ಕುಮಟಾ:
ಕುಮಟಾ ಹಿರಿಯ ಪ್ರಾಥಮಿಕ ಶಾಲೆ ತೊರ್ಕೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಕಾರ್ಯುಕ್ರಮ ಉದ್ಘಾಟಿಸಿ ಮಾತನಾಡಿ ಈ ಶಾಲೆಯು 150ನೇ ವಸಂತಕ್ಕೆಕಾಲಿಡುತ್ತಿರುವ ಈ ಸುಸಂದರ್ಭದಲ್ಲಿ ಶಾಲಾ ಶಿಕ್ಷಕರು ಆಡಳಿತ ಮಂಡಳಿ ಮತ್ತುಊರ ನಾಗರಿಕರುತನು,ಮನ,ಧನದಿಂದ ಸಹಕರಿಸಿ ಮಕ್ಕಳಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವಿಶೇಷವಾದ ವೇದಿಕೆ ನಿರ್ಮಿಸಿದ್ದು ಇದರಲ್ಲಿಎಲ್ಲಾ ಪಾಲಕರು ಮತ್ತುಊರ ನಾಗರಿಕರು ಭಾಗವಹಿಸಿರುವುದು ಸಮುದಾಯದತ್ತ ಶಾಲೆ ಈ ಕಾರ್ಯಕ್ರಮವನ್ನುಅರ್ಥಪೂರ್ಣವಾಗಿ ಆಚರಿಸಿದಂತಾಗಿದೆ.
ಈ ಶಾಲೆ ಅನೇಕ ಮಹನೀಯರಿಗೆ ಪ್ರಾಥಮಿಕ ಹಂತದ ಶಿಕ್ಷಣವನ್ನು ನೀಡಿದ ವಿದ್ಯಾಕೇಂದ್ರವಾಗಿದೆ.ಈ ಶಾಲೆಯನ್ನು ಉಳಿಸುವ ಮತ್ತು ಬೆಳೆಸುವತ್ತ ಎಲ್ಲರೂ ಸಹಕರಿಸಿ ಹಿಂದುಳಿದ ವರ್ಗದವರೆ ಶಿಕ್ಷಣ ಪಡೆಯುತ್ತಿರುವ ಈ ಶಾಲೆಯಲ್ಲಿಉತ್ತಮ ಶಿಕ್ಷಕರು ಮತ್ತುಜೀವನಕ್ಕೆ ಬೇಕಾದಶಿಸ್ತು,ಊರಿನವರ ಪ್ರತಿಭೆಗೆತಕ್ಕಂತೆ ಅವಕಾಶಗಳು ದೊರೆಯುತ್ತಿದ್ದುಇದೊಂದು ಮಾದರಿ ಶಾಲೆ ಎಂದು ವ್ಯಾಖ್ಯಾನಿಸಿದರು.
ಈ ಸಂದರ್ಭದಲ್ಲಿಜಿಲ್ಲಾ ಪಂಚಾಯತ ಸದಸ್ಯ ಪ್ರದೀಪ ನಾಯಕ ಮಾತನಾಡಿ ಈ ಶಾಲೆಗೆ ಹೆಚ್ಚಿನಅನುದಾನವನ್ನುಕೊಡಿಸುವುದಾಗಿ ಭರವಸೆಇತ್ತರು.
ಹಿರಿಯರಾದ ನಿವೃತ ಶಿಕ್ಷಕ ಗೌತಮ ಕೃಷ್ಣ ಗಾಂವಕರ ಮಾತನಾಡಿಅವರತಂದೆಯವರು ಈ ಶಾಲೆಯಲ್ಲಿ ಶಿಕ್ಷಕರಾಗಿದ್ದ ದಿನಗಳನ್ನು ನೆನೆಸುತ್ತಾ ಅನೇಕ ವಿದ್ಯಾರ್ಥಿಗಳಿಗೆ ಬದಕನ್ನೂಕೊಟ್ಟ ಶಾಲೆ ಇದಾಗಿದೆ ಎಂದರು
ಈ ಸಂದರ್ಭದಲ್ಲಿ ಶಾಲಾ ಸಮಿತಿಯಅಧ್ಯಕ್ಷÀ ಸಾಯಿನಾಥ ಕವರಿ ಆನಂz ಕವರಿ, ಮಾನೇಶ್ವರಕವರಿ, ರಮೇಶ ನಾಯಕ ಸಗಡಗೇರಿ,ಅರುಣ ಕವರಿ,ಪಂಚಾಯತ ಸದಸೆ ್ಯಗೌರಿ ಗೌಡ,ಮುಖ್ಯಾಧ್ಯಾಪಕರಾದ ವಿಜಯ ಶೆಟ್ಟಿ ಉಪಸ್ಥಿತರಿದ್ದರು.
Leave a Comment