ಹಳಿಯಾಳ :- ಮಾನಸಿಕ ಖಿನ್ನತೆಗೆ ಒಳಗಾಗಿ ತನ್ನ 5 ವರ್ಷದ ಹೆಣ್ಣು ಮಗುವಿನೊಂದಿಗೆ ಊರು-ಬಿದಿ ಸಂಚರಿಸುತ್ತಾ ಭಿಕ್ಷಾಟನೆ ಮಾಡುತ್ತಿದ್ದ ತಂದೆ ಹಾಗೂ ಮಗಳನ್ನು ರಕ್ಷಿಸಿ, ಮಗುವನ್ನು ಕಾರವಾರದಲ್ಲಿರುವ ಮಕ್ಕಳ ರಕ್ಷಣಾ ಕೇಂದ್ರಕ್ಕೆ ರವಾನಿಸುವ ಮೂಲಕ ಮಾನವೀಯತೆ ಮೆರೆದ ವಿದ್ಯಮಾನ ಗುರುವಾರ ಪಟ್ಟಣದಲ್ಲಿ ನಡೆದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ಚಿಕ್ಕೋಡಿ ಪಟ್ಟಣದ ಘಾಲೆ ಗಲ್ಲಿಯ ನಿವಾಸಿ ಅಬ್ದುಲ್ ಮಹ್ಮದ ಮಕಾನದಾರ ತನ್ನ 5 ವರ್ಷದ ಹೆಣ್ಣು ಮಗು ಬೀಬಿಫಾತೀಮಾಳೊಂದಿಗೆ … [Read more...] about ಹಳಿಯಾಳದಲ್ಲಿ ಭಿಕ್ಷುಕ ತಂದೆ ಮಗಳ ರಕ್ಷಣೆ – ಮಗು ಸಾಂತ್ವನ ಕೇಂದ್ರಕ್ಕೆ ಹಸ್ತಾಂತರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಗುರುಕುಲಕ್ಕೆ ಸಹಾಯಹಸ್ತ ನೀಡಿದ ಗೇರುಸೊಪ್ಪಾದ ಜ್ಯೂತಿ ಯುವಕ ಸಂಘ
ಕನ್ನಡ ಜ್ಯೋತಿ ಯುವಕ ಸಂಘ ಗೇರುಸೊಪ್ಪಾ ಇವರ ವತಿಯಿಂದ ಗುರುಕುಲಕ್ಕೆ ಧನಸಹಾಯ ಜೊತೆ ಅಲ್ಲಿಯ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು ವಿತರಣೆ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ. ಹೊನ್ನಾವರ ತಾಲೂಕಿನ ವಿವಿದಡೆ ಸಮಾಜಮುಖಿ ಕಾರ್ಯನಡೆಸುವ ಮೂಲಕ ಇತರೆ ಸಂಘಟನೆಗೆ ಮಾದರಿಯಾಗಿರುವ ಗೇರುಸೊಪ್ಪಾ ಕನ್ನಡ ಜ್ಯೂತಿ ಯುವಕ ಸಂಘ ತಾಲೂಕಿನ ಕರ್ಕಿಯ ಶ್ರೀ ದಯಾಶಂಕರ ಗುರುಕುಲದ ವಿದ್ಯಾರ್ಥಿಗಳಿಗೆ ಪೋಷಣೆಯ ಸಲುವಾಗಿ 5 ಸಾವಿರ ಮೊತ್ತದ ಚೆಕ್ ವಿತರಣೆ ನಡೆಸಿದರು. ಅಲ್ಲದೇ … [Read more...] about ಗುರುಕುಲಕ್ಕೆ ಸಹಾಯಹಸ್ತ ನೀಡಿದ ಗೇರುಸೊಪ್ಪಾದ ಜ್ಯೂತಿ ಯುವಕ ಸಂಘ
ಹಳಿಯಾಳ ಸರ್ಕಾರಿ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿಗಳಿಂದ ಪ್ರತಿಭಟನೆ- ವೇತನ ನೀಡದೆ ಕೆಲಸದಿಂದ ವಜಾ ಮಾಡಿರುವ ಆರೋಪ.
ಹಳಿಯಾಳ :- 7 ತಿಂಗಳಿಂದ ವೇತನ ನೀಡದೆ ಸತಾಯಿಸಿದ್ದು ಅಲ್ಲದೇ ಕಳೆದ 2 ತಿಂಗಳಿಂದ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಹಳಿಯಾಳ ತಾಲೂಕಾ ಆಸ್ಪತ್ರೆಯಲ್ಲಿ ಹೊರಗುತ್ತಿಗೆ(ನಾನ ಕ್ಲಿನಿಕ್) ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ತಾಲೂಕಾ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ವಿದ್ಯಮಾನ ಮಂಗಳವಾರ ನಡೆಯಿತು. ಕೆಲಸದಿಂದ ವಂಚಿತರಾಗಿರುವ 9 ಜನ ಮಹಿಳಾ ಸಿಬ್ಬಂದಿಗಳು ತಮ್ಮ ಕುಟುಂಬದವರೊಡನೆ ಪಟ್ಟಣದ ತಾಲೂಕಾ ಆಸ್ಪತ್ರೆ ಎದುರು ತಮಗಾದ ಅನ್ಯಾಯದ … [Read more...] about ಹಳಿಯಾಳ ಸರ್ಕಾರಿ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿಗಳಿಂದ ಪ್ರತಿಭಟನೆ- ವೇತನ ನೀಡದೆ ಕೆಲಸದಿಂದ ವಜಾ ಮಾಡಿರುವ ಆರೋಪ.
ವೃದ್ದನ ಕಿಸೆಗೆ ಬ್ಲೇಡ್- ಹಳಿಯಾಳದಲ್ಲಿ ಪಿಕ್ ಪಾಕೆಟ್ ಮಾಡಿದ ಇಬ್ಬರು ಕಳ್ಳರ ಬಂಧನ
ಹಳಿಯಾಳ :- ಬಸ್ನಲ್ಲಿ ವೃದ್ದರೊಬ್ಬರ ಕಿಸೆಗೆ ಬ್ಲೇಡ್ ಹಾಕಿ 24 ಸಾವಿರ ರೂ. ಎಗರಿಸಿದ್ದ ಇಬ್ಬರು ಕಿಸೆಗಳ್ಳರನ್ನು ಪ್ರಯಾಣಿಕರ ಸಹಕಾರದೊಂದಿಗೆ ಬಂಧಿಸುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಕಿಸೆಗಳ್ಳರನ್ನು ಹುಬ್ಬಳ್ಳಿಯ ಸೆಟಲಮೆಂಟ್ ಪ್ರದೇಶದ ಸದ್ದಾಂ ಇಸ್ಮಾಯಿಲಸಾಬ ರಾಯಚೂರಿ ಹಾಗೂ ಮಂಟೂರು ರೋಡನ ನಾಗರಾಜ ಶಿವಪ್ಪಾ ಹೊಸಕೊಟಿ ಎಂದು ಗುರುತಿಸಲಾಗಿದ್ದು. ಇವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪಿಎಸ್ಐ ಆನಂದಮೂರ್ತಿ ಅವರು ಪಿಕಪಾಕೆಟ್ ಪ್ರಕರಣ … [Read more...] about ವೃದ್ದನ ಕಿಸೆಗೆ ಬ್ಲೇಡ್- ಹಳಿಯಾಳದಲ್ಲಿ ಪಿಕ್ ಪಾಕೆಟ್ ಮಾಡಿದ ಇಬ್ಬರು ಕಳ್ಳರ ಬಂಧನ
ಅಧಿಕಾರಿಗಳು ಗೈರು – ಗ್ರಾಮಸಭೆ ರದ್ದು- ಹಳಿಯಾಳದ ಕೆರವಾಡದಲ್ಲಿ ಘಟನೆ
ಹಳಿಯಾಳ :- ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿರದ ಗ್ರಾಮ ಹಾಗೂ ವಾರ್ಡ ಸಭೆಯನ್ನು ಗ್ರಾಮಸ್ಥರು ತೀವೃವಾಗಿ ವಿರೋಧಿಸಿದ್ದರಿಂದ ತಾಲೂಕಿನ ಕೆರವಾಡ ಗ್ರಾಮದಲ್ಲಿ ಮಂಗಳವಾರ ನಡೆಯಬೇಕಿದ್ದ ಸಭೆಗಳು ರದ್ದಾಗಿರುವ ಘಟನೆ ನಡೆಯಿತು. ಪಟ್ಟಣದಿಂದ 5 ಕೀಮಿ ಅಂತರದಲ್ಲಿರುವ ತಾಲೂಕಿನ ಹವಗಿ ಗ್ರಾಮ ಪಂಚಾಯತಗೆ ಬರುವ ಕೆರವಾಡ ಗ್ರಾಮದಲ್ಲಿ ಗ್ರಾಮ ಸಭೆ ಹಾಗೂ ವಾರ್ಡ ಈ 2 ಸಭೆಗಳನ್ನು ಆಯೋಜಿಸಲಾಗಿತ್ತು. ಸಭೆಯ ಕುರಿತು ಸರಿಯಾಗಿ ಮಾಹಿತಿಯನ್ನು ನೀಡದೆ ಕಾಟಾಚಾರಕ್ಕೆ … [Read more...] about ಅಧಿಕಾರಿಗಳು ಗೈರು – ಗ್ರಾಮಸಭೆ ರದ್ದು- ಹಳಿಯಾಳದ ಕೆರವಾಡದಲ್ಲಿ ಘಟನೆ




