ಹೊನ್ನಾವರ:ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬೂತ್ ಮತ್ತು ಘಟಕ ಸಮಿತಿಗಳ ಪದಾಧಿಕಾರಿಗಳ ಬೃಹತ್ ಸಮಾವೇಶ ಅ. 2 ರಂದು ಮಧ್ಯಾಹ್ನ 3 ಗಂಟೆಗೆ ಕುಮಟಾದ ಹವ್ಯಕ ಸಭಾಭವನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಮತ್ತು ಬೆಳಗಾವಿ ವಿಭಾಗದ ಪಕ್ಷದ ಉಸ್ತುವಾರಿ ಮಾಣಿಕಂ ಠಾಗೋರ ಉಪಸ್ಥಿತರಿರುವರು. ಸಚಿವ ಆರ್.ವಿ. ದೇಶಪಾಂಡೆ ಸಮಾವೇಶ ಉದ್ಘಾಟಿಸಲಿದ್ದಾರೆ. ಶಾಸಕಿ ಶಾರದಾ ಎಂ. ಶೆಟ್ಟಿಯವರ ನೇತ್ರತ್ವದಲ್ಲಿ ನಡೆಯುವ ಈ ಸಮಾವೇಶದಲ್ಲಿ … [Read more...] about ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬೃಹತ್ ಸಮಾವೇಶ
ಸಮಿತಿ
ಕೊಂಕಣ ಖಾರ್ವಿ ಸಮಾಜದಿಂದ ಗುರು ಪೂರ್ಣಿಮೆ ಆಚರಣೆ
ಹೊನ್ನಾವರ:ಶ್ರೀ ಮಾರಮ್ಮಾ ಯಾನೆ ದಂಡಿನ ದುರ್ಗಾದೇವಿ ದೇವಸ್ಥಾನ, ದುರ್ಗಾಕೇರಿ ಹಾಗೂ ಕೊಂಕಣ ಖಾರ್ವಿ ಸಮಾಜ ಗುರುದರ್ಶನ ಸಮಿತಿ ಆಶ್ರಯದಲ್ಲಿ ಶೃಂಗೇರಿ ಜಗದ್ಗುರು ಪೀಠದ ಮಾರ್ಗದರ್ಶನದಲ್ಲಿ ಹೊನ್ನಾವರ ತಾಲೂಕಿನ ಕೊಂಕಣಿ ಖಾರ್ವಿ ಸಮಾಜದವರು ಗುರುಪೂರ್ಣಿಮೆ ಉತ್ಸವವನ್ನು ಆಚರಿಸಿದರು. ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಹಾಗೂ ತತ್ಕರ ಕಮಲ ಸಂಜಾತ ಶ್ರೀ ಶ್ರೀ ವಿಧು ಶೇಖರ ಭಾರತೀ ಮಹಾಸ್ವಾಮಿಗಳವರ ಸಂಕಲ್ಪದಂತೆ ಧರ್ಮಾಧಿಕಾರಿ … [Read more...] about ಕೊಂಕಣ ಖಾರ್ವಿ ಸಮಾಜದಿಂದ ಗುರು ಪೂರ್ಣಿಮೆ ಆಚರಣೆ
ವಾ.ಕ.ರ.ಸಾ.ಸಂ ನಿವೃತ್ತ ನೌಕರ ಪ್ರತಿಭಟನೆ
ಕಾರವಾರ:ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಶಿಫಾರಸ್ಸಿನಂತೆ ಮಾಸಿಕ ಪಿಂಚಣಿ ಮತ್ತು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುವಂತೆ ಆಗ್ರಹಿಸಿ ವಾ.ಕ.ರ.ಸಾ.ಸಂ. ನಿವೃತ್ತ ನೌಕರರ ಸಂಘದವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ನಂತರ ಅಪರ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಭಗತ್ ಸಿಂಗ್ ಕೋಶ್ಯಾರಿ ಸಮಿತಿ ಸಂಸತ್ಗೆ ನೀಡಿದ ವರದಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿಲ್ಲ. 21 ಸಾವಿರ … [Read more...] about ವಾ.ಕ.ರ.ಸಾ.ಸಂ ನಿವೃತ್ತ ನೌಕರ ಪ್ರತಿಭಟನೆ
ಶಿವಾನಂದ ಹೆಗಡೆ ಪಕ್ಷಕ್ಕೆ ಹಾನಿ ಮಾಡಿದ್ದಾರೆ:ತಾರಾ ಗೌಡ
ಹೊನ್ನಾವರ:ಶಿವಾನಂದ ಹೆಗಡೆ ಕಡತೋಕ ಅವರು 3 ವರ್ಷಗಳ ಅವಧಿ ಸಾಲದೇ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹುದ್ದೆಯನ್ನು ಕಳೆದ 6 ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಪಕ್ಷಕ್ಕೆ ಹಾನಿ ತರುವ ಕೆಲಸ ಮಾಡಿದ್ದಾರೆ. ಇವರು ಈಗ ಇತರ ಸಮಾಜದ ಬಗ್ಗೆ ಅನುಕಂಪ ತೋರಿಸುತ್ತಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ತಾರಾ ಗೌಡ ಹೇಳಿದರು. ಪಟ್ಟಣದ ಸಾಗರ ರೆಸಿಡೆನ್ಸಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಗಿದ್ದರೆ … [Read more...] about ಶಿವಾನಂದ ಹೆಗಡೆ ಪಕ್ಷಕ್ಕೆ ಹಾನಿ ಮಾಡಿದ್ದಾರೆ:ತಾರಾ ಗೌಡ
ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿಯ ಹೋರಾಟ ಸಮಿತಿಯ ಉದ್ಘಾಟನೆ
ದಾಂಡೇಲಿ :ನಗರದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿಯ ಹೋರಾಟ ಸಮಿತಿಯ ಉದ್ಘಾಟನಾ ಸಮಾರಂಭ ನೆರವೇರಿತು. ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಮಿಕರ ಮುಖಂಡರಾದ ಎಂ.ಬಿ ಕಟ್ಟಿ ಸಮಿತಿಯ ಉದ್ಘಾಟನೆ ನೆರವೇರಿಸಿ ಸಮಿತಿಯೂ ಪಕ್ಷಾತೀತವಾಗಿ ಹಾಗೂ ಜಾತಾತೀತವಾಗಿ ಕಾರ್ಯ ನಿರ್ವಹಿಸಿ ದಾಂಡೇಲಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಮುಂದಾಗಲಿ ಎಂದರು. ಮುಖ್ಯ … [Read more...] about ದಾಂಡೇಲಿ ತಾಲೂಕು ಸಮಗ್ರ ಅಭಿವೃದ್ಧಿಯ ಹೋರಾಟ ಸಮಿತಿಯ ಉದ್ಘಾಟನೆ