ಹೊನ್ನಾವರ:
ಇತ್ತೀಚೆಗೆ ನಡೆದ ರೈಲು ಅಪಘಾತವೊಂದರಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದ ಎಸ್.ಡಿ.ಎಂ. ಕಾಲೇಜಿನ ಸಿಬ್ಬಂದಿ ಸೇವಂತಿ ತಾಂಡೇಲ ಅವರ ಕುಟುಂಬಕ್ಕೆ ಕಾಲೇಜಿನ ವತಿಯಿಂದ ಧನ ಸಹಾಯ ನೀಡಲಾಯಿತು.
ಶುಕ್ರವಾರ ಪ್ರಾಚಾರ್ಯರು ಹಾಗೂ ಕೆಲ ಸಿಬ್ಬಂದಿಗಳೊಂದಿಗೆ ಪಟ್ಟಣದ ತಗ್ಗುಪಾಳ್ಯದಲ್ಲಿರುವ ಸೇವಂತಿ ಅವರ ಮನೆಗೆ ತೆರಳಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಂದ ಸಂಗ್ರಹವಾದ 25.5 ಸಾವಿರ ರೂಪಾಯಿಯನ್ನು ಸೇವಂತಿ ಅವರಿಗೆ ಹಸ್ತಾಂತರಿಸಿದರು.
ಪ್ರಾಚಾರ್ಯ ಪ್ರೊ.ಎಸ್.ಎಸ್.ಹೆಗಡೆ ಈ ಸಂದರ್ಭದಲ್ಲಿ ಮಾತನಾಡಿ,”ಬಡತನದಲ್ಲಿರುವ ಕಾಲೇಜಿನ ಸಿಬ್ಬಂದಿಗೆ ಮಾನವೀಯ ನೆಲೆಯಲ್ಲಿ ಆರ್ಥಿಕ ಸಹಾಯ ನೀಡುವ ಮೂಲಕ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಾಮಾಜಿಕ ಬದ್ಧತೆ ತೋರಿದ್ದಾರೆ.ಸೇವಂತಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ’ಎಂದು ಹೇಳಿದರು.
ಪ್ರಾಧ್ಯಾಪಕರಾದ ಡಾ.ವಿ.ಎಂ.ನಾಯ್ಕ,ಡಾ.ರೇಣುಕಾದೇವಿ ಗೋಳಿಕಟ್ಟೆ,ಡಾ.ಎಂ.ಆರ್.ನಾಯಕ,ಎಂ.ಜಿ.ಹೆಗಡೆ ಹಾಜರಿದ್ದರು.
ಸೇವಂತಿ ತಾಂಡೇಲ ಎಸ್.ಡಿ.ಎಂ.ಕಾಲೇಜಿನಲ್ಲಿ ಜವಾನಳಾಗಿ ಕೆಲಸ ಮಾಡುತ್ತಿದ್ದು ಅವರ ಪತಿ ವೆಂಕಟೇಶ ತಾಂಡೇಲ ರೈಲು ಬಡಿದು ಇತ್ತೀಚೆಗೆ ಮೃತಪಟ್ಟಿದ್ದಾರೆ.
Leave a Comment