ಹೊನ್ನಾವರ : ನಾಲ್ಕು ದಿನಗಳ ಕಾಲ ತಾಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸುವ ಕಾನೂನು ಸಾಕ್ಷರತಾ ರಥಕ್ಕೆ ಹಾಗೂ ಜನತಾ ನ್ಯಾಯಾಲಯದ ಅಭಿಯಾನಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿ. ಚೆನ್ನಕೇಶವ ರೆಡ್ಡಿ ಹಸಿರು ಬಾವುಟ ತೋರಿಸಿ ಚಾಲನೆ ನೀಡಿ, ಕಾನೂನಿನ ಅರಿವು ಎಲ್ಲರಿಗೆ ಇರಬೇಕು ಎಂಬ ಉದ್ದೇಶದಿಂದ ಕಾನೂನು ಸೇವಾ ಸಮಿತಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಈ ಕಾರ್ಯಕ್ರಮ ಏರ್ಪಡಿಸಿದ್ದು ಜನ ಇದರ ಪ್ರಯೋಜನ ಪಡೆಯಬೇಕು ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಮಧುಕರ ಪಿ. ಭಾಗವತ, … [Read more...] about ಕಾನೂನಿನ ಅರಿವು ಎಲ್ಲರಿಗೆ ಅಗತ್ಯ – ನ್ಯಾ. ಎಂ.ವಿ. ಚೆನ್ನಕೇಶವ ರೆಡ್ಡಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
ವೈದ್ಯಕೀಯ ಸೇವೆಯಲ್ಲಿ ಮಾನವೀಯತೆ ಮುಖ್ಯ – ರೆ.ಸಿ. ಮಾರಿಯಾ ಗೊರಟ್ಟಿ
ಹೊನ್ನಾವರ : ಆಧುನಿಕ ಯುಗದಲ್ಲಿ ವೈದ್ಯಕೀಯ ಸೇವಾ ಸಂಸ್ಥೆಗಳು, ಉಪಕರಣಗಳು ಹೆಚ್ಚಿವೆ. ಇದರ ಜೊತೆಗೆ ಮಾನವೀಯತೆ ಮುಖ್ಯವಾದಾಗ ಎಲ್ಲರಿಗೂ ಆರೋಗ್ಯ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ಸೇಂಟ್ ಇಗ್ನೇಷಿಯಸ್ ಸಮೂಹ ಆರೋಗ್ಯ ಸಂಸ್ಥೆಗಳ ನಿರ್ದೇಶಕಿ ರೆ.ಸಿ. ಮಾರಿಯಾ ಗೊರಟ್ಟಿ ಹೇಳಿದರು. ಅವರು ಇಂದು ಮಂಗಳೂರಿನ ಸಿಎಡಿ ಇವರ ಪ್ರೊಜೆಕ್ಟ್ ಪುನರುಜ್ಜೀವನ ಯೋಜನೆಯ ಅಂಗವಾಗಿ ಉಚಿತವಾಗಿ ಇಸಿಜಿ ಮಾಡಲು ದೇಣಿಗೆಯಾಗಿ ಬಂದ 60ಸಾವಿರ ರೂಪಾಯಿ ಮೌಲ್ಯ ಇಸಿಜಿ ಉಪಕರಣವನ್ನು … [Read more...] about ವೈದ್ಯಕೀಯ ಸೇವೆಯಲ್ಲಿ ಮಾನವೀಯತೆ ಮುಖ್ಯ – ರೆ.ಸಿ. ಮಾರಿಯಾ ಗೊರಟ್ಟಿ
ಹೊನ್ನಾವರ ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಸರ್ವಾಧ್ಯಕ್ಷರಾಗಿ ಆಯ್ಕೆ.
ಹೊನ್ನಾವರ: ಮೇ ಮೊದಲವಾರದಲ್ಲಿ ತಾಲೂಕಿನ ಮೂಡ್ಕಣಿಯಲ್ಲಿ ನಡೆಸಲು ಉದ್ದೇಶಿಸಲಾದ ಹೊನ್ನಾವರ ತಾಲೂಕಾ `9ನೇ ಕನ್ನಡ ಸಾಹಿತ್ಯ ಸಮ್ಮೇಳನ'ದ ಸರ್ವಾಧ್ಯಕ್ಷರಾಗಿ ನಿವೃತ್ತ ಕನ್ನಡ ಪ್ರಾಧ್ಯಾಪಕ, ಸಾಹಿತಿ ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಅವರು ಸರ್ವಾಧ್ಯಕ್ಷರಾಗಿ ಆಯ್ಕೆಯಾದರು. ಕಸಾಪದ ಆಜೀವ ಸದಸ್ಯರ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಸ್ತಾಪ ಬಂದಾಗ ಪ್ರೊ. ಶ್ರೀಪಾದ ಹೆಗಡೆ ಕಣ್ಣಿ, ಮಂಜುಸುತ ಜಲವಳ್ಳಿ, ಡಾ.ಸುರೇಶ ನಾಯ್ಕ, ಮಾಧವಿ ಭಂಡಾರಿ ಇವರ ಹೆಸರುಗಳು … [Read more...] about ಹೊನ್ನಾವರ ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಸರ್ವಾಧ್ಯಕ್ಷರಾಗಿ ಆಯ್ಕೆ.
ಕಾಂಗ್ರೇಸ್–ಜೆ.ಡಿ.ಎಸ್. ಮೈತ್ರಿ ಸಭೆಯಲ್ಲಿ ಘೋಷಣೆ ಅನಂತಕುಮಾರ ಸೋಲು ನಮ್ಮ ಗುರಿ;ಜಗದೀಪ ಎನ್.ತೆಂಗೇರಿ
ಹೊನ್ನಾವರ : ಕಳೆದ ಇಪ್ಪತೈದು ವರ್ಷಗಳಿಂದ ಉತ್ತರಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿ ಐದು ಬಾರಿ ಸಂಸತ್ ಸದಸ್ಯರಾಗಿರುವ ಕೆನರಾ ಸಂಸದ ಅನಂತಕುಮಾರ ಹೆಗಡೆಯವರ ಸಾಧನೆ ಶೂನ್ಯವಾಗಿದ್ದು ಈ ಬಾರಿ ಅನಂತಕುಮಾರ ಹೆಗಡೆಯನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದೇ ನಮ್ಮೇಲ್ಲರ ಗುರಿ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಘೋಷಿಸಿದರು. ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆದ ಕಾಂಗ್ರೇಸ್ ಜೆ.ಡಿ.ಎಸ್. ಮೈತ್ರಿಕೂಟದ ಜಂಟಿ … [Read more...] about ಕಾಂಗ್ರೇಸ್–ಜೆ.ಡಿ.ಎಸ್. ಮೈತ್ರಿ ಸಭೆಯಲ್ಲಿ ಘೋಷಣೆ ಅನಂತಕುಮಾರ ಸೋಲು ನಮ್ಮ ಗುರಿ;ಜಗದೀಪ ಎನ್.ತೆಂಗೇರಿ
ಲಯನ್ಸ್ ಕ್ಲಬ್ ವಾರ್ಷಿಕ ಕಾರ್ಯಕ್ರಮ
ಹೊನ್ನಾವರ ಲಯನ್ಸ್ ಕ್ಲಬ್ ನ ವಾರ್ಷಿಕ ಶುಭಾಶಯ ಕಾರ್ಯಕ್ರಮ ಪ್ರಭಾತನಗರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ರವಿವಾರ ನಡೆಯಿತು.ಲಯನ್ಸ್ ಕ್ಲಬ್ ಗೆ ಆಪೀಷಿಯಲ್ ವಿಸಿಟರ್ ಆಗಿ ಪಾಲ್ಗೊಂಡ ಲಯನ್ ಡಿಸ್ಟ್ರಿಕ್ಟ್ ಗವರ್ನರ್ ಮೋನಿಕಾ ಪಿ. ಸಾವಂತ ಮಾತನಾಡಿ, ದೇವರ ಕ್ರಪೆಯಿಂದ ಪಡೆದ ಮನುಷ್ಯ ಜನ್ಮವನ್ನು ಸೇವೆಯಲ್ಲಿ ತೊಡಗುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು. ಲಯನ್ಸ್ ಕ್ಲಬ್ ಸಾಮಾಜಿಕ ಸೇವೆಯಲ್ಲಿ ಗಣನೀಯ ಸಾಧನೆ ಮಾಡುತ್ತಿದೆ. ಲಯನ್ಸ್ ಕ್ಲಬ್ ಜಗತ್ತಿನಲ್ಲಿ 212 ದೇಶಗಳಲ್ಲಿ … [Read more...] about ಲಯನ್ಸ್ ಕ್ಲಬ್ ವಾರ್ಷಿಕ ಕಾರ್ಯಕ್ರಮ




