ಹಳಿಯಾಳ:- ಪಟ್ಟಣದ ಶಿವಾಜಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದ ಪಿ.ಆರ್.ಓ/ಎ.ಪಿಆರ್.ಓಗಳಿಗೆ ತರಬೇತಿಯನ್ನು ನೀಡಲಾಯಿತು ಎಂದು ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ ತಿಳಿಸಿದರು, ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ತರಬೇತಿಯಲ್ಲಿ ಒಟ್ಟೂ 496 ಪಿ.ಆರ್.ಓ ಮತ್ತು ಎ.ಪಿ.ಆರ್.ಓ ಮತಗಟ್ಟೆ ಸಿಬ್ಬಂದಿಗಳಲ್ಲಿ 454 ಸಿಬ್ಬಂದಿಗಳು ಹಾಜರಾಗಿದ್ದರು. 42 ಪಿ.ಆರ್.ಓ ಮತ್ತು … [Read more...] about ಹಳಿಯಾಳ-ಜೋಯಿಡಾ ಮತಕ್ಷೇತ್ರದ ಪಿಆರ್ ಒ-ಎಪಿಆರ್ ಓ ಗಳಿಗೆ ಚುನಾವಣಾ ತರಬೇತಿ ಶಿಬಿರ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಸಾಹಿತ್ಯ ಪ್ರೇಮಿಗಳಿಂದ ದಿ.ಕವಿ ಬಿಎ ಸನದಿ ಪಾರ್ಥೀವ ಶರೀರದ ಅಂತಿಮ ದರ್ಶನ
ಹಳಿಯಾಳ:- ಕುಮಟಾದಿಂದ ಬೆಳಗಾವಿಗೆ ತೆರಳುತ್ತಿದ್ದ ದಿ. ಕವಿ ಬಿಎ ಸನದಿ ಅವರ ಪಾರ್ಥೀವ ಶರೀರದ ಅಂತೀಮ ಯಾತ್ರೆಯ ಸಂದರ್ಭದಲ್ಲಿ ಮಾರ್ಗ ಮಧ್ಯೆ ಹಳಿಯಾಳದ ರುಡಸೆಟ್ ಎದುರಿಗೆ ದಿವಂತಗರ ಪಾರ್ಥೀವ ಶರೀರಕ್ಕೆ ಹಳಿಯಾಳದ ಸಾಹಿತ್ಯ ಪ್ರೇಮಿಗಳು- ವಿವಿಧ ಸಂಘಟನೆಯವರು ಅಂತೀಮ ನಮನ ಸಲ್ಲಿಸಿದರು. ಸಾಹಿತಿ ಮಾಸ್ಕೇರಿ ಎಂ ನಾಯ್ಕ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಯ ಕರ್ನಾಟಕ ಸಂಘಟನೆಯ ವಿಲಾಸ ಕಣಗಲಿ, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, … [Read more...] about ಸಾಹಿತ್ಯ ಪ್ರೇಮಿಗಳಿಂದ ದಿ.ಕವಿ ಬಿಎ ಸನದಿ ಪಾರ್ಥೀವ ಶರೀರದ ಅಂತಿಮ ದರ್ಶನ
ದಿ.ಕವಿ ಬಿಎ ಸನದಿ ನಿಧನ – ಸಾಹಿತ್ಯ ರಂಗಕ್ಕೆ ತುಂಬಲಾರದ ನಷ್ಠ– ಸಚಿವ ಆರ್ ವಿ ದೇಶಪಾಂಡೆ ಸಂತಾಪ
ಹಳಿಯಾಳ:- ಖ್ಯಾತ ಕಥೆಗಾರ, ಅನುವಾದಕ, ವಿಮರ್ಶಕ, ನಾಟಕಕಾರ ಹಾಗೂ ಪಂಪ ಪ್ರಶಸ್ತಿ ವಿಜೇತರಾದ ಬಾಬಾಸಾಹೇಬ ಅಹಮದ್ಸಾಹೇಬ ಸನದಿ (ಬಿ.ಎ.ಸನದಿ) ಇವರ ನಿಧನದ ವಿಷಯ ತಿಳಿದು ತುಂಬಾ ದುಃಖವಾಗಿದೆ ಎಂದಿರುವ ಸಚಿವ ಆರ್.ವಿ.ದೇಶಪಾಂಡೆ ಸನದಿ ಯವರ ಅಗಲಿಕೆಯಿಂದ ಸಾಹಿತ್ಯ ರಂಗಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ಸಂತಾಪ ಸೂಚಿಸಿದ್ದಾರೆ. ಸರಳ, ಸಜ್ಜನ ಸ್ವಭಾವದ ಜಾತ್ಯಾತೀತ ವ್ಯಕ್ತಿತ್ವ ಹೊಂದಿದ ಸನದಿಯವರು ಎಲ್ಲಕ್ಕಿಂತ ಮಿಗಿಲಾಗಿ ಆದರ್ಶ … [Read more...] about ದಿ.ಕವಿ ಬಿಎ ಸನದಿ ನಿಧನ – ಸಾಹಿತ್ಯ ರಂಗಕ್ಕೆ ತುಂಬಲಾರದ ನಷ್ಠ– ಸಚಿವ ಆರ್ ವಿ ದೇಶಪಾಂಡೆ ಸಂತಾಪ
ಫೇಸಬುಕ್ ನಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿದ ಇಬ್ಬರು ವಶಕ್ಕೆ
ಹಳಿಯಾಳ :- ಸಾಮಾಜಿಕ ಜಾಲತಾಣ ಫೇಸಬುಕ್ನಲ್ಲಿ ಪಟ್ಟಣದ ಯುವಕನೋರ್ವ ಮಾಜಿ ಪ್ರಧಾನಿ ದಿ. ಇಂದಿರಾಗಾಂಧೀ ಅವರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ಬರೆದುಕೊಂಡಿದ್ದ ಹಾಗೂ ಆ ಹೇಳಿಕೆಯನ್ನು ಲೈಕ್ ಮಾಡಿದ ಇಬ್ಬರು ಯುವಕರನ್ನು ಹಳಿಯಾಳ ಪೋಲಿಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಪಟ್ಟಣದ ರಹವಾಸಿ ಸಂತೊಷ ರಗಟೆ ಎನ್ನುವಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಇಂದಿರಾಗಾಂಧೀ ಅವರು ಹಲವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಅವಹೇಳನಕಾರಿ ಬರೆದು ಪೋಸ್ಟ್ ಮಾಡಿದ್ದ ಇದಕ್ಕೆ … [Read more...] about ಫೇಸಬುಕ್ ನಲ್ಲಿ ಅವಹೇಳನಕಾರಿ ಸ್ಟೇಟಸ್ ಹಾಕಿದ ಇಬ್ಬರು ವಶಕ್ಕೆ
ಚುನಾವಣಾ ಅಧಿಕಾರಿಗಳಿಂದ ಮತ ಯಂತ್ರ ಭದ್ರತಾ ಕೊಠಡಿ ಪರಿಶೀಲನೆ
ಹಳಿಯಾಳ : ವಿದ್ಯುನ್ಮಾನ ಮತಯಂತ್ರಗಳ ಸಮೇತ ಇನ್ನಿತರ ಪರಿಕರಗಳು, ಸಿಬ್ಬಂದಿಗೆ ತರಬೇತಿ ಸೇರಿದಂತೆ ಲೋಕಸಭಾ ಚುನಾವಣೆಗೆ ಸಿದ್ದತೆಗಳು ಭರದಿಂದ ಸಾಗಿದೆ. ಜಿಲ್ಲಾ ಕೇಂದ್ರದಿಂದ ಮತಯಂತ್ರಗಳನ್ನು ತಂದು ತಾಲೂಕಿನ ಹವಗಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲಿ ನಿರ್ಮಿಸಲಾದ ಭದ್ರತಾ ಕೊಠಡಿಗಳಲ್ಲಿ ಇರಿಸಲಾಗಿದ್ದು ಅದಕ್ಕೆ ಸೂಕ್ತವಾದ ಪೋಲಿಸ್ ಭದ್ರತೆಯನ್ನು ನೀಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ ತಿಳಿಸಿದರು. ಭದ್ರತಾಕೋಠಡಿ ಇರುವ … [Read more...] about ಚುನಾವಣಾ ಅಧಿಕಾರಿಗಳಿಂದ ಮತ ಯಂತ್ರ ಭದ್ರತಾ ಕೊಠಡಿ ಪರಿಶೀಲನೆ



