಯಾಗಿದ್ದಳು. ಆದರೂ ತನ್ನ ಛಲಬಿಡದೇ ಪದವಿಯನ್ನು ಪೂರೈಸಿ, ತಾನೂ ಸಹ ಇತರರಂತೆ ನಡೆದಾಡಬೇಕು ಎನ್ನುವ ಹಂಬಲ ಹೊಂದಿದವಳು. ಕೃತಕ ಕಾಲು ಜೋಡಿಸಿಕೊಳ್ಳಲು 4.5 ಲಕ್ಷ ರೂಪಾಯಿ ಬೇಕೆಂದು ತಿಳಿದಾಗ ತಮ್ಮಿಂದ ಕಷ್ಟಸಾಧ್ಯ … [Read more...] about ಅಂಗವಿಕಲೆ ಮನವಿಗೆ ಸ್ಪಂದಿಸಿದ ಶಾಸಕ ವೈದ್ಯ, ₹ 2 ಲಕ್ಷ ಚೆಕ್ ವಿತರಣೆ
ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ
ಭಟ್ಕಳ:ತಾಲೂಕಿನಲ್ಲಿ ರಾತ್ರಿ ಹಾಗೂ ಹಗಲು ಸಂದರ್ಭದಲ್ಲಿ ಗಸ್ತು ತಿರುಗಲು ಪೊಲೀಸ್ ಇಲಾಖೆಗೆ ನೀಡಲಾದ ನೂತನ ಹೊಯ್ಸಳ ವಾಹನವನ್ನು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾಧೀಕ್ ಮಟ್ಟಾ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳದ ಪೊಲೀಸ್ ಇಲಾಖೆಗೆ ಹೊಯ್ಸಳ ವಾಹನ ನೀಡಿರುವುದರಿಂದ ಅತೀ ಹೆಚ್ಚು ಪ್ರಯೋಜನವಾಗಲಿದೆ. ಇದರಿಂದ ಯಾವುದೇ ಪ್ರದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ತಕ್ಷಣ … [Read more...] about ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ


