ಹೊನ್ನಾವರ;
‘ತಾಲೂಕಿನ ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಿತು. , ಮಂಕಿ ಬ್ಲಾಕ್ ಕಾಂಗ್ರೇಶ ಅಧ್ಯಕ್ಷ ಚಂದ್ರಶೇಖರ ಗೌಡ, ಅಧ್ಯಕ್ಷತೆಯನ್ನು ವಹಿಸಿದ್ದರು.
ಹೊನ್ನಾವರ ಭಟ್ಕಳ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ಮಂಕಾಳ ವೈದ್ಯ ಮಾತನಾಡಿ ಸಾಮಾನ್ಯ ಬಡ ಜನರಿಗೆ ಏನು ಕೊಡಬೇಕು ಎಂದು ನಾನು ಕಲಿತಿದ್ದೇನೆ ನನ್ನ ಮೊದಲ ಆದ್ಯತೆ ಶಿಕ್ಷಣ. ಚಿತ್ತಾರ ಅಭಿವೃದ್ದಿಯಾಗಬೇಕಾದರೆ ಕೇವಲ ರಸ್ತೆ ಮಾಡಿದರೆ ಹಾಗೂ ಬ್ರೀಡ್ಜ ಮಾಡಿದರೆ ಆಗುವುದಿಲ್ಲ. ಬದಲಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಪಡೆಯುವಂತಾದರೆ ಯಾವ ರಾಜಕಾರಣಿಯು ನಿಮ್ಮ ಊರಿಗೆ ಅವಶ್ಯಕತೆ ಇಲ್ಲ. ಯಾವುದೇ ಗ್ರಾಮ ಅಭಿವೃದ್ದಿಯಾಗಬೇಕಾದರೆ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಬೇಕು ಎಂದರು. ಪ್ರತಿಯೊಂದು ಮನೆಗೆ ಕರೆಂಟ್, ಪ್ರತಿಯೊಂದು ಮನೆಗೆ ಗ್ಯಾಸ್ ಹಾಗೂ ಗುಡಿಸಲು ಮುಕ್ತ ಮನೆ ಮಾಡಬೇಕು.. ನಾನು ಜಾತಿ, ಧರ್ಮ, ಪಕ್ಷ ನೋಡಿ ಕೆಲಸ ಮಾಡುತ್ತಿಲ್ಲ. ಎಲ್ಲಾ ಬಡ ಜನರಿಗೆ ಮನೆಯನ್ನು ಕೊಡುವಂತಹ ವ್ಯವಸ್ಥೆ ಮಾಡಿದ್ದೇನೆ ಎಂದರು..
ನಂತರ ಜಿ ಪಂ ಸದಸ್ಯ ಪುಷ್ಪಾ ನಾಯ್ಕ ಮಾತನಾಡಿ ಶಾಸಕರು ಯಾವ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂಬುದು ಪ್ರತಿಯೊಬ್ಬ ನಾಗರಿಕರಿಗೂ ಗೊತ್ತಿದೆ ನಾವೂ ಕೆಲಸವನ್ನು ಮಾಡಿರುವಂತಹದ್ದು ಪ್ರಚಾರ ಮಾಡಿಕೊಳ್ಳುತ್ತಾ ಇಲ್ಲ. ಬಿ ಜೆ ಪಿ ಯವರು ಸಣ್ಣ ಸಣ್ಣ ಕೆಲಸಕ್ಕೂ ಕಾರ್ಯಕ್ರಮ ಮಾಡಿಕೊಂಡು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಆದರೆ ನಾವು ಪ್ರಚಾರವನ್ನು ಮಾಡಿಕೊಳ್ಳದೆ ಕೆಲಸವನ್ನು ಮಾಡುತ್ತಿದ್ದೇವೆ. ಗ್ರಾಮ ಪಂಚಾಯತ್, ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತ ಶಾಸಕರು ಹಾಗೂ ಸರ್ಕಾರ ಕೂಡಾ ನಮ್ಮದೇ ಆಗಿರುವುದರಿಂದ ನಾವೂ ಕೆಲಸವನ್ನು ಮಾಡಿದರೂ ಸಹ ಬಿಜೆಪಿಯವರು ಯಾವುದೇ ಕೆಲಸವನ್ನು ಮಾಡದೆ ತಾವೆ ಕೆಲಸವನ್ನು ಮಾಡಿದ್ದು ಅಂತ ಪ್ರಚಾರವನ್ನು ಪಡೆಯುತ್ತಿದ್ದಾರೆ ಅದಕ್ಕಾಗಿ ನಾವೂ ಏನು ಕೆಲಸವನ್ನು ಮಾಡಿದ್ದಿವಿ ಎಂಬುದು ಅದನ್ನು ಜನರ ಬಳಿ ತೆಗೆದುಕೊಂಡು ಹೊಗಬೇಕಾಗಿದೆ. ಜನರ ಸಮಸ್ಯೆಯನ್ನು ಕೆಳಿದಾಗ ಕುಡಿಯುವ ನೀರಿನ ಯೋಜನೆ, ಕರೆಂಟ್ ಸಮಸ್ಯೆ, ಡಾಂಬರ್ ರಸ್ತೆ, ಹೈಸ್ಕೂಲ್ ಗ್ರೌಂಡ್ ಮುಂತಾದ ಸಮಸ್ಯೆಯನ್ನು ಜನರು ಮಂಕಾಳು ವೈದ್ಯರ ಬಳಿ ಮನವಿ ಮಾಡಿಕೊಂಡರು. ಆದಷ್ಟು ಬೇಗನೆ ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದರು ..
ಈ ಸಂಧರ್ಬದಲ್ಲಿ ಮಾಜಿ ಜಿ ಪಂ ಕ್ರಷ್ಣ ಗೌಡ, ಮಂಕಿ ಬ್ಲಾಕ್ ಕಾಂಗ್ರೇಶ ಅಧ್ಯಕ್ಷ ಚಂದ್ರಶೇಖರ ಗೌಡ, ಮಂಕಿ ಗ್ರಾ ಪಂ ಅಧ್ಯಕ್ಷ ಗೋವಿಂದ ನಾಯ್ಕ, ಚಿತ್ತಾರ ಗ್ರಾ ಪಂ ಅಧ್ಯಕ್ಷ ಶ್ರೀಮಾಲಾ ಗೌಡ, ಈರಮ್ಮ ನಾಯ್ಕ, ವಾಮನ್ ನಾಯ್ಕ, ರಾಜೀವ ನಾಯ್ಕ, ಈಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು…
Leave a Comment